
ಸಿಂಧನೂರು(ಜೂ.11): ನಗರದ ಗಂಗಾವತಿ ರಸ್ತೆಯಲ್ಲಿರುವ ರಿಲ್ಯಾಯನ್ಸ್ ಪೆಟ್ರೋಲ್ ಬಂಕ್ ಹತ್ತಿರ ನಾಲ್ಕು ಜನ ಕಳ್ಳರು ಪೊಲೀಸರಂತೆ ನಟಿಸಿ ವೃದ್ಧನೋರ್ವನಿಂದ ಬಂಗಾರ ಕದ್ದಿರುವ ಘಟನೆ ನಡೆದಿದೆ.
ನಗರದಿಂದ ಸ್ವಗ್ರಾಮ ಸಾಲಗುಂದಾಕ್ಕೆ ತೆರಳುತ್ತಿದ್ದ ವೃದ್ಧ ಹನುಮೇಶ ಶೆಟ್ಟಿ ಅವರನ್ನು ಅಡ್ಡಗಟ್ಟಿದ ನಾಲ್ವರು ಕಳ್ಳರು, ನಾವು ಪೊಲೀಸರು ಎಂದೇಳಿಕೊಂಡು ನಿನ್ನ ಬೈಕ್ನಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದಿಯಾ ಎಂಬ ದೂರು ಬಂದಿದ್ದು, ಗಾಡಿಯನ್ನು ಚೆಕ್ ಮಾಡುತ್ತೇವೆ ಎಂದು ಹೇಳಿ ಹೆದರಿಸಿದ್ದಾರೆ. ನಂತರ ಆತನಿಗೆ ಮೂರ್ಛೆ ಹೋಗುವ ಪೌಡರ್ ಎರಚಿ 2 ಬಂಗಾರದ ಉಂಗುರ ಹಾಗೂ 1 ಸರವನ್ನು ಬಿಚ್ಚಿಕೊಂಡಿದ್ದಾರೆ.
ಕಣ್ಣು ಕಾಣಲ್ಲವೆಂದು ಬೇರೊಬ್ಬನ ಸಹಾಯ ಪಡೆದು ಮನೆಗಳ್ಳತನ..!
ತದನಂತರ ನಗರದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ನಿನ್ನ ಉಂಗುರ ಮತ್ತು ಸರವನ್ನು ಬೈಕ್ನ ಬಾಕ್ಸ್ನಲ್ಲಿ ಇಟ್ಟಿದ್ದೇವೆ. ಹುಷಾರಾಗಿ ಊರಿಗೆ ಹೋಗು ಎಂದು ಕಾಲ್ಕಿತ್ತಿದ್ದಾರೆ. ವೃದ್ಧ ಸ್ವಲ್ಪ ದೂರ ಹೋದ ಮೇಲೆ ಬೈಕ್ನ ಬಾಕ್ಸ್ ತೆಗೆದು ನೋಡಿದಾಗ ಉಂಗುರ ಮತ್ತು ಸರ ಇರಲಿಲ್ಲ. ಇದರಿಂದ ಗಾಬರಿಗೊಂಡು ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸರ್ಕಲ್ ಇನ್ಸ್ಪೆಕ್ಟರ್ ಉಮೇಶ ಕಾಂಬ್ಳೆ ಹಾಗೂ ಸಬ್ಇನ್ಸ್ಪೆಕ್ಟರ್ ಸೌಮ್ಯ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ