ಬೆಂಗಳೂರು: 57 ಲಕ್ಷ ಮೌಲ್ಯದ ವಾಚ್‌ಗಳನ್ನು ದೋಚಿದ್ದವರು ಬಲೆಗೆ

Published : Jan 25, 2023, 11:19 AM IST
ಬೆಂಗಳೂರು: 57 ಲಕ್ಷ ಮೌಲ್ಯದ ವಾಚ್‌ಗಳನ್ನು ದೋಚಿದ್ದವರು ಬಲೆಗೆ

ಸಾರಾಂಶ

ಶಾಮಣ್ಣ ಗಾರ್ಡನ್‌ನ ಜಮೀರ್‌ ಅಹಮ್ಮದ್‌ ಹಾಗೂ ಗಂಗೊಂಡನಹಳ್ಳಿಯ ಸೈಯದ್‌ ಶಾಹೀದ್‌ ಬಂಧಿತರಾಗಿದ್ದು, ಆರೋಪಿಗಳಿಂದ 57 ಲಕ್ಷ ರು. ಮೌಲ್ಯದ ಟೈಟಾನ್‌ ಕಂಪನಿಯ 1282 ವಾಚ್‌ಗಳನ್ನು ಜಪ್ತಿ.

ಬೆಂಗಳೂರು(ಜ.25):  ಇತ್ತೀಚಿಗೆ ಜವರೇಗೌಡನದೊಡ್ಡಿ ರಸ್ತೆಯ ಮಹಾರಾಜ ಬಾರ್‌ ಬಳಿ ಪ್ರತಿಷ್ಠಿತ ಖಾಸಗಿ ಕಂಪನಿಯ ವಾಚ್‌ಗಳನ್ನು ಸಾಗಿಸುತ್ತಿದ್ದ ಟೆಂಪೋವನ್ನು ಅಡ್ಡಗಟ್ಟಿ 57 ಲಕ್ಷ ರು. ಮೌಲ್ಯದ ವಾಚ್‌ಗಳನ್ನು ದೋಚಿದ್ದ ಇಬ್ಬರು ಕಿಡಿಗೇಡಿಗಳನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಾಮಣ್ಣ ಗಾರ್ಡನ್‌ನ ಜಮೀರ್‌ ಅಹಮ್ಮದ್‌ ಹಾಗೂ ಗಂಗೊಂಡನಹಳ್ಳಿಯ ಸೈಯದ್‌ ಶಾಹೀದ್‌ ಬಂಧಿತರಾಗಿದ್ದು, ಆರೋಪಿಗಳಿಂದ 57 ಲಕ್ಷ ರು. ಮೌಲ್ಯದ ಟೈಟಾನ್‌ ಕಂಪನಿಯ 1282 ವಾಚ್‌ಗಳನ್ನು ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಇನ್ನುಳಿದ ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ. ಜ.15 ರಂದು ರಾತ್ರಿ 10.30ರಲ್ಲಿ ಜವರೇಗೌಡನದೊಡ್ಡಿ ಸಮೀಪದ ಕೊರಿಯರ್‌ ಕಂಪನಿಯ ವೇರ್‌ಹೌಸ್‌ನ ಕೆಲಸಗಾರ ಜಾನ್‌ ಹಾಗೂ ಬಿಸಾಲ್‌ ಅವರು, ನಾಯಂಡಹಳ್ಳಿ ಬಳಿ ಸಿಗರೇಟ್‌ ಖರೀದಿಸಿ ಮರಳುವಾಗ ಈ ಕೃತ್ಯ ನಡೆದಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Bengaluru: ಕಾಲೇಜಿನ ಲೇಡಿಸ್ ಟಾಯ್ಲೆಟ್‌ಗೆ ನುಗ್ಗಿದ್ದ ಆರೋಪಿ ಬಂಧನ

ಕೃತ್ಯದ ವಿವರ: 

ಆರ್‌.ಆರ್‌.ನಗರದ ಜವರೇಗೌಡ ನಗರದಲ್ಲಿ ಜೈದೀಪ್‌ ಎಂಟರ್‌ ಪ್ರೈಸಸ್‌ ಹೆಸರಿನ ಕೊರಿಯರ್‌ ಆಫೀಸ್‌ನ ವೇರ್‌ಹೌಸ್‌ ಇದ್ದು, ಈ ವೇರ್‌ ಹೌಸ್‌ಗೆ ಜ.15 ರಂದು ಕೋಲಾರ ಜಿಲ್ಲೆ ಮಾಲೂರು ತಾಲೂಕಿನಲ್ಲಿದ್ದ ಫ್ಲಿಪ್‌ಕಾರ್ಚ್‌ ಕಂಪನಿ ಮೂಲಕ ಟೈಟಾನ್‌ ಕಂಪನಿಯ 57 ಲಕ್ಷ ರು. ಮೌಲ್ಯದ 1282 ವಾಚ್‌ಗಳಿದ್ದ 23 ಬಾಕ್ಸ್‌ಗಳನ್ನು ಟೆಂಪೋದಲ್ಲಿ ತರಲಾಗಿತ್ತು. ಆದರೆ ವೇರ್‌ಹೌಸ್‌ನಲ್ಲಿ ಕೆಲಸಗಾರದ ಜಾನ್‌ ಮತ್ತು ಬಿಸಾಲ್‌, ಅದೇ ದಿನ ರಾತ್ರಿ 10.30ರಲ್ಲಿ ಸಿಗರೇಟ್‌ ತರಲೆಂದು ವಾಚ್‌ಗಳನ್ನು ತುಂಬಿಡಲಾಗಿದ್ದ ವಾಹನವನ್ನು ತೆಗೆದುಕೊಂಡು ನಾಯಂಡಹಳ್ಳಿಗೆ ಹೋಗಿದ್ದರು. ಅಲ್ಲಿಂದ ಮರಳುವಾಗ ಜವರೇಗೌಡದೊಡ್ಡಿ ರಸ್ತೆಯ ಮಹಾರಾಜ ಬಾರ್‌ ಬಳಿ ಕಾರು ಮತ್ತು 3 ದ್ವಿಚಕ್ರ ವಾಹನಗಳಲ್ಲಿ ಐದಾರು ಬಂದಿ ಅಪರಿಚಿತರು, ಟೆಂಪೋವನ್ನು ಅಡ್ಡಗಟ್ಟಿಜಾನ್‌ ಹಾಗೂ ಬಿಸಾಲ್‌ರವರಿಗೆ ಬೆದರಿಕೆ ಹಾಕಿ ಮಾಲಿನ ಸಮೇತ ಟೆಂಪೋ ತೆಗೆದುಕೊಂಡು ಹೋಗಿದ್ದರು. ಕೆಲ ಹೊತ್ತಿನ ಬಳಿಕ ವಾಚ್‌ಗಳಿದ್ದ ಬಾಕ್ಸ್‌ಗಳನ್ನು ತೆಗೆದುಕೊಂಡು ಅದೇ ಸ್ಥಳದಲ್ಲೇ ಟೆಂಪೋ ಬಿಟ್ಟು ಹೋಗಿದ್ದರು ಈ ಬಗ್ಗೆ ಆರ್‌.ಆರ್‌.ನಗರ ಪೊಲೀಸ್‌ ಠಾಣೆಗೆ ವೇರ್‌ ಹೌಸ್‌ನ ವ್ಯವಸ್ಥಾಪಕ ಹನುಮೇಗೌಡ ದೂರು ಸಲ್ಲಿಸಿದ್ದರು. ಅದರನ್ವಯ ತನಿಖೆ ನಡೆಸಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!