ಬೆಂಗಳೂರು: ಭಿಕ್ಷೆ ಬೇಡೋ ನೆಪದಲ್ಲಿ ದುಬಾರಿ ಫೋನ್‌ಗಳನ್ನು ಎಗರಿಸುತ್ತಿದ್ದ ಖತರ್ನಾಕ್ 'ಲೇಡಿ ಗ್ಯಾಂಗ್ ಅರೆಸ್ಟ್ !

Published : Feb 16, 2024, 03:26 PM IST
ಬೆಂಗಳೂರು: ಭಿಕ್ಷೆ ಬೇಡೋ ನೆಪದಲ್ಲಿ ದುಬಾರಿ ಫೋನ್‌ಗಳನ್ನು ಎಗರಿಸುತ್ತಿದ್ದ ಖತರ್ನಾಕ್ 'ಲೇಡಿ ಗ್ಯಾಂಗ್ ಅರೆಸ್ಟ್ !

ಸಾರಾಂಶ

ನಗರದ ಐಟಿಬಿಟಿ ಏರಿಯಾಗಳಲ್ಲಿ ಭಿಕ್ಷೆ ಬೇಡುವ ನೆಪದಲ್ಲಿ ದುಬಾರಿ ಮೊಬೈಲ್‌ಗಳನ್ನು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಲೇಡಿ ಗ್ಯಾಂಗ್‌ನ್ನು ಪತ್ತೆ ಹಚ್ಚಿ ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಫೆ.16): ನಗರದ ಐಟಿಬಿಟಿ ಏರಿಯಾಗಳಲ್ಲಿ ಭಿಕ್ಷೆ ಬೇಡುವ ನೆಪದಲ್ಲಿ ದುಬಾರಿ ಮೊಬೈಲ್‌ಗಳನ್ನು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಲೇಡಿ ಗ್ಯಾಂಗ್‌ನ್ನು ಪತ್ತೆ ಹಚ್ಚಿ ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.

ರಾಧಾ, ನಂದಿನಿ, ಸುಜಾತ,ಶಂಕ್ರಮ್ಮ, ಶಾಂತಮ್ಮ ಬಂಧಿತ ಆರೋಪಿಗಳು. ಹೊಸಕೋಟೆಯ ಚೊಕ್ಕಹಳ್ಳಿ ಬಳಿ ಟೆಂಟ್ ಹಾಕೊಂಡು ವಾಸ ಮಾಡ್ತಿದ್ದ ಗ್ಯಾಂಗ್. ಬಂಧಿತರಿಂದ ಮೂವತ್ತು ಲಕ್ಷ ಮೌಲ್ಯದ 120 ಮೊಬೈಲ್ ಫೋನ್‌ಗಳನ್ನ ಜಪ್ತಿ ಮಾಡಿದ ಪೊಲೀಸರು.

 

ಬೆಂಗಳೂರು: ಮೊಬೈಲ್‌ ಕಳ್ಳನನ್ನು ಬೆನ್ನಟಿ ಹಿಡಿದ ಟ್ರಾಫಿಕ್ ಪೊಲೀಸರು!

ಹೊಸಕೋಟೆಯ ಚೊಕ್ಕನಹಳ್ಳಿಯಿಂದ ವೈಟ್‌ಫಿಲ್ಟ್‌ಗೆ ಬಸ್‌ನಲ್ಲಿ ಬರುತ್ತಿದ್ದ ಆರೋಪಿಗಳು. ಜನಜಂಗುಳಿ ಇರುವ ಸ್ಥಳ ಸಮಯ ನೋಡಿಕೊಂಡು ಫಿಲ್ಡಿಗಿಳಿಯುತ್ತಿದ್ದ ಗ್ಯಾಂಗ್. ಐಟಿಬಿಟಿ ಏರಿಯಾಗಳಲ್ಲಿ ಓಡಾಡೋ ಮಂದಿ ಬಳಸುವ ಮೊಬೈಲ್ ಗಳು ದುಬಾರಿ ಬೆಲೆಯ ಐಫೋನ್‌ಗಳು ಎಂಬುದು ತಿಳಿದುಕೊಂಡಿದ್ದ ಗ್ಯಾಂಗ್. ಹೀಗಾಗಿ ಐಟಿ ಉದ್ಯೋಗಿಗಳು ಬಸ್‌ನಲ್ಲಿ ಓಡಾಡುವ ಸಮಯಕ್ಕೆ ಭಿಕ್ಷೆ ಬೇಡುತ್ತಾ ಫೀಲ್ಡ್‌ಗಿಳಿಯುತ್ತಿದ್ದ ಐನಾತಿ ಮಹಿಳೆಯರು.


ಬಸ್ ನಿಲ್ದಾಣದಲ್ಲಿ ಅಮಾಯಕರಂತೆ ಭಿಕ್ಷೆ ಬೇಡುತ್ತಾ ಮೊಬೈಲ್ ಬಳಕೆ ಮಾಡೋರ ಮೇಲೆ ನಿಗಾ ಇಡುತ್ತಿದ್ದ ಆರೋಪಿಗಳು. ಬಳಿಕ ರಶ್ ಆಗಿರೋ ಬಸ್ ನೋಡಿ ಗುಂಪಿನಲ್ಲಿ ತೂರಾಡಿ ಬಸ್ ಹತ್ತಿಕೊಳ್ಳೋದು ಹತ್ತಿಕೊಳ್ಳುವಾಗಲೇ ಜನರ ಅರಿವಿಗೆ ಬಾರದಂತೆ ಜೈಬಿಗೆ ಕೈಹಾಕಿ ಎಗರಿಸುತ್ತಿದ್ದ ಗ್ಯಾಂಗ್. ಮೊಬೈಲ್ ಎಗರಿಸಿದ ತಕ್ಷಣವೇ ಇಬ್ಬರು ಮಹಿಳೆಯರು ಕೈ ಬದಲಿಸಿಕೊಂಡು ಕದ್ದ ಮೊಬೈಲ್‌ ಸ್ವಿಚ್ ಆಫ್ ಮಾಡಿಕೊಂಡು ಅವುಗಳನ್ನು ಸಿಲ್ವರ್ ಪೇಪರ್‌ನಲ್ಲಿ ಹಾಕಿ ಪ್ಯಾಕ್ ಮಾಡಿಕೊಂಡು ಎಸ್ಕೇಪ್. ಹೀಗೆ ದಿನವೊಂದಕ್ಕೆ ಐದಾರು ದುಬಾರಿ ಮೊಬೈಲ್ ಕದಿಯುತ್ತಿದ್ದ ಗ್ಯಾಂಗ್! ಅಂದರೆ ಲಕ್ಷಾಂತರ ಬೆಲೆ ಬಾಳುವ ಐಫೋನ್, ಸ್ಯಾಮ್‌ಸಂಗ್ ಮೊಬೈಲ್ ಕಳ್ಳತನ ಮಾಡಿ ಹೊಸಕೋಟೆ ಬಳಿಯ ಟೆಂಟ್‌ಗೆ ಮರಳುತ್ತಿದ್ದ ಆರೋಪಿಗಳು ಕಡಿಮೆ ಬೆಲೆಗೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಖತರ್ನಾಕ್ ಮಹಿಳೆಯರು. 

ಸಂತೆಯಲ್ಲಿ ಮೊಬೈಲ್‌ಗಳೇ ಮಾಯ: ಕಂಗಾಲಾದ ಜನತೆ..!

ಕೆಲವು ದಿನಗಳಲ್ಲಿಂದ ಏರಿಯಾಗಳಲ್ಲಿ ಮೊಬೈಲ್ ಕಳ್ಳತನ ಪ್ರಕರಣಗಳು ಮೀತಿಮೀರಿತ್ತು. ಹಲವುಸಲ ದೂರಗಳು ಬಂದ ಹಿನ್ನೆಲೆ ಖದೀಮರ ಪತ್ತೆ ಹಚ್ಚಲು ಫೀಲ್ಡ್‌ಗಿಳಿದಿದ್ದ ಮಹದೇವಪುರ ಪೊಲೀಸರು. ಕೊನೆಗೂ ಖತರ್ನಾಕ್ ಲೇಡಿ ಗ್ಯಾಂಗ್ ಬಲೆಗೆ ಕೆಡವುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸದ್ಯ ಐದು ಮಂದಿ ಖತರ್ನಾಕ್ ಲೇಡೀಸ್ ಬಂಧಿಸಲಾಗಿದ್ದು, ಬೇರೆ ಬೇರೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೆ ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. 

ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!