ಡ್ರಗ್ಸ್‌ ದಂಧೆ: ಪಂಚಭಾಷಾ ನಟಿ ಜತೆ ಮುತ್ತಪ್ಪ ರೈ ಪುತ್ರ ರಿಕ್ಕಿಗೆ ನಂಟು?

Kannadaprabha News   | Asianet News
Published : Oct 09, 2020, 07:50 AM ISTUpdated : Oct 09, 2020, 08:02 AM IST
ಡ್ರಗ್ಸ್‌ ದಂಧೆ: ಪಂಚಭಾಷಾ ನಟಿ ಜತೆ ಮುತ್ತಪ್ಪ ರೈ ಪುತ್ರ ರಿಕ್ಕಿಗೆ ನಂಟು?

ಸಾರಾಂಶ

ಆಳ್ವ ಆಯೋಜಿಸುತ್ತಿದ್ದ ಪಾರ್ಟಿಲ್ಲಿ ನಟಿ ಪರಿಚಯ| ಆಕೆಗೆ ಪೆಡ್ಲರ್‌ಗಳ ಜತೆ ನಂಟಿರಬಹುದು ಎಂದ ರಿಕ್ಕಿ| ರಿಕ್ಕಿ ಹೇಳಿಕೆ ಆಧರಿಸಿ ಆ ಪಂಚಾಭಾಷಾ ತಾರೆ ಪತ್ತೆಗೆ ಮುಂದಾದ ಸಿಸಿಬಿ ಅಧಿಕಾರಿಗಳು| ರಿಕ್ಕಿ ಮೊಬೈಲ್‌ಗಳ ವಶಕ್ಕೆ ಪಡೆದಿರುವ ಅಧಿಕಾರಿಗಳು, ಆತನ ವಾಟ್ಸಾಪ್‌ ಚಾಟಿಂಗ್‌ ಪರಿಶೀಲನೆ|  

ಬೆಂಗಳೂರು(ಅ.09): ಡ್ರಗ್ಸ್‌ ದಂಧೆ ಕುರಿತ ವಿಚಾರಣೆ ವೇಳೆ ಸಿಸಿಬಿ ಅಧಿಕಾರಿಗಳ ಮುಂದೆ ದಿ.ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಪಂಚಭಾಷಾ ನಟಿಯೊಬ್ಬಳ ಸ್ನೇಹದ ಬಗ್ಗೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಈ ಪ್ರಕರಣದ ಸಂಬಂಧ ಬುಧವಾರ ರಿಕ್ಕಿಯನ್ನು ಸುದೀರ್ಘವಾಗಿ ಸಿಸಿಬಿ ಅಧಿಕಾರಿಗಳು ಪ್ರಶ್ನಿಸಿದ್ದರು. ಆಗ ತನ್ನ ಗೆಳೆಯ ಆದಿತ್ಯ ಆಳ್ವ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ತನಗೆ ನಟಿಯೊಬ್ಬಳ ಸ್ನೇಹವಾಗಿತ್ತು. ಆಕೆಗೆ ಪೆಡ್ಲರ್‌ಗಳೊಂದಿಗೆ ಸಂಪರ್ಕ ಹೊಂದಿರುವ ಅನುಮಾನವಿದೆ ಎಂದು ರಿಕ್ಕಿ ಹೇಳಿಕೆ ನೀಡಿದ್ದಾನೆ ಎಂದು ಹೇಳಲಾಗಿದೆ.

ಡ್ರಗ್ಸ್ ಮಾಫಿಯಾ: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ಅರೆಸ್ಟ್

ಪಾರ್ಟಿಯಲ್ಲಿ ಸ್ನೇಹವಾದ ಬಳಿಕ ನಟಿ ಜತೆ ಆತ್ಮೀಯತೆ ಬೆಳೆಯಿತು. ಈ ಗೆಳೆತನದಲ್ಲೇ ಹಲವು ಪಾರ್ಟಿಗಳಿಗೆ ಜೊತೆಯಲ್ಲಿ ಹೋಗಿದ್ದೇವು. ಆದರೆ, ಆಕೆ ಡ್ರಗ್ಸ್‌ ಸೇವನೆ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದಿತ್ಯ ಆಳ್ವ ಮಾತ್ರವಲ್ಲದೆ ವೀರೇನ್‌ ಖನ್ನಾ ಸೇರಿದಂತೆ ಇತರರು ಸಂಘಟಿಸಿದ್ದ ಕೆಲವು ಪಾರ್ಟಿಗಳಿಗೆ ಸಹ ನಟಿ ಜತೆ ಹೋಗಿದ್ದೆ. ಪ್ರಕರಣ ಬೆಳಕಿಗೆ ಬಂದ ಬಳಿಕ ನಟಿಯನ್ನು ಸಂಪರ್ಕಿಸಿಲ್ಲ ಎಂದು ರಿಕ್ಕಿ ಸ್ಪಷ್ಟಪಡಿಸಿದ್ದಾನೆ ಎಂದು ತಿಳಿದು ಬಂದಿದೆ. ರಿಕ್ಕಿ ಹೇಳಿಕೆ ಆಧರಿಸಿ ಸಿಸಿಬಿ ಅಧಿಕಾರಿಗಳು, ಆ ಪಂಚಾಭಾಷಾ ತಾರೆ ಪತ್ತೆಗೆ ಮುಂದಾಗಿದ್ದಾರೆ. ರಿಕ್ಕಿ ಮೊಬೈಲ್‌ಗಳ ವಶಕ್ಕೆ ಪಡೆದಿರುವ ಅಧಿಕಾರಿಗಳು, ಆತನ ವಾಟ್ಸಾಪ್‌ ಚಾಟಿಂಗ್‌ ಪರಿಶೀಲಿಸಿದ್ದಾರೆ ಎಂದು ಹೇಳಲಾಗಿದೆ.

ಮತ್ತೊಬ್ಬ ಆಪ್ತನ ವಿಚಾರಣೆ

ಡ್ರಗ್ಸ್‌ ಪ್ರಕರಣದ ಪ್ರಮುಖ ಆರೋಪಿ ಆದಿತ್ಯ ಆಳ್ವಾನ ಮತ್ತೊಬ್ಬ ಸ್ನೇಹಿತನನ್ನು ಸಿಸಿಬಿ ಗುರುವಾರ ವಿಚಾರಣೆ ನಡೆಸಿದೆ. ಹಲಸೂರಿನ ಸಿವಿಲ್‌ ಗುತ್ತಿಗೆದಾರ ಲೋಕೇಶ್‌ಗೆ ತನಿಖೆಗೊಳಗಾಗಿದ್ದು, ಆದಿತ್ಯ ಆಳ್ವಾ ಜತೆ ಸ್ನೇಹದ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ಬುಧವಾರ ವಿಚಾರಣೆ ನಡೆಸಿದ ಬಳಿಕ ಮತ್ತೆ ಹಾಜರಾಗುವಂತೆ ಹೇಳಿದ್ದ ಅಧಿಕಾರಿಗಳೇ, ಗುರುವಾರ ಬೆಳಗ್ಗೆ ಕರೆ ಮಾಡಿ ವಿಚಾರಣೆ ಬರುವುದು ಬೇಡ ಎಂದು ರಿಕ್ಕಿಗೆ ಸೂಚಿಸಿದ್ದರು ಎನ್ನಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!