ಹಣಕ್ಕಾಗಿ ಅಪಹರಣ ನಾಟಕವಾಡಿ ಹೆತ್ತವರನ್ನೇ ಬೆಚ್ಚಿ ಬೀಳಿಸಿದ ಬಾಲಕ..!

Kannadaprabha News   | Asianet News
Published : Nov 09, 2020, 08:19 AM IST
ಹಣಕ್ಕಾಗಿ ಅಪಹರಣ ನಾಟಕವಾಡಿ ಹೆತ್ತವರನ್ನೇ ಬೆಚ್ಚಿ ಬೀಳಿಸಿದ ಬಾಲಕ..!

ಸಾರಾಂಶ

ತಿರುಪತಿ ಲಾಡ್ಜ್‌ವೊಂದರಿಂದ ವಿಡಿಯೋ ಮೆಸೆಜ್‌| 5 ಲಕ್ಷ ರು. ನೀಡುವಂತೆ ಬೇಡಿಕೆ| ಬಾಲಕನಿಂದ ಹೈಡ್ರಾಮಾ|ಬಾಲ​ಕನ್ನು ಸುರ​ಕ್ಷಿ​ತ​ವಾಗಿ ರಾಮ​ನ​ಗ​ರಕ್ಕೆ ಕರೆ​ತಂದು ಜಿಲ್ಲಾ ಪೊಲೀಸ್‌ ವರಿ​ಷ್ಠಾ​ಧಿ​ಕಾರಿ ಎದುರು ಹಾಜರು ಪಡಿ​ಸಿ​ದ ಪೊಲೀ​ಸರು| 

ರಾಮ​ನ​ಗ​ರ/ಕನಕಪುರ(ನ.09): ಬಾಲಕನೊಬ್ಬ ಹೆತ್ತ​ವ​ರಿಂದಲೇ ಹಣ ಪೀಕಲು ಅಪಹರಣದ ನಾಟಕವಾಡಿ ಪೋಲಿಸರ ಕೈಗೆ ಸಿಕ್ಕಬಿದ್ದಿ​ರುವ ಘಟನೆ ರಾಮನಗರ ಕನಕಪುರ ನಗರದಲ್ಲಿ ನಡೆ​ದಿ​ದೆ. ನಗ​ರದ ಮೇಗಳ ಬೀದಿ ವಾಸಿಯೊಬ್ಬರ ಪುತ್ರ ಅಪ​ಹ​ರ​ಣದ ನಾಟ​ಕ​ವಾ​ಡಿ​ದ​ವನು. ಇದೀಗ ಆತ​ನನ್ನು ಪೊಲೀ​ಸರು ವಶಕ್ಕೆ ಪಡೆದು ವಿಚಾ​ರ​ಣೆಗೆ ಒಳಪಡಿ​ಸಿ​ದ್ದಾ​ರೆ. ತಮಿ​ಳು​ನಾಡು ಮೂಲದ ಬಟ್ಟೆ ವ್ಯಾಪಾರಿ, ನಗ​ರದ ಬೂದಿ​ಕೆರೆ ರಸ್ತೆಯಲ್ಲಿ ಅಂಗಡಿ ಇಟ್ಟಿ​ದ್ದಾರೆ. ಇವರ ಪುತ್ರ 10ನೇ ತರ​ಗ​ತಿ​ಯಲ್ಲಿ ವ್ಯಾಸಂಗ ಮಾಡು​ತ್ತಿ​ದ್ದನು.

ತಿರುಪತಿಗೆ ಪ್ರಯಾಣ:

ನ.6ರಂದು ಸಂಜೆ ಬಾಲಕ ಜೆರಾಕ್ಸ್‌ ಗಾಗಿ ಮನೆ​ಯಿಂದ ದ್ವಿಚಕ್ರ ವಾಹ​ನ​ದಲ್ಲಿ ಹೊರ​ಟ್ಟಿ​ದ್ದಾನೆ. ಅಲ್ಲಿಂದ ಬೆಂಗಳೂರಿಗೆ ಬಂದಿದ್ದಾನೆ. ಬೆಂಗಳೂರಿನಿಂದ ತಿರು​ಪತಿ ಬಸ್‌ ಹಿಡಿದು ನ.7ರಂದು ತಿರು​ಪ​ತಿಗೆ ತೆರಳಿ ಲಾಡ್ಜ್‌ ವೊಂದ​ರಲ್ಲಿ ರೂಮ್‌ ಬಾಡಿಗೆ ಪಡೆದು ತಂಗಿ​ದ್ದಾನೆ.

ಮಗ ಮನೆಗೆ ಹಿಂದಿ​ರು​ಗ​ಲಿ​ಲ್ಲ​ವೆಂದು ಆತಂಕ​ಕೊಂಡ ಪೋಷ​ಕರು ಕನ​ಕ​ಪುರ ನಗರ ಪೊಲೀಸ್‌ ಠಾಣೆ​ಯಲ್ಲಿ ನ.7ರಂದು ಬೆಳಗ್ಗೆ ನಾಪತ್ತೆ ಪ್ರಕ​ರಣ ದಾಖ​ಲಿ​ಸಿ​ದ್ದಾರೆ. ಇದೇ ವೇಳೆಗೆ ಶೌಚ​ಗೃ​ಹ​ದಲ್ಲಿ ಬಾಲಕನನ ಕೈ, ಕಾಲು ಮತ್ತು ಬಾಯಿಗೆ ವೈರ್‌ ನಿಂದ ಕಟ್ಟಿ​ರುವ ಅರೆ ಬೆತ್ತ​ಲೆ​ ಸ್ಥಿತಿ​ಯಲ್ಲಿರುವ ವಿಡಿ​ಯೋ, ಫೋಟೋ​ಗಳು ಹಾಗೂ 5 ಲಕ್ಷ ರುಪಾಯಿ ನೀಡು​ವಂತೆ ಬೇಡಿಕೆ ಇಟ್ಟಿ​ರುವ ಸಂದೇಶ ಆತನ ಪಕ್ಕದ ಮನೆ ವ್ಯಕ್ತಿ ಮೊಬೈಲ್‌ಗೆ ಬಂದಿವೆ.

ಯುವತಿ ಕಿಡ್ನಾಪ್ ಮಾಡಲು ಬಂದ ಯುವಕ, ಪ್ಲಾನ್ ಫೇಲ್ ಆದಾಗ ಕೊಂದೇ ಬಿಟ್ಟ!

ಬಾಲಕನ ಪತ್ತೆಗೆ ವಿಶೇಷ ತಂಡ:

ಆ ವ್ಯಕ್ತಿ ಫೋಟೋ​ಗ​ಳನ್ನು ಪೋಷ​ಕ​ರಿಗೆ ತೋರಿ​ಸಿದ ನಂತರ ಪೊಲೀ​ಸರ ಗಮ​ನಕ್ಕೆ ತಂದಿ​ದ್ದಾರೆ. ಇದು ಮೇಲ್ನೋ​ಟಕ್ಕೆ ಬಾಲ​ಕ​ನನ್ನು ಅಪ​ಹಣ ಮಾಡಿ​ರುವ ಕೃತ್ಯ​ದಂತೆ ಕಂಡು ಬಂದಿತು. ಜಿಲ್ಲಾ ಪೊಲೀಸ್‌ ವರಿ​ಷ್ಠಾ​ಧಿ​ಕಾರಿ ಗಿರೀಶ್‌ ಅವರ ಮಾರ್ಗ​ಸೂ​ಚಿ​ಯಂತೆ ಅಪರ ಪೊಲೀಸ್‌ ವರಿ​ಷ್ಠಾ​ಧಿ​ಕಾರಿ ರಾಮ​ರಾ​ಜನ್‌ ಹಾಗೂ ವೃತ್ತ ನಿರೀ​ಕ್ಷಕ ಪ್ರಕಾಶ್‌ ಪ್ರಕ​ರ​ಣದ ಸಂಪೂರ್ಣ ಮಾಹಿತಿ ಕಲೆ ಹಾಕಿ​ದರು. ಆನಂತರ ಅಪರಾಧಿ​ಗಳ ಪತ್ತೆ​ಗಾಗಿ ಸಬ್‌ ಇನ್ಸ್‌ಪೆಕ್ಟರ್‌ ಅನಂತ​ರಾಮ್‌ ಹಾಗೂ ಲಕ್ಷ್ಮ​ಣ​ಗೌಡ ನೇತೃ​ತ್ವ​ದಲ್ಲಿ ವಿಶೇಷ ತಂಡ​ವನ್ನು ರಚಿ​ಸ​ಲಾ​ಯಿತು.

ಈ ತಂಡ ಮೊಬೈಲ್‌ಗೆ ಬಾಲ​ಕನ ಫೋಟೋ​ಗಳು ಎಲ್ಲಿಂದ ಬಂದಿವೆ ಎಂಬು​ದನ್ನು ಪರಿ​ಶೀ​ಲಿ​ಸಿ​ದಾಗ ತಿರು​ಪ​ತಿಯ ಸ್ಥಳ ಪತ್ತೆ​ಯಾ​ಗಿದೆ. ಇದರ ಜಾಡು ಹಿಡಿದು ಕಾರ್ಯಾ​ಚ​ರ​ಣೆಗೆ ಇಳಿದ ವಿಶೇಷ ತಂಡ ನೇರ​ವಾಗಿ ತಿರು​ಪ​ತಿಗೆ ತೆರ​ಳಿದೆ. ಮೊಬೈಲ್‌ ನೆಟ್‌ವರ್ಕ್ನ ಆಧಾ​ರದ ಮೇಲೆ ತಿರು​ಪ​ತಿಯ ಲಾಡ್ಜ್‌ ಮೇಲೆ ತಂಡ ದಾಳಿ ನಡೆ​ಸಿತು.

ಹಣಕ್ಕಾಗಿ ಕಿಡ್ನಾಪ್‌ ನಾಟಕ:

ಲಾಡ್ಜ್‌ ನ ಕೊಠ​ಡಿ​ಯಲ್ಲಿ ಬಾಲಕ ಒಬ್ಬನೇ ಇರು​ವು​ದನ್ನು ಕಂಡು ಪೊಲೀ​ಸರು ಒಂದು ಕ್ಷಣ ಆಶ್ಚ​ರ್ಯ​ಗೊಂಡಿ​ದ್ದಾರೆ. ಅಲ್ಲಿಯೇ ಆತ​ನನ್ನು ವಿಚಾ​ರಣೆ ನಡೆ​ಸಿ​ದಾಗ ಪೋಷ​ಕ​ರಿಂದ ಹಣ ಪಡೆ​ಯುವ ಸಲು​ವಾಗಿ ಸ್ನೇಹಿ​ತರ ಜತೆ​ಗೂ​ಡಿ ಅಪ​ಹ​ರ​ಣದ ನಾಟ​ಕ​ವಾ​ಡಿ​ದ್ದಾಗಿ ತಪ್ಪೋ​ಪ್ಪಿ​ಕೊಂಡಿ​ದ್ದಾ​ನೆ. ಇದು ಪೊಲೀ​ಸರನ್ನು ಮಾತ್ರ​ವ​ಲ್ಲದೆ ಅವನ ಪೋಷ​ಕರು ಬೆಚ್ಚಿ ಬೀಳು​ವಂತೆ ಮಾಡಿದೆ. ಪೊಲೀ​ಸರು ಬಾಲ​ಕನ್ನು ಸುರ​ಕ್ಷಿ​ತ​ವಾಗಿ ರಾಮ​ನ​ಗ​ರಕ್ಕೆ ಕರೆ​ತಂದು ಜಿಲ್ಲಾ ಪೊಲೀಸ್‌ ವರಿ​ಷ್ಠಾ​ಧಿ​ಕಾರಿ ಗಿರೀಶ್‌ ಅವರ ಎದುರು ಹಾಜ​ರು ಪಡಿ​ಸಿ​ದರು. ಆನಂತರ ಹೆಚ್ಚಿನ ವಿಚಾ​ರ​ಣೆ​ಗಾಗಿ ಕನ​ಕ​ಪುರ ನಗರ ಪೊಲೀಸ್‌ ಠಾಣೆಗೆ ಕರೆ​ದೊ​ಯ್ದಿ​ದ್ದಾ​ರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ