ಆಕ್ಟಿವೇ ಮಾಡದ ಹೊಸ ಕ್ರೆಡಿಟ್ ಕಾರ್ಡ್‌ ಬಳಸಿ 1.08 ಲಕ್ಷ ರು. ದೋಚಿದ ಸೈಬರ್ ಖದೀಮರು!

Kannadaprabha News   | Kannada Prabha
Published : Mar 15, 2026, 04:26 AM IST
Unactivated Credit Card Hacked Cyber Frauds Siphon Off Rs1 08 Lakh

ಸಾರಾಂಶ

ಬೆಂಗಳೂರಿನಲ್ಲಿ ಕನ್ನಡಪ್ರಭ ಸಿಬ್ಬಂದಿಯೊಬ್ಬರು ತಮ್ಮ ನಿಷ್ಕ್ರಿಯ ಹಾಗೂ ಆಕ್ಟಿವ್ ಮಾಡದ ಹೊಸ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೂಲಕ ₹1.07 ಲಕ್ಷ ಕಳೆದುಕೊಂಡಿದ್ದಾರೆ. ಸ್ವಿಗ್ಗಿಗೆ ಹಣ ವರ್ಗಾವಣೆಯಾಗಿದ್ದು, ಕ್ರೆಡಿಟ್ ಕಾರ್ಡ್ ಬಿಲ್ ಬಂದಾಗಲೇ ಈ ಸೈಬರ್ ವಂಚನೆ ಬೆಳಕಿಗೆ ಬಂದಿದೆ. 

ಬೆಂಗಳೂರು (ಮಾ.15) ಕನ್ನಡಪ್ರಭ ಸಿಬ್ಬಂದಿಯೊಬ್ಬರ ಡಿಆಕ್ಟಿವ್ (ನಿಷ್ಕ್ರಿಯತೆ) ಹೊಸ ಕ್ರೆಡಿಟ್ ಕಾರ್ಡ್‌ ಅನ್ನು ಬಳಸಿ 1.07 ಲಕ್ಷ ರು. ಹಣವನ್ನು ಸೈಬರ್ ವಂಚಕರು ದೋಚಿರುವ ಘಟನೆ ನಡೆದಿದೆ.

ಕನ್ನಡಪ್ರಭದ ಹಿರಿಯ ವಿನ್ಯಾಸಕಾರ ಕೆ.ಟಿ. ಸುರೇಶ್ ಕುಮಾರ್ ಹಣ ಕಳೆದುಕೊಂಡಿದ್ದು, ಈ ಬಗ್ಗೆ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ. ಸುರೇಶ್ ಅವರ ಕ್ರೆಡಿಟ್ ಕಾರ್ಡ್‌ ಬಳಸಿ ಹಣ ದೋಚಿದ ಕೃತ್ಯ ನಡೆದು ಎರಡು ದಿನಗಳ ಬಳಿಕ ಬ್ಯಾಂಕ್‌ನಿಂದ ಬಿಲ್ ಬಂದಾಗಲೇ ಈ ವಂಚನೆ ಗೊತ್ತಾಗಿದೆ.

ಎಸ್‌ಬಿಐ ಬ್ಯಾಂಕ್‌ನ ವೀಸಾ ಕ್ರೆಡಿಟ್ ಕಾರ್ಡ್‌ಗೆ ಕೋರಿಕೆ ಸಲ್ಲಿಸಿದ್ದು, ಮಾ.3 ರಂದು ನನ್ನ ವಿಳಾಸಕ್ಕೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಂದಿತ್ತು. ಆದರೆ ಕೇಳಿದ್ದು ವೀಸಾ ಕಾರ್ಡ್ ಕೈಗೆ ಬಂದಿದ್ದು ಮಾಸ್ಟರ್ ಕಾರ್ಡ್ ಆಗಿತ್ತು. ಈ ಲೋಪದ ಬಗ್ಗೆ ಪ್ರಶ್ನಿಸಿ ಬ್ಯಾಂಕ್‌ಗೆ ಇ.ಮೇಲ್ ಮೂಲಕ ಕಾರ್ಡ್ ಬದಲಾವಣೆಗೆ ಕೋರಿಕೆ ಸಲ್ಲಿಸಿದ್ದೆ. ಅಲ್ಲದೆ ಹೊಸ ಕ್ರೆಡಿಟ್ ಕಾರ್ಡ್ ಅನ್ನು ಆಕ್ಟಿವ್ ಸಹ ಮಾಡಿರಲಿಲ್ಲ. ಮಾ.9 ರಂದು ಹೆಸರು ಮತ್ತು ಅಡ್ರೆಸ್‌ ಅಪ್ಡೆಟ್ ಮಾಡುವುದಾಗಿ ಬ್ಯಾಂಕ್‌ನಿಂದ ಮರು ಉತ್ತರ ಬಂತು.

ಆದರೆ ಮಾ.11 ರಂದು ಮಧ್ಯಾಹ್ನ ಮೊದಲು 36,231 ರು, ನಂತರ 36,135 ರು. ಹೀಗೆ ಹಂತ ಹಂತವಾಗಿ ಒಟ್ಟು 1.07 ಲಕ್ಷ ರು. ಹಣವು ಸ್ವಿಗ್ಗಿ ಲಿಮಿಟೆಡ್‌ಗೆ ವರ್ಗಾವಣೆಯಾಗಿದೆ. ಇದಾದ ಎರಡು ದಿನಗಳ ಬಳಿಕ ಈ ಹಣ ವರ್ಗಾವಣೆ ಸಂಬಂಧ ಕ್ರೆಡಿಟ್ ಕಾರ್ಡ್ ಬಿಲ್ ಬಂದಾಗ ನನಗೆ ಆಘಾತವಾಯಿತು ಎಂದು ದೂರಿನಲ್ಲಿ ಸುರೇಶ್ ವಿವರಿಸಿದ್ದಾರೆ.

ನಾನು ಕ್ರೆಡಿಟ್‌ ಕಾರ್ಡ್ ಅನ್ನು ಆಕ್ಟಿವ್ ಮಾಡದೆ ಇದ್ದರೂ ಆ ಕಾರ್ಡ್ ಬಳಸಿ ಕಿಡಿಗೇಡಿಗಳು ಹಣ ದೋಚಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಪೊಲೀಸರಿಗೆ ಅವರು ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ರಸ್ತೆಬದಿ ಕೇಳಿದ ಆ ಕಂದನ ಕೂಗು! ಆಗಷ್ಟೇ ಹುಟ್ಟಿದ ಹೆಣ್ಣುಮಗುವನ್ನು ರೋಡಲ್ಲಿ ಬಿಟ್ಟು ಹೋದ ಪೋಷಕರು!
The UP Story: ಅಪ್ರಾಪ್ತ ತಂಗಿಯರು ಕರೆತಂದ ಹಿಂದೂ ಸ್ನೇಹಿತೆಯ ರೇ* ಮಾಡಿ, ಈತ ಏನು ಹೇಳ್ತಿದ್ದಾನೆ ಕೇಳಿ