ವರ್ಕ್‌ ಫ್ರಂ ಹೋಮ್ ಕೆಲಸದ ಆಮಿಷ; ಮಹಿಳಾ ಟೆಕ್ಕಿಗೆ ಬರೋಬ್ಬರಿ 18ಲಕ್ಷ ರೂ. ವಂಚಿಸಿದ ಸೈಬರ್ ಕಳ್ಳರು!

Published : Feb 05, 2024, 08:08 AM IST
ವರ್ಕ್‌ ಫ್ರಂ ಹೋಮ್ ಕೆಲಸದ ಆಮಿಷ; ಮಹಿಳಾ ಟೆಕ್ಕಿಗೆ ಬರೋಬ್ಬರಿ 18ಲಕ್ಷ ರೂ. ವಂಚಿಸಿದ ಸೈಬರ್ ಕಳ್ಳರು!

ಸಾರಾಂಶ

ವರ್ಕ್‌ ಫ್ರಂ ಹೋಮ್ ಕೆಲಸದ ಆಮಿಷವೊಡ್ಡಿ ಸೈಬರ್ ವಂಚಕರು ಮಹಿಳಾ ಇಂಜಿನೀಯರ್‌ಗೆ ಲಕ್ಷ ಲಕ್ಷ ವಂಚನೆ ಮಾಡಿರುವ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಿಶಾ ಯಾದವ್(36) ವಂಚನೆಗೊಳಗಾದ ಮಹಿಳೆ. ಎಚ್‌ಎಎಲ್ ನಿವಾಸಿಯಾಗಿರುವ ಮಹಿಳೆ. ವಂಚಕರ ಮಾತುಗಳನ್ನು ನಂಬಿ 18 ಲಕ್ಷ ರೂ.ಕಳೆದುಕೊಂಡಿದ್ದಾರೆ

ಬೆಂಗಳೂರು (ಫೆ.5): ವರ್ಕ್‌ ಫ್ರಂ ಹೋಮ್ ಕೆಲಸದ ಆಮಿಷವೊಡ್ಡಿ ಸೈಬರ್ ವಂಚಕರು ಮಹಿಳಾ ಇಂಜಿನೀಯರ್‌ಗೆ ಲಕ್ಷ ಲಕ್ಷ ವಂಚನೆ ಮಾಡಿರುವ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಿಶಾ ಯಾದವ್(36) ವಂಚನೆಗೊಳಗಾದ ಮಹಿಳೆ. ಎಚ್‌ಎಎಲ್ ನಿವಾಸಿಯಾಗಿರುವ ಮಹಿಳೆ. ವಂಚಕರ ಮಾತುಗಳನ್ನು ನಂಬಿ 18 ಲಕ್ಷ ರೂ.ಕಳೆದುಕೊಂಡಿದ್ದಾರೆ. ಸೈಬರ್ ಕಳ್ಳರು ಲಕ್ಷಾಂತರ ರೂಪಾಯಿ ಲಪಟಾಯಿಸಿರುವ ಬಗ್ಗೆ ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ.

ವರ್ಕ್ ಫ್ರಂ ಹೋಂ ಕೆಲಸ ನೀಡೋದಾಗಿ ಜನರನ್ನು ನಂಬಿಸಿ ₹160 ಕೋಟಿ ವಂಚಿಸಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

ವಂಚನೆ ಮಾಡಿದ್ದು ಹೇಗೆ?

ಮಹಿಳೆ ಮೊಬೈಲ್ ನಂಬರ್ ಕಲೆಕ್ಟ್ ಮಾಡಿಕೊಂಡಿರುವ ಖದೀಮರು. ಮೊದಲಿಗೆ ವರ್ಕ್ ಫ್ರಂ ಹೋಮ್ ಕೆಲಸ ಇದೆ ಎಂದು ಸಂದೇಶ ಕಳಿಸಿದ್ದಾರೆ. ಬಳಿಕ ಟೆಲಿಗ್ರಾಾಂ ಲಿಂಕ್ ಕಳಿಸಿ ಇದರಲ್ಲಿ ಜಾಯಿನ್ ಆಗುವಂತೆ ಮಹಿಳೆಗೆ ತಿಳಿಸಿದ್ದಾರೆ. ವಂಚಕರ ತಿಳಿಸಿದಂತೆ ಜಾಯಿನ್ ಆಗಿದ್ದಾರೆ. ನಂತರ ಅಶ್ವಿನಿ ಎಂಬ ಹೆಸರಿನಲ್ಲಿ ನಿಶಾಗೆ ಒಂದು ಸಂದೇಶ ಬಂದಿದೆ. 17 ಉಚಿತ ಟಾಸ್ಕ್ ಹಾಗೂ 5 ಶುಲ್ಕ ಪಾವತಿಸುವ ಟಾಸ್ಕ್ ಇರುತ್ತದೆ. ಪ್ರತಿ ಟಾಸ್ಕ್ ಗೆ 50 ರೂ.ಶುಲ್ಕ ಇದೆ. ನೀವು ಟಾಸ್ಕ್ ಕಂಫ್ಲೀಟ್ ಮಾಡಲು ಹಣ ಕಳುಹಿಸಬೇಕಾಗುತ್ತದೆ ಎಂದು ನಂಬಿಸಿದ್ದಾರೆ. ಮಹಿಳೆ ವಂಚಕರ ಮಾತು ನಂಬಿ ಅದರಂತೆ ಮೊದಲಿಗೆ 7.82 ಲಕ್ಷ ರೂ. ಕಳಿಸಿರುವ ನಿಶಾ ಬಳಿಕ ಹಂತಹಂತವಾಗಿ 18 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ.

ಸರ್ಕಾರಿ ನೌಕರಿ ಕೊಡಿಸೋದಾಗಿ ಲಕ್ಷ ಲಕ್ಷ ವಂಚನೆ; ಬಗೆದಷ್ಟು ಬಯಲಾಗ್ತಿದೆ ಕಾಂಗ್ರೆಸ್ ನಾಯಕಿ ಕರ್ಮಕಾಂಡ!

ಹಣ ಪಡೆದ ಬಳಿಕ ಯಾವುದೇ ಕೆಲಸ ನೀಡಿಲ್ಲ ಇತ್ತ ಹಣವೂ ವಾಪಸ್ ಬಂದಿಲ್ಲ. ತಾವು ಸೈಬರ್ ವಂಚಕರಿಂದ ಮೋಸಹೋಗಿದ್ದೇನೆ ಎಂದು ತಿಳಿಯುತ್ತಿದ್ದಂತೆ ಶಾಕ್ ಆಗಿರುವ ಮಹಿಳೆ. ಸದ್ಯ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು