ಮಂಡ್ಯ: ಅನಾರೋಗ್ಯದಿಂದ ಬೇಸತ್ತು ವಿಧವೆ ನೇಣು ಬಿಗಿದು ಆತ್ಮಹತ್ಯೆ

By Kannadaprabha NewsFirst Published Jul 22, 2023, 9:17 PM IST
Highlights

ಕಳೆದ ಒಂದು ವಾರದ ಹಿಂದೆ ತಮ್ಮ ಮನೆಯಲ್ಲಿ ನೇಣು ಬಿಗಿದು ಲಕ್ಷ್ಮಿದೇವಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಶುಕ್ರವಾರ ಅಸ್ತಿಪಂಚರ ಪತ್ತೆಯಾಗಿದೆ. ಹಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಲಕ್ಷ್ಮಿದೇವಿ ನನ್ನನ್ನು ನೋಡಿಕೊಳ್ಳಲು ಯಾರು ಇಲ್ಲ ಎಂದು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ ಪೊಲೀಸರು 

ಮದ್ದೂರು(ಜು.22):  ಅನಾರೋಗ್ಯದಿಂದ ಬೇಸತ್ತ ವಿಧವೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಶಿವಪುರದ ಡಾ.ರಾಜ್‌ಕುಮಾರ್‌ ಬಡಾವಣೆಯಲ್ಲಿ ನಡೆದಿದೆ. ಬಡಾವಣೆಯ ಲೇ.ಶಿವಲಿಂಗಯ್ಯನ ಪತ್ನಿ ಲಕ್ಷ್ಮಿದೇವಿ(55) ಆತ್ಮಹತ್ಯೆ ಮಾಡಿಕೊಂಡವರು.

ಕಳೆದ ಒಂದು ವಾರದ ಹಿಂದೆ ತಮ್ಮ ಮನೆಯಲ್ಲಿ ನೇಣು ಬಿಗಿದು ಲಕ್ಷ್ಮಿದೇವಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಶುಕ್ರವಾರ ಅಸ್ತಿಪಂಚರ ಪತ್ತೆಯಾಗಿದೆ. ಹಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಲಕ್ಷ್ಮಿದೇವಿ ನನ್ನನ್ನು ನೋಡಿಕೊಳ್ಳಲು ಯಾರು ಇಲ್ಲ ಎಂದು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. 

Latest Videos

ಪ್ರಿಯತಮೆ ಸಾವಿನ ವಿಚಾರಣೆಗೆ ಬಂದು ಠಾಣೆ ಹಿಂಬದಿ ಆತ್ಮಹತ್ಯೆ

ಈಕೆ ಮಗನ ಸ್ನೇಹಿತ ಬಡಾವಣೆಯ ಮನೆಗೆ ಬಂದು ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

click me!