ಬೆಂಗಳೂರಲ್ಲಿ ಹಾಡಹಗಲೇ ಝಳಪಿಸಿದ ಲಾಂಗು-ಮಚ್ಚು: ರೌಡಿಶೀಟರ್ ಮೇಲೆ ಮಾರಣಾಂತಿಕ ದಾಳಿ

Published : Sep 13, 2022, 05:22 PM IST
ಬೆಂಗಳೂರಲ್ಲಿ ಹಾಡಹಗಲೇ ಝಳಪಿಸಿದ ಲಾಂಗು-ಮಚ್ಚು: ರೌಡಿಶೀಟರ್ ಮೇಲೆ ಮಾರಣಾಂತಿಕ ದಾಳಿ

ಸಾರಾಂಶ

Bengaluru Rowdy sheeter Attack: ಸ್ಕೂಟರ್​ನಲ್ಲಿ ಹೋಗುತ್ತಿದ್ದ ಹಳೆ ರೌಡಿ ಶೀಟರ್ ಮೇಲೆ ಹಾಡಹಗಲೇ ಮುಸುಕುಧಾರಿಗಳಿಂದ ದಾಳಿ ನಡೆದಿದೆ  

ವರದಿ : ಚೇತನ್ ಮಹಾದೇವ, ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ಸೆ. 13): ಬೆಳ್ಳಂಬೆಳ್ಳಿಗ್ಗೆ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಲಾಂಗ್​-ಮಚ್ಚು ಝಳಪಿಸಿವೆ. ಸ್ಕೂಟರ್​ನಲ್ಲಿ ಹೋಗುತ್ತಿದ್ದ ಹಳೆ ರೌಡಿ ಶೀಟರ್ ಮೇಲೆ ಹಾಡಹಗಲೇ ಮುಸುಕುಧಾರಿಗಳಿಂದ ದಾಳಿ ನಡೆದಿದೆ. ಮಾಡಿದ ಪಾಪ ಬೆನ್ನು ಬಿಡೋದಿಲ್ಲ ಅನ್ನೋದಕ್ಕೆ ಇಂದು ನಗರದಲ್ಲಿ ನಡೆದ ಈ ಕೃತ್ಯ ಸಾಕ್ಷಿಯಾಗಿದೆ. ಬೆಳಗ್ಗೆ 8-30ರ ಸುಮಾರಿನಲ್ಲಿ ಜನರು ಬೆಚ್ಚಿ ಬೀಳುವ ಘಟನೆಯೊಂದು ನಡೆದು ಹೋಗಿದೆ. ಮಂತ್ರಿಮಾಲ್ ಬಳಿ ಇರುವ ನಟರಾಜ ಟಾಕೀಸ್ ಪಕ್ಕದ ರಸ್ತೆಯಲ್ಲಿ ಸ್ಕೂಟರ್​ನಲ್ಲಿ ಬರುತ್ತಿದ್ದ ಗಣೇಶ ಎಂಬಾತನನ್ನ ಹಾಡುಹಗಲೇ ದುಷ್ಕರ್ಮಿಗಳು ಕೊಚ್ಚಿ ಹಾಕಿದ್ದಾರೆ. 

ಆಟೋ ಹಾಗೂ ದ್ವಿಚಕ್ರವಾಹನದಲ್ಲಿ ಬಂದಿದ್ದ ಮುಸುಕುಧಾರಿಗಳು ಸ್ಕೂಟರ್​ ಮೇಲಿದ್ದ ಗಣೇಶನ ಮೇಲೆರಗಿದ್ದಾರೆ. ನಡುರಸ್ತೆಯಲ್ಲೇ ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ಗಣೇಶ್​ ಮೇಲೆ ಮನ ಬಂದಂತೆ ಬೀಸಿದ್ದಾರೆ. ಬೆಳಂ ಬೆಳಿಗ್ಗೆ ಈ ಭೀಕರ ದೃಶ್ಯವನ್ನು ಕಂಡ ಸ್ಥಳೀಯರು ಭಯಭೀತರಾಗಿದ್ರು. 

ಮಾರಣಾಂತಿಕ ದಾಳಿ ಮಾಡಿದ ನಂತ್ರ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗ್ತಾರೆ. ಬಳಿಕ ಸ್ಥಳೀಯರು  ಪೊಲೀಸರಿಗೆ ಕರೆ ಮಾಡಿ‌ ಮಾಹಿತಿ ನೀಡಿದ್ದರು. ಇನ್ನು, ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು ನಡು ರಸ್ತೆಯಲ್ಲಿ ನರಳುತ್ತಿದ್ದ ಗಣೇಶ್​ನನ್ನ ಪಕ್ಕದಲ್ಲಿಯೇ ಇದ್ದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Bengaluru Crime ತಡೆಯಲು ಕೇಂದ್ರದ ಪ್ಲಾನ್: ಪೊಲೀಸರ ಕೈಸೇರಿದೆ ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌

ದಾಳಿಗೆ ಕಾರಣವಾಯ್ತಾ ಕುಟುಂಬಗಳ ನಡುವಿನ ವೈರತ್ವ..?: ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಣೇಶ ಅಲಿಯಾಸ್​ ಕುಂದಾಪ್ರಿ ವೃತ್ತಿಯಲ್ಲಿ ಸ್ಕ್ರ್ಯಾಪ್ ಬಿಸಿನೆಸ್ ಮಾಡ್ತಿದ್ದ. ಫ್ರೀಡಂ ಪಾರ್ಕ್​ ಬಳಿ ಗುಜುರಿ ಅಂಗಡಿ ಇಟ್ಟುಕೊಂಡಿದ್ದವನು ಈ ಹಿಂದೆ ಯೂತ್ ಕಾಂಗ್ರೆಸ್​ನಲ್ಲೂ ಸಕ್ರಿಯನಾಗಿದ್ದ. 

ಕಳೆದ ಕೋವಿಡ್ ಸಂದರ್ಭದಲ್ಲಿ ಅಣ್ಣ ತಮ್ಮಂದಿರ ನಡುವೆ ಕಿರಿಕ್ ಆಗಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೆರಿತ್ತು. ಹಾಗೆ 2020 ರ ಸಂಧರ್ಭದಲ್ಲಿ ಹಾಲು ಹಾಕುವ ವಿಚಾರದಲ್ಲಿ ಕಿನೋ ಥಿಯೇಟರ್ ಬಳಿ ಯುವಕನನ್ನ ಕೊಚ್ಚಿ ಹಾಕಿದ ಕೇಸಲ್ಲಿ ಈತನೂ ಇದ್ದ ಎನ್ನಲಾಗಿದೆ. ಇನ್ನು ಇದೇ ದ್ವೇಷಕ್ಕೆ ಗಣೇಶನಿಗೆ ಸ್ಕೆಚ್ ಹಾಕಿದ್ರಾ ಎಂಬ ಅನುಮಾನ ಕೂಡ ವ್ಯಕ್ತವಾಗ್ತಿದೆ. 

Bengaluru Crime News: 'ಏನೋ‌ ಮಗ, ನೀರು ಕೊಡೋ' ಅಂದಿದ್ದಕ್ಕೆ ಯುವಕನ ಕೊಲೆ!

ಸ್ಕ್ರ್ಯಾಪ್ ಗಣೇಶನ ಮುಖ ಸಂಪೂರ್ಣವಾಗಿ ಸ್ಕ್ರ್ಯಾಪ್ ಆಗಿದೆ‌.‌ ಈ ಹಿಂದೆ ನಡೆಸಿದ್ದ ಕೃತ್ಯಗಳ ದ್ವೇಷದಿಂದಾಗಿ ಈ ಘಟನೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಗಾಯಗೊಂಡಿರುವ ಗಣೇಶ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಶೇಷಾದ್ರಿಪುರಂ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!