ನೀನು ಸುಂದರಿಯಾಗಿಲ್ಲ, ನಿರುದ್ಯೋಗಿ, ವರದಕ್ಷಿಣೆಯೂ ಇಲ್ಲ: ಕಿರುಕುಳದಿಂದ ನೇಣಿಗೆ ಶರಣಾದ ವಿವಾಹಿತೆ!

Published : Feb 04, 2025, 12:24 PM ISTUpdated : Feb 04, 2025, 12:26 PM IST
ನೀನು ಸುಂದರಿಯಾಗಿಲ್ಲ, ನಿರುದ್ಯೋಗಿ, ವರದಕ್ಷಿಣೆಯೂ ಇಲ್ಲ: ಕಿರುಕುಳದಿಂದ ನೇಣಿಗೆ ಶರಣಾದ ವಿವಾಹಿತೆ!

ಸಾರಾಂಶ

ಯುವತಿಯೊಬ್ಬಳು ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯಲ್ಲಿ ಗಂಡ ಪ್ರಭಿನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ವರದಕ್ಷಿಣೆ ಕೇಳಿಲ್ಲ ಅಥವಾ ಪಡೆದಿಲ್ಲ ಎಂದು ಪ್ರಭಿನ್ ಕುಟುಂಬ ಹೇಳಿದೆ.

ತಿರುವನಂತಪುರ: ಕೇರಳದ ಮಲಪ್ಪುರಂನಲ್ಲಿ ಮಹಿಳೆಯೊಬ್ಬಳು  ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯಲ್ಲಿ ಗಂಡ ಪ್ರಭಿನ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಸಾವಿನ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮಂಜೇರಿ ಪೊಲೀಸರು, ಮಹಿಳೆಯ ಗಂಡ ಪ್ರಭಿನ್‌ನನ್ನು ಬಂಧಿಸಿದ್ದಾರೆ. ಗುರುವಾರ ಪೂಕ್ಕೋಟ್ಟುಂಪಾಡಂ ಮೂಲದ ವಿಷ್ಣುಜಾ ಶವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 2023ರ ಮೇ ತಿಂಗಳಲ್ಲಿ ವಿಷ್ಣುಜಾ ಮತ್ತು ಎಳಂಕೂರು ಮೂಲದ ಪ್ರಭಿನ್‌ರ ವಿವಾಹ ನೆರವೇರಿತ್ತು. ಗಂಡನ ಕಿರುಕುಳದಿಂದಲೇ ಮಗಳ ಸಾವು ಆಗಿದೆ ಎಂದು ವಿಷ್ಣುಜಾ ಕುಟುಂಬ ಗಂಭೀರ ಆರೋಪವನ್ನು ಮಾಡಿದೆ. ಆದರೆ ಈ ಆರೋಪವನ್ನು ಪ್ರಭಿನ್ ಕುಟುಂಬ ನಿರಾಕರಿಸಿದೆ. ಪ್ರಭಿನ್ ಮತ್ತು ವಿಷ್ಣುಜಾ ನಡುವೆ ಕೆಲವು ಭಿನ್ನಾಭಿಪ್ರಾಯಗಳಿದ್ದವು. ಇದಕ್ಕೆ ಕಾರಣ ತಿಳಿದಿಲ್ಲ ಎಂದು ಪ್ರಭಿನ್ ಕುಟುಂಬ ಹೇಳಿದೆ. ವರದಕ್ಷಿಣೆ ಕೇಳಿಲ್ಲ ಅಥವಾ ಪಡೆದಿಲ್ಲ ಎಂದು ಪ್ರಭಿನ್ ಕುಟುಂಬಸ್ಥರು ಆರೋಪಿಸಿದ್ದಾರೆ. 

ಗಂಡನ ಮನೆಯಲ್ಲಿ ಮಗಳಿಗೆ ತೀವ್ರ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು. ಮದುವೆಯಾದ ಕೆಲವು ವಾರಗಳಲ್ಲೇ ಪ್ರಭಿನ್ ಕಿರುಕುಳ ನೀಡಲು ಪ್ರಾರಂಭಿಸಿದ. ಕೆಲಸವಿಲ್ಲದ ಕಾರಣಕ್ಕೆ ಕಿರುಕುಳ ನೀಡಲಾಗುತ್ತಿತ್ತು. ತಂದೆ-ತಾಯಿಗೆ ತೊಂದರೆ ಕೊಡಬಾರದು ಎಂದು ಮಗಳು ಎಲ್ಲವನ್ನೂ ಮುಚ್ಚಿಟ್ಟಳು. ಮಗಳನ್ನು ಬೈಯ್ಯುವ ವಾಯ್ಸ್ ನೋಟ್‌ಗಳು ನನ್ನ ಬಳಿ ಇವೆ. ದೈಹಿಕವಾಗಿಯೂ ಮಗಳಿಗೆ ಕಿರುಕುಳ ನೀಡಲಾಗುತ್ತಿತ್ತು, ಮಗಳ ದೇಹದ ಮೇಲಿನ ಗಾಯಗಳ ಬಗ್ಗೆ ಆಕೆಯ ಗೆಳತಿ ಹೇಳಿದ್ದಳು ಎಂದು ವಿಷ್ಣುಜಾಳ ತಂದೆ ಏಷ್ಯಾನೆಟ್ ನ್ಯೂಸ್‌ಗೆ ತಿಳಿಸಿದ್ದಾರೆ. 

ಇದನ್ನೂ ಓದಿ: ಮದುವೆಯಾಗದ ಪುರುಷರೇ ಹುಷಾರ್; ಮದುವೆ ಹೆಸರಿನಲ್ಲಿ ಈ ವಂಚಕರ ಗ್ಯಾಂಗ್ ಬಲೆಗೆ ಬೀಳದಿರಿ!

ಸೌಂದರ್ಯ ಕಡಿಮೆ, ಕೆಲಸವಿಲ್ಲ, ವರದಕ್ಷಿಣೆ ಕಡಿಮೆ ಎಂದು ಹೇಳಿ ವಿಷ್ಣುಜಾಳಿಗೆ ಗಂಡ ಕಿರುಕುಳ ನೀಡುತ್ತಿದ್ದ ಎಂದು ಕುಟುಂಬ ಆರೋಪಿಸಿದೆ. ಇದಕ್ಕೆಲ್ಲ ಗಂಡನ ಸಂಬಂಧಿಕರು ಸಹಕರಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಗಂಡ ಮತ್ತು ಆತನ ಕುಟುಂಬದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯುವತಿಯ ಕುಟುಂಬ ಒತ್ತಾಯಿಸಿತ್ತು. ಇದರ ಬೆನ್ನಲ್ಲೇ ಮಂಜೇರಿ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿದ್ದಾರೆ. 

ಇದನ್ನೂ ಓದಿ: ಪತಿಯ ಕಿಡ್ನಿ ಮಾರಿ, ಲವರ್​ ಜೊತೆ ಪರಾರಿಯಾದ ಕಿರಾತಕಿ! ಮಗಳ ಹೆಸರಲ್ಲಿ ಗಂಡನ ಬಲಿ...

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ