ಬೆಂಗಳೂರು: ‘ವೋಗೋ’ ಕಂಪನಿ ಬೈಕ್‌ ಕಳವು ಮಾಡುತ್ತಿದ್ದ ಮಾಜಿ ನೌಕರನ ಸೆರೆ

Published : Dec 18, 2022, 02:00 PM IST
ಬೆಂಗಳೂರು: ‘ವೋಗೋ’ ಕಂಪನಿ ಬೈಕ್‌ ಕಳವು ಮಾಡುತ್ತಿದ್ದ ಮಾಜಿ ನೌಕರನ ಸೆರೆ

ಸಾರಾಂಶ

ಆ್ಯಪ್‌ ಆಧಾರಿತ ‘ಬೈಕ್‌ ಟ್ಯಾಕ್ಸಿ’ ಸೇವೆ ಕಲ್ಪಿಸುವ ವೋಗೋ ಕಂಪನಿಯ ಸ್ಕೂಟರ್‌ಗಳನ್ನು ಕಳವು ಮಾಡುತ್ತಿದ್ದ ಆ ಕಂಪನಿಯ ಮಾಜಿ ನೌಕರ ಸೇರಿದಂತೆ ಇಬ್ಬರ ಬಂಧನ  

ಬೆಂಗಳೂರು(ಡಿ.18):  ಆ್ಯಪ್‌ ಆಧಾರಿತ ‘ಬೈಕ್‌ ಟ್ಯಾಕ್ಸಿ’ ಸೇವೆ ಕಲ್ಪಿಸುವ ವೋಗೋ ಕಂಪನಿಯ ಸ್ಕೂಟರ್‌ಗಳನ್ನು ಕಳವು ಮಾಡುತ್ತಿದ್ದ ಆ ಕಂಪನಿಯ ಮಾಜಿ ನೌಕರ ಸೇರಿದಂತೆ ಇಬ್ಬರನ್ನು ಸದ್ದುಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನೆಲಮಂಗಲ ತಾಲೂಕಿನ ಮಾದನಾಯಕನಹಳ್ಳಿಯ ಭೀಮೇಶ್ವರ ಕಾಲೋನಿಯ ಟಿ.ಎಸ್‌.ವಿನಯ್‌ ಹಾಗೂ ತುಮಕೂರಿನ ಹೆಗ್ಗರೆ ನಿವಾಸಿ ಟಿ.ಕೆ.ನಂದನ್‌ ಬಂಧಿತರಾಗಿದ್ದು, ಆರೋಪಿಗಳಿಂದ 55 ಲಕ್ಷ ರು ಮೌಲ್ಯದ 61 ಸ್ಕೂಟರ್‌ಗಳನ್ನು ಜಪ್ತಿ ಮಾಡಲಾಗಿದೆ. ಬಿಟಿಎಂ ಲೇಔಟ್‌ನ 1ನೇ ಹಂತದ ಬಿಬಿಎಂಪಿ ಉದ್ಯಾನ ಬಳಿ ನಿಲ್ಲಿಸಲಾಗಿದ್ದ ವೋಗೋ ಕಂಪನಿಯ ಸ್ಕೂಟರ್‌ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.

ಮನೆ ಕಳ್ಳತನಕ್ಕೆ ಬಂದವನಿಗೆ ಗುಂಡು ಹಾರಿಸಿದ ಮಾಲೀಕ

ಹಣ ಸಂಪಾದನೆಗೆ ಕಳ್ಳರಾದ್ರು !

ವೋಗೋ ಕಂಪನಿಯಲ್ಲಿ ಮೆಕ್ಯಾನಿಕ್‌ ಆಗಿದ್ದ ವಿನಯ್‌, ಎಂಟು ತಿಂಗಳ ಹಿಂದೆ ಅಲ್ಲಿ ಕೆಲಸ ತೊರೆದಿದ್ದ. ಓಗೋ ಕಂಪನಿಯಲ್ಲಿ ಕೆಲಸ ಮಾಡುವಾಗ ಆ ಕಂಪನಿಯ ಸ್ಕೂಟರ್‌ಗಳನ್ನು ನಿಲ್ಲಿಸುವ ಸ್ಥಳಗಳ ಬಗ್ಗೆ ಆತನಿಗೆ ತಿಳಿದಿತ್ತು. ಬಳಿಕ ಸುಲಭವಾಗಿ ಹಣ ಸಂಪಾದನೆಗೆ ವೋಗೋ ಸ್ಕೂಟರ್‌ಗಳನ್ನು ಕಳವು ಮಾಡಲು ವಿನಯ್‌ ಸಂಚು ರೂಪಿಸಿದ್ದ. ಇದಕ್ಕೆ ನಂದನ್‌ ಸಾಥ್‌ ಕೊಟ್ಟಿದ್ದಾನೆ. ಅಂತೆಯೇ ಓಗೋ ಕಂಪನಿಯ ವಾಹನಗಳನ್ನು ನಿಲ್ಲಿಸುವ ಪಾಯಿಂಟ್‌ಗಳಿಗೆ ತೆರಳುತ್ತಿದ್ದ ವಿನಯ್‌, ಆ ವೇಳೆ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು ವಾಹನಗಳ ಜಿಪಿಎಸ್‌ ಸಂಪರ್ಕವನ್ನು ಕಡಿತಗೊಳಿಸುತ್ತಿದ್ದ. ಬಳಿಕ ಸ್ಕೂಟರ್‌ಗಳನ್ನು ಡೈರೆಕ್ಟ್ ಮಾಡಿಕೊಂಡು ಸ್ಟಾರ್ಟ್‌ ಮಾಡಿ ಓಡಿಸಿಕೊಂಡು ಹೋಗುತ್ತಿದ್ದ. ಈ ಕದ್ದ ಸ್ಕೂಟರ್‌ಗಳನ್ನು ತನ್ನ ಸಹಚರ ನಂದನ್‌ ಮೂಲಕ ವಿಲೇವಾರಿ ಮಾಡಿಸುತ್ತಿದ್ದ. ಓಗೋ ಕಂಪನಿಯ ಹರಾಜಿನಲ್ಲಿ ಸ್ಕೂಟರ್‌ ಖರೀದಿಸಿರುವುದಾಗಿ ಸುಳ್ಳು ಹೇಳಿ ಜನರಿಗೆ ವಾಹನಗಳನ್ನು ಮಾರುತ್ತಿದ್ದರು. ಇದಕ್ಕಾಗಿ ನಕಲಿ ದಾಖಲೆಗಳನ್ನು ಕೂಡಾ ಸೃಷ್ಟಿಸಿದ್ದರು. ಅಲ್ಲದೆ ಆ್ಯಪ್‌ ಆಧಾರಿತ ಬೈಕ್‌ ಟ್ಯಾಕ್ಸಿ ಸೇವೆಗೆ ಇಬ್ಬರು ತಿಳಿದಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!