
ಜೈಪುರ(ಜ 26) ಒಮ್ಮೊಮ್ಮೆ ಪಾಗಲ್ ಪ್ರೇಮಿಗಳು ಎಂತೆಂಥಾ ಕೆಲಸ ಮಾಡಿಬಿಡುತ್ತಾರೆ. ಮಂಗಳೂರಿನಲ್ಲಿ ಹಿಂದೊಮ್ಮೆ ಯುವಕ ತಾನು ಪ್ರೀತಿಸಿದೆ ಹುಡುಗಿ ಹೇಳಿದ್ದನ್ನು ಕೇಳಲಿಲ್ಲ ಎಂದು ಮನಸಿಗೆ ಬಂದಂತೆ ಇರಿದಿದ್ದ. ಈಗ ಜೈಪುರದಿಂದ ಅದೇ ರೀತಿಯ ಘಟನೆ ವರದಿಯಾಗಿದೆ.
ರಾಜಸ್ಥಾನದ ಭರತ್ ಪುರ ನಿವಾಸಿ ಯುವತಿ ಅಂಕಿತಾ ಮನೆಯ ಮೇಲೆ ಟೆರೆಸ್ ನಲ್ಲಿ ಇರುವ ಗಿಡಗಳಿಗೆ ನೀರು ಹಾಕಲೆಂದು ತೆರಳಿದ್ದಾಳೆ. ಆಕೆ ನೀರು ಹಾಕುತ್ತಿದ್ದ ವೇಳೆ ಪಕ್ಕದ ಬಿಲ್ಡಿಂಗ್ ನಿಂದ ಯುವಕನೊಬ್ಬ ಹಾರಿ ಬಂದಿದ್ದಾನೆ. ಹಿಂದೆ ಮುಂದೆ ನೋಡದೆ ಆಕೆ ಮೇಲೆ ಗುಂಡಿನ ಮಳೆಗರೆದು ಕಾಲು ಕಿತ್ತಿದ್ದಾನೆ.
ಆಸ್ತಿಗಾಗಿ ತಾಯಿಯ ಕುತ್ತಿಗೆ ಸೀಳಿದ ಪಾಪಿ ಮಗ
ಯುವತಿ ಮೇಲೆ ದಾಳಿ ಮಾಡಿದ ಸುನೀಲ್ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ. ಯುವತಿ ಸ್ಥಳದಲ್ಲಿಯೇ ಸತ್ತು ಬಿದ್ದಿದ್ದಾಳೆ.
ಯುವಕ ಅಂಕಿತಾಳನ್ನು ಬಹಳ ಕಾಲದಿಂದ ಪ್ರೀತಿ ಮಾಡುತ್ತಿದ್ದು ಆಕೆ ಒಪ್ಪಿಗೊಂಡಿರಲಿಲ್ಲ. ಇದೇ ಕಾರಣಕ್ಕೆ ಗುಂಡಿನ ದಾಳಿ ಮಾಡಿದ್ದಾನೆ ಎನ್ನಲಾಗಿದ್ದು ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ