Mandya crime: ನಿನ್ನೆ ತಾಯಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ಇಂದು ಮಗ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ!

Published : Jan 02, 2023, 12:47 PM ISTUpdated : Jan 02, 2023, 12:52 PM IST
Mandya crime: ನಿನ್ನೆ ತಾಯಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ಇಂದು ಮಗ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ!

ಸಾರಾಂಶ

ಹೊಸ ವರ್ಷದ ಮೊದಲ ದಿನ ಭಾನುವಾರ ತಾಯಿ ವೀಣಾ ಅವರ ಶವ  ಕ್ರಿಶ್ಚಿಯನ್ ಕಾಲೋನಿಯ ಎರಡನೇ ಕ್ರಾಸ್ ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.  ನಿನ್ನೆ ತಾಯಿ ಆತ್ಮಹತ್ಯೆ, ಇಂದು ಮಗ ರೈಲಿಗೆ ತಲೆಕೊಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ. 

ಮಂಡ್ಯ (ಜ.2) : ವ್ಯಕ್ತಿಯೊಬ್ಬ ರೈಲ್ವೆ ಹಳಿಗೆ ತಲೆಕೊಟ್ಟುಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯದ ವಿ. ಸಿ ಫಾರಂ ಗೇಟ್ ಬಳಿ ನಡೆದಿದೆ. ಆತ್ಮಹತ್ಯೆ ಮೃತ ವ್ಯಕ್ತಿಯನ್ನು ಮಂಡ್ಯದ ಕ್ರಿಶ್ಚಿಯನ್ ಕಾಲೋನಿಯ ನಿವಾಸಿಗಳಾದ ಅಭಿನವ ಭಾರತಿ ಶಾಲೆಯ ನಿವೃತ್ತ ಶಿಕ್ಷಕಿ ವೀಣಾ ಇವರ ಮಗ ನಿತಿನ್ಎಂದು ಗುರುತಿಸಲಾಗಿದೆ.

ಹೊಸ ವರ್ಷದ ಮೊದಲ ದಿನ ಭಾನುವಾರ ತಾಯಿ ವೀಣಾ ಅವರ ಶವ  ಕ್ರಿಶ್ಚಿಯನ್ ಕಾಲೋನಿಯ ಎರಡನೇ ಕ್ರಾಸ್ ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.  ನಿನ್ನೆ ತಾಯಿ ಆತ್ಮಹತ್ಯೆ, ಇಂದು ಮಗ ರೈಲಿಗೆ ತಲೆಕೊಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ. 

ತಾಯಿಯನ್ನು ಕೊಲೆಗೈದಿರುವ ಶಂಕೆ: 

ಮಂಡ್ಯದ ಕ್ರಿಶ್ಚಿಯನ್ ಕಾಲೋನಿಯ ನಿವಾಸಿಗಳಾದ ಅಭಿನವ ಭಾರತಿ ಶಾಲೆಯ ನಿವೃತ್ತ ಶಿಕ್ಷಕಿಯಾಗಿದ್ದ ವೀಣಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದಾಗ ಇದು ಆತ್ಮಹತ್ಯೆಯಲ್ಲ, ಮಗ ಕೊಲೆ ಮಾಡಿದ್ದಾನೆಂಬ ಅನುಮಾನ ಬಂದಿತ್ತು. 

ತಾಯಿಯನ್ನು ಕೊಂದ ಪ್ರಾಯಶ್ಚಿತಕ್ಕೆ ಮಗ ಆತ್ಮಹತ್ಯೆ?

ತಾಯಿಯನ್ನು ಕೊಂದ ಪ್ರಾಯಶ್ಚಿತಕ್ಕೆ ಇಂದು ಮಗ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನಾ? ಅಥವಾ ತಾಯಿ ಸಾವಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ್ನಾ? ತಾಯಿ ಮಗನ ಸಾವು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. 

Suicide News: ತಾಯಿ, ಮಗ, ಗರ್ಭಿಣಿ ಸೊಸೆ ಆತ್ಮಹತ್ಯೆಗೆ ಶರಣು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನನ್ನ ಜೊತೆಗೂ ಬಾ: ಗೆಳೆಯನ ಗರ್ಲ್‌ಫ್ರೆಂಡ್‌ಗೆ ಸಂದೇಶ: ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನೇ ಕೊಂದು ಪೀಸ್ ಪೀಸ್ ಮಾಡಿದ
The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ Darshan ಮೆಸೇಜ್