ಹುಬ್ಬಳ್ಳಿ: ಆಯುರ್ವೇದಿಕ್‌ ಔಷಧವೆಂದು ಮುಧುಮುನಕ್ಕಾ ಮಾರಾಟ, ಇಬ್ಬರ ಬಂಧನ

Published : Sep 14, 2020, 09:32 AM IST
ಹುಬ್ಬಳ್ಳಿ: ಆಯುರ್ವೇದಿಕ್‌ ಔಷಧವೆಂದು ಮುಧುಮುನಕ್ಕಾ ಮಾರಾಟ, ಇಬ್ಬರ ಬಂಧನ

ಸಾರಾಂಶ

ಮುಧುಮುನಕ್ಕಾ ಮಾರಾಟ| ಖಚಿತ ಮಾಹಿತಿ ಮೇರೆಗೆ ದಾಳಿ| ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ ಪೊಲೀಸರು| 

ಹುಬ್ಬಳ್ಳಿ(ಸೆ.14): ಇಲ್ಲಿನ ಸಿಬಿಟಿ ಕಿಲ್ಲಾ ಬಳಿಯ ಬ್ರಾಡ್‌ವೇ ಕಾಂಪ್ಲೆಕ್ಸ್‌ನಲ್ಲಿರುವ ಓಸಿಯಾ ಮಾರ್ಕೆಟಿಂಗ್‌ ಅಂಗಡಿಯ ಮೇಲೆ ದಾಳಿ ನಡೆಸಿದ ಆರ್ಥಿಕ ಮತ್ತು ಮಾದಕ ಅಪರಾಧ ಪೊಲೀಸ್‌ ಇನ್‌ಸ್ಪೆಕ್ಟರ್‌ ಎನ್‌.ಸಿ. ಕಾಡದೇವರ ಅವರು 60 ಕೆಜಿ ‘ಮುಧುಮುನಕ್ಕಾ’ ಮಾದಕ ದ್ರವ್ಯವನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.

ಸಿಬಿಟಿ ಬಳಿಯ ನಿವಾಸಿ ಪುಷ್ಪರಾಜ ಗೇಸುಲಾಲಜಿ ಮೆಹತಾ (38) ಹಾಗೂ ಗಣೇಶಪೇಟೆ ನಿವಾಸಿ ಉಮೇಶ ದಾವಲಜಿ ಸವಣೂರ (30) ಬಂಧಿತ ಆರೋಪಿಗಳು. ಇವರು ಆಯರ್ವೇದಿಕ್‌ ಔಷಧಿ ಎಂದು 30 ಸಾವಿರ ಮೌಲ್ಯದ 60 ಕೆಜಿ ‘ಮಧುಮುನಕ್ಕಾ’ ಎಂಬ ಮಾದಕ ದ್ರವ್ಯವನ್ನು ಮಾರಾಟಕ್ಕಾಗಿ ಅಂಗಡಿ ಮತ್ತು ಗೋದಾಮಿನಲ್ಲಿ ಇಟ್ಟಿದ್ದರು.

ಹುಬ್ಬಳ್ಳಿ: ಪೊಲೀಸರ ಭರ್ಜರಿ ಕಾರ್ಯಾಚರಣೆ, ಲಕ್ಷಾಂತರ ರೂ. ಮೌಲ್ಯದ ಗಾಂಜಾ ಜಪ್ತಿ

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇನ್‌ಸ್ಪೆಕ್ಟರ್‌ ಕಾಡದೇವರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಪಿಎಸ್‌ಐ ಬಿ.ಕೆ. ಹೂಗಾರ, ರಾಘವೇಂದ್ರ ಗುರ್ಲ ಹಾಗೂ ಸಿಬ್ಬಂದಿ ಸಿ.ಎಂ. ಕಂಬಾಳಿಮಠ, ಮಂಜುನಾಥ ಹಾಲವರ, ರವಿ ಕೋಳಿ, ಎಂ.ಡಿ. ಬಡಿಗೇರ, ಬಿ.ಟಿ. ಪಶುಪತಿಹಾಳ, ಸಂಜೀವ ಕುರಹಟ್ಟಿಸೇರಿ ಇತರರು ಕಾರ್ಯಾಚರಣೆಯಲ್ಲಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Shivamogga: 14 ವರ್ಷ ಜೈಲು ಶಿಕ್ಷೆ ಅನುಭವಿಸಿದ್ರು ಬದಲಾಗಲಿಲ್ಲ; ತಂದೆಯನ್ನು ಕೊಲೆಗೈದು ಬಾವಿಗೆ ಎಸೆದ ಮಗ!
ಆಷಾಢ ಮುಗಿದ್ರೂ ತವರಿನಿಂದ ಬರಲಿಲ್ಲ ಪತ್ನಿ; ಪ್ರಾಣ ಕಳೆದುಕೊಂಡ ನವವಿವಾಹಿತ ಅವಿನಾಶ್