ಬಸವಕಲ್ಯಾಣ: ಮನೆಗಳವು ಮಾಡಿ ಹೊಸ ಬೀಗ ಜಡಿದ ಕಳ್ಳರು!

Published : Dec 21, 2024, 12:20 PM IST
ಬಸವಕಲ್ಯಾಣ: ಮನೆಗಳವು ಮಾಡಿ ಹೊಸ ಬೀಗ ಜಡಿದ ಕಳ್ಳರು!

ಸಾರಾಂಶ

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಉಮಾಪುರ ಗ್ರಾಮದಲ್ಲಿ 2.77ಲಕ್ಷ ರು, ಕೊಂಗೇವಾಡಿ ತಾಂಡಾದಲ್ಲಿ 1.1 ಲಕ್ಷ ರು.ಗಳ ಕಳ್ಳತನವಾಗಿ ರುವುದನ್ನು ಪೊಲೀಸ್ ಮೂಲಗಳು ಖಚಿತಪಡಿಸಿದ್ದು ಮನೆಗಳ್ಳರ ಗ್ಯಾಂಗ್‌ನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಬಸವಕಲ್ಯಾಣ(ಡಿ.21): ಮುಖಕ್ಕೆ ಮಾಸ್ಕ್ ಧರಿಸಿ ಒಂದೇ ದಿನ 9 ಮನೆಗಳಲ್ಲಿ ಕಳ್ಳತನ ಮಾಡಿದ ಕಳ್ಳರ ಗ್ಯಾಂಗ್ ತನ್ನ ಕೈಚಳಕ ತೋರಿಸಿದ ನಂತರ ತಾವೇ ಮುರಿದ ಬೀಗದ ಬದಲಿಗೆ ಹೊಸ ಬೀಗ ಹಾಕಿ, ಗ್ರಾಮಸ್ಥರಿಗೆ ಅನುಮಾನ ಬಾರದಂತೆ ಪರಾರಿಯಾಗಿದ್ದು ವಿಶೇಷವಾಗಿದೆ. 

ತಾಲೂಕಿನ ಉಮಾಪುರ, ಕೊಂಗೆನಳ್ಳಿ ಹಾಗೂ ಚಂಡಕಾಪುರ ಗ್ರಾಮದಲ್ಲಿ ಬುಧವಾರ ರಾತ್ರಿ ಬೀಗ ಹಾಕಿರುವ ಮನೆಗಳನ್ನೇ ಟಾರ್ಗೆಟ್ ಮಾಡಿ ಸರಣಿ ಗಳ್ಳತನ ಮಾಡಲಾಗಿದೆ. ಎರಡು ಬೈಕ್‌ಗಳಲ್ಲಿ ಗ್ರಾಮಕ್ಕೆ ಬಂದ 6 ಜನ ಕಳ್ಳರು, ಬೀಗ ಜಡಿದಿದ್ದ ಮನೆಗಳ ಬೀಗವನ್ನು ಮುರಿದು ಕಳ್ಳತನ ಮಾಡಿದ್ದಷ್ಟೇ ಅಲ್ಲ ಮುಖಕ್ಕೆ ಮಾಸ್ಕ್ ಧರಿಸಿ 9 ಮನೆಗಳನ್ನು ಲೂಟಿ ಮಾಡಿದ್ದಾರೆ. ಕಳ್ಳರ ಓಡಾಟದ ದೃಶ್ಯವು ಗ್ರಾಮದ ವಿವಿಧ ಖಾಸಗಿ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಉಮಾಪುರ ಗ್ರಾಮದಲ್ಲಿ 2.77ಲಕ್ಷ ರು, ಕೊಂಗೇವಾಡಿ ತಾಂಡಾದಲ್ಲಿ 1.1 ಲಕ್ಷ ರು.ಗಳ ಕಳ್ಳತನವಾಗಿ ರುವುದನ್ನು ಪೊಲೀಸ್ ಮೂಲಗಳು ಖಚಿತಪಡಿಸಿದ್ದು ಮನೆಗಳ್ಳರ ಗ್ಯಾಂಗ್‌ನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಪತ್ನಿ ಕೊಂದವನಿಗೆ ಜೀವಾವಧಿ ಸಜೆ

ಬಾಲ್ಕಿ: ಮದ್ಯ ಕುಡಿತದ ಚಟವನ್ನು ವಿರೋಧಿಸಿ ಹಣವನ್ನು ನೀಡದೇ ಇದ್ದ ಪತ್ನಿಯನ್ನು ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಕಠಿಣ ಶಿಕ್ಷೆ ಮತ್ತು 50 ಸಾವಿರ ರು.ಗಳ ದಂಡ ವಿಧಿಸಿ ಇಲ್ಲಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಆರ್‌ಎನ್ ಸಚಿನ ಕೌಶಿಕ್ ಅವರು ಶುಕ್ರವಾರ ಮಹತ್ವದ ತೀರ್ಪು ನೀಡಿ ಆದೇಶಿಸಿದ್ದಾರೆ. 

ಭಾಲ್ಕಿಯ ನ್ಯೂ ಭೀಮನಗರದ ರಾಜಕುಮಾರ್‌ ಹಲಗೆ ಎಂಬಾತ ತನ್ನ ಪತ್ನಿ ಮದ್ಯ ಕುಡಿಯಲು ಹಣ ನೀಡಿಲ್ಲ ಎಂದು ಪ್ಲಾಸ್ಟಿಕ್‌ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ ಎಂದು ಸಾಕ್ಷಾಧಾರಗಳಿಂದ ದೃಢಪಟ್ಟಿದ್ದು, ಅದಕ್ಕಾಗಿ ಜೀವಾವಧಿ ಕಠಿಣ ಸಜೆ ಹಾಗೂ 50 ಸಾವಿರ ರು. ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ ಎಂದು ಪ್ರಕರಣದಲ್ಲಿ ವಾದ ಮಂಡಿಸಿದ ಹೆಚ್ಚುವರಿ ಸರ್ಕಾರಿ ಅಭಿಯೋಜಕರಾದ ಶರಣಗೌಡ ತಿಳಿಸಿದ್ದಾರೆ. 

ದಂಡದ ಮೊತ್ತ ಪಾವತಿಸದಿದ್ದಲ್ಲಿ ಒಂದು ವರ್ಷ ಕಠಿಣ ಶಿಕ್ಷೆಯನ್ನು ಹೆಚ್ಚುವರಿಯಾಗಿ ಅನುಭವಿಸಬೇಕು ಹಾಗೂ ವಸೂಲಿಸಲಾದ 50 ಸಾವಿರ ರು.ಗಳ ದಂಡದ ಮೊತ್ತದಲ್ಲಿ 40 ಸಾವಿರ ರು.ಗಳನ್ನು ಕೊಲೆಗೀಡಾದ ಮಹಿಳೆಯ ಮಗಳಿಗೆ ನೀಡಬೇಕು ಮತ್ತು ಇನ್ನುಳಿದ 10 ಸಾವಿರ ರು. ಸರ್ಕಾರಕ್ಕೆ ಪಾವತಿಸಬೇಕು ಎಂದು ಆದೇಶಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!