
ಜೋಯಿಡಾ(ಏ. 12) ಜೋಯಿಡಾ ತಾಲೂಕಿನ ಗಣೇಶಗುಡಿಯ ಸೇತುವೆಯ ಬಳಿ ಬೀದrf ಮೂಲದ ಪ್ರೇಮಿಗಳು ಸೆಲ್ಪಿ ತೆಗೆಯಲು ಸೇತುವೆ ನಿಂತಾಗ ಕಾಲು ಜಾರಿ ಕಾಳಿ ನದಿಗೆ ಬಿದ್ದಿದ್ದಾರೆ.
ದಾಂಡೇಲಿಯಿಂದ ಆಟೋದಲ್ಲಿ ಗಣೇಶಗುಡಿಗೆ ಬಂದ ಪ್ರೇಮಿಗಳು ಸೆಲ್ಪಿ ತೆಗೆಯುವ ಹುಮ್ಮಸಿನಲ್ಲಿ ಗಣೇಶಗುಡಿಯ ಸೇತುವೆ ಮೇಲೆ ಏರಿದ್ದಾರೆ. ಕಾಲು ಜಾರಿದ ಕಾರಣ ಇಬ್ಬರು ನದಿಯಲ್ಲಿ ಬಿದ್ದಿದ್ದಾರೆ.
ಚಲಿಸುತ್ತಿರುವ ಕಾರಿನ ಮೇಲೆ ಸೆಲ್ಫಿ ತೆಗೆದುಕೊಂಡ ಯುವಕರಿಗೆ ಭಾರೀ ದಂಡ
ಅವರನ್ನು ಅಲ್ಲಿಗೆ ಬಿಟ್ಟ ಆಟೋ ಚಾಲಕ ಇದನ್ನು ಗಮನಿಸಿದ್ದಾನೆ. ಕೂಡಲೇ ಇವರು ನದಿಗೆ ಬಿದ್ದ ಮಾಹಿತಿಯನ್ನು ಪೋಲಿಸರಿಗೆ ತಿಳಿಸಿದ್ದಾನೆ
ಸ್ಥಳಕ್ಕೆ ಆಗಮಿಸಿದ ರಾಮನಗರ ಪಿ.ಎಸ್.ಐ ಕಿರಣ ಪಾಟೀಲ್ ತಂಡ ನದಿಯಲ್ಲಿ ಇವರ ಹುಡುಕಾಟ ನಡೆಸಿದೆ. ಹುಡುಗಿ ಬೀದರ ಮೂಲದ ರಕ್ಷಿತಾ ಎಂದು ತಿಳಿದು ಬಂದಿದ್ದು, ಹುಡುಗನ ಹೆಸರು ಗೊತ್ತಾಗಿಲ್ಲ.
ರಾಮನಗರ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ,ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಸ್ಥಳೀಯರು ಆಗಮಿಸಿ ಹುಡುಕುವ ಯತ್ನ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ