ಅಧಿ​ಕಾ​ರಿ​ಗಳ ಕಿರು​ಕುಳ: ನದಿಗೆ ಹಾರಿ KSRTC ಕಂಡಕ್ಟರ್‌ ಆತ್ಮ​ಹ​ತ್ಯೆ

Kannadaprabha News   | Asianet News
Published : Feb 11, 2021, 10:20 AM IST
ಅಧಿ​ಕಾ​ರಿ​ಗಳ ಕಿರು​ಕುಳ: ನದಿಗೆ ಹಾರಿ KSRTC ಕಂಡಕ್ಟರ್‌ ಆತ್ಮ​ಹ​ತ್ಯೆ

ಸಾರಾಂಶ

ಬಂಟ್ವಾಳ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಿರ್ವಾ​ಹಕ ಬಾಲಕೃಷ್ಣ| ಡೆತ್‌ ನೋಟ್‌ ಬರೆದಿಟ್ಟು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ನಿರ್ವಾ​ಹಕ| ಕೆಎಸ್‌ಆರ್‌​ಟಿಸಿ ಸಂಸ್ಥೆಯಲ್ಲಿ ಕಿರುಕುಳ ನೀಡುತ್ತಿದ್ದ ಬಗ್ಗೆ ಡೆತ್‌ನೋಟ್‌ನಲ್ಲಿ ಉಲ್ಲೇಖ| 

ಉಳ್ಳಾ​ಲ(ಫೆ.11): ಕೆಎಸ್‌ಆರ್‌​ಟಿಸಿ ನಿರ್ವಾ​ಹ​ಕ ರೈಲ್ವೇ ಸೇತು​ವೆ​ಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗ​ಳೂರು ಹೊರ​ವ​ಲ​ಯದ ಜಪ್ಪಿ​ನ​ಮೊ​ಗೇ​ರಿ​ನಲ್ಲಿ ಬುಧ​ವಾರ ನಡೆ​ದಿದೆ. 

ಬಂಟ್ವಾಳ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಎಸ್‌ಆ​ರ್‌​ಟಿಸಿ ಬಸ್‌ ನಿರ್ವಾ​ಹಕ ಬಾಲಕೃಷ್ಣ ಮೃತರು. ಇವರು ಆತ್ಮಹತ್ಯೆಗೆ ಮೊದಲು ಡೆತ್‌ ನೋಟ್‌ ಬರೆದಿಟ್ಟು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಧಾರವಾಡ: ಸಾಲ​ಬಾಧೆ ತಾಳದೆ ರೈತ ಆತ್ಮ​ಹ​ತ್ಯೆ

ಡೆತ್‌ ನೋಟ್‌ನಲ್ಲಿ ತನ್ನ ಸಹೋದರನ ವಿರುದ್ಧ ಅಸಮಾಧಾನ ಹೊರಹಾಕಿರುವ ಬಾಲಕೃಷ್ಣ ಅವರು ಕೆಎಸ್‌ಆರ್‌​ಟಿಸಿ ಸಂಸ್ಥೆಯಲ್ಲಿ ನಿರಂತರ ಕಿರುಕುಳ ನೀಡುತ್ತಿದ್ದ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಸಂಸ್ಥೆ ತನ್ನನ್ನು ಬದುಕಲು ಬಿಡುತ್ತಿಲ್ಲ, ಅಧಿಕಾರಿಗಳು ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಬರೆದಿರುವ ಅವರು, ನನ್ನ ಮಕ್ಕಳು ಹಾಗೂ ತಾಯಿಯನ್ನು ಒಳ್ಳೆಯದರಲ್ಲಿ ನೋಡಿಕೊಳ್ಳಿ ಎಂದ ಡೆತ್‌ನೋಟ್‌ನಲ್ಲಿ ಉಲ್ಲೇಖಿ​ಸಿ​ದ್ದಾರೆ. ರಾ.ಹೆ.66ರ ಅವಳಿ ಸೇತು​ವೆ​ಗ​ಳಲ್ಲಿ ಜನರು ನದಿ​ಗೆ ಹಾರ​ದಂತೆ ಸೇತು​ವೆಯ ಇಕ್ಕೆ​ಲ​ಗ​ಳಿಗೆ ತಂತಿಯ ತಡೆ​ಬೇಲಿ ಅಳ​ವ​ಡಿ​ಸಿದ ಬಳಿಕ ಆ ಸೇತು​ವೆ​ಯಿಂದ ನದಿಗೆ ಹಾರುವ ಪ್ರಕ​ರ​ಣ​ಗಳು ನಿಂತಿ​ವೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡೆಡ್ಲಿ ರಾಟ್‌ವೀಲರ್ ನಾಯಿಗಳ ದಾಳಿಗೆ ಮಹಿಳೆ ದುರ್ಮರಣ; ಮೂವರು ಮಕ್ಕಳು ಅನಾಥ
ಚಿಕ್ಕಮಗಳೂರು: ಬ್ಯಾನರ್ ಗಲಾಟೆ, ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ, ಬಜರಂಗದಳ ಕಾರ್ಯಕರ್ತರ ಮೇಲೆ ಶಂಕೆ!