ಲವ್‌ಜಿಹಾದ್ ಕಾನೂನಿನಡಿ ಉತ್ತರ ಪ್ರದೇಶದಲ್ಲಿ ಮೊದಲ ಬಂಧನ

Published : Dec 03, 2020, 03:36 PM ISTUpdated : Dec 03, 2020, 03:45 PM IST
ಲವ್‌ಜಿಹಾದ್ ಕಾನೂನಿನಡಿ ಉತ್ತರ ಪ್ರದೇಶದಲ್ಲಿ ಮೊದಲ ಬಂಧನ

ಸಾರಾಂಶ

ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ಪ್ರಕರಣ/ ಬಲವಂತದ ಮತಾಂತರ ಆರೋಪದ ಮೇಲೆ ಮೊದಲ ಬಂಧನ/ ಸುಗ್ರೀವಾಜ್ಙೆ ಮೂಲಕ ಕಾನೂನು ಪಾಸ್ ಮಾಡಿದ್ದ ಯೋಗಿ ಸರ್ಕಾರ

ಲಕ್ನೋ/  ಬರೇಲಿ(ಡಿ. 03) ಮದುವೆಯಾಗುವುದಕ್ಕೆ ಮತಾಂತರ ವಿಚಾರದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದ ಉತ್ತರ ಪ್ರದೇಶ ಸರ್ಕಾರ ಸುಗ್ರೀವಾಜ್ಞೆ ಮುಖೇನ ಕಾನೂನು ಪಾಸ್ ಮಾಡಿತ್ತು.   ಇದೀಗ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪದಲ್ಲಿ  ಮೊಟ್ಟ ಮೊದಲನೆ ವ್ಯಕ್ತಿಯ ಬಂಧನವಾಗಿದೆ.

ಜಾತಿ ಪರಿವರ್ತನೆ ನಿಷೇಧ ಕಾಯ್ದೆಯಡಿ ಬಾಲಕಿಯ ತಂದೆ ಸಲ್ಲಿಸಿದ ದೂರಿನ ಆಧಾರದಲ್ಲಿ ಪೊಲೀಸರು ಹೊಸ ಕಾಯ್ದೆ ಅನುಸಾರ ಪ್ರಕರಣ ದಾಖಲಿಸಿಕೊಂಡಿದ್ದರು.  ಆರೋಪಿ ಓವಿಯಾಸ್ ಅಹಮದ್(21)  ಎಂಬಾತನ ಬಂಧನವಾಗಿದೆ.  ಮದುವೆಯಾಘುವುಕ್ಕೋಸ್ಕರ ಹಿಂದು ಯುವತಿಗೆ ಇಸ್ಲಾಂಗೆ ಮತಾಂತರ ಆಗು ಎಂದು ಒತ್ತಡ ಹೇರುತ್ತಿದ್ದ.

ಲವ್ ಜಿಹಾದ್ ಮಾಡಿದ್ರೆ ಏನ್ ಶಿಕ್ಷೆ; ಉತ್ತರ ಪ್ರದೇಶ ಸರ್ಕಾರ ಸುಗ್ರೀವಾಜ್ಞೆ

ಎಫ್ ಐಆರ್ ದಾಖಲಾದಾಗಿನಿಂದ ಆರೋಪಿ ನಾಪತ್ತೆಯಾಗಿದ್ದ. ಹಲವು ಕಡೆಗಳಲ್ಲಿ ದಾಳಿ ಮಾಡಿ ಅಂತಿಮವಾಗಿ ಸೆರೆಸಿಕ್ಕಿದ್ದಾನೆ. ಉತ್ತರ ಪ್ರದೇಶ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಹೊಸ ಕಾನೂನಿನ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಓವಿಯಾಸ್ ಅಹಮದ್(21) ಗೆ ಸ್ಥಳೀಯ ಮಹಿಳೆಯೊಂದಿಗೆ ಸಂಬಂಧ ಇತ್ತು. ಕಳೆದ ವರ್ಷ ಇಬ್ಬರು ಒಟ್ಟಿಗೆ ಪರಾರಿಯಾಗಿದ್ದರು.  ಮಹಿಳೆ ಕುಟುಂಬದವರು ಈತನ ಮೇಲೆ ಕಿಡ್ನಾಪ್ ದೂರು ನೀಡಿದ್ದರೂ ಮಹಿಳೆ ಅಲ್ಲಗಳೆದಿದ್ದರು. ಹಾಗಾಗಿ ಅಹಮದ್ ಬಚಾವ್ ಆಗಿದ್ದ. ನಂತರ ಮಹಿಳೆಯನ್ನು ಬೇರೆಯವರ ಜತೆ ಮದುವೆ ಮಾಡಲಾಗಿತ್ತು.

ಮದುವೆ ವಿಚಾರ ನಮಗೆ ಗೊತ್ತಾದ ದಿನದಿಂದ ಓವಿಯಾಸ್ ಅಹಮದ್(21)   ಕುಟುಂಬಕ್ಕೆ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದ. ನಮ್ಮ ಕುಟುಂಬದ ಹೆಣ್ಣು ಮಗಳನ್ನು ಇಸ್ಲಾಂಗೆ ಮತಾಂತರ ಆಗಬೇಕು ಎಂದು ಒತ್ತಡ ಹೇರುತ್ತಿದ್ದ ಎಂದು ಯುವತಿಯ ತಂದೆ ದೂರಿನಲ್ಲಿ ಹೇಳಿದ್ದರು`.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ