20 ರುಪಾಯಿಗಾಗಿ ರಸ್ತೆ ಬದಿಯ ಇಡ್ಲಿ ವ್ಯಾಪಾರಿ ಕೊಲೆ!

Published : Feb 07, 2021, 09:26 AM IST
20 ರುಪಾಯಿಗಾಗಿ ರಸ್ತೆ ಬದಿಯ ಇಡ್ಲಿ ವ್ಯಾಪಾರಿ ಕೊಲೆ!

ಸಾರಾಂಶ

20 ರುಪಾಯಿಗಾಗಿ ಉಂಟಾದ ಜಗಳದ ವೇಳೆ 3 ಗ್ರಾಹಕರು, ರಸ್ತೆ ಬದಿ ಇಡ್ಲಿ ಮಾರುವ ವೀರೇಂದ್ರ ಯಾದವ್| ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೀರಾ ರಸ್ತೆಯಲ್ಲಿ ಘಟನೆ

ಮುಂಬೈ(ಫೆ.07): 20 ರುಪಾಯಿಗಾಗಿ ಉಂಟಾದ ಜಗಳದ ವೇಳೆ 3 ಗ್ರಾಹಕರು, ರಸ್ತೆ ಬದಿ ಇಡ್ಲಿ ಮಾರುವ ವೀರೇಂದ್ರ ಯಾದವ್‌ (26) ಎಂಬ ವ್ಯಕ್ತಿಯನ್ನೇ ಕೊಂದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೀರಾ ರಸ್ತೆಯಲ್ಲಿ ನಡೆದಿದೆ.

ಶುಕ್ರವಾರ ಬೆಳಿಗ್ಗೆ ಇಡ್ಲಿ ಅಂಗಡಿಗೆ ಬಂದ ಮೂವರು ಗ್ರಾಹಕರು ಬಾಕಿ ಇರುವ 20 ರು. ನೀಡುವಂತೆ ಕೇಳಿದ್ದಾರೆ. ಮಾಲಿಕ ಮತ್ತು ಗ್ರಾಹಕರ ನಡುವೆ ಮಾತಿಗೆ ಮಾತು ಬೆಳೆದು ಅದು ಜಗಳವಾಗಿ ಮಾರ್ಪಟ್ಟಿದೆ. ಈ ವೇಳೆ ಮೂವರು ಗ್ರಾಹಕರು, ಮಾಲಿಕ ವಿರೇಂದ್ರ ಯಾದವ್‌ನನ್ನು ಬಲವಾಗಿ ತಳ್ಳಿದ್ದಾರೆ.

ಕೆಳಗೆ ಬಿದ್ದ ಮಾಲಿಕ ಯಾದವ್‌ ತಲೆಗೆ ಪೆಟ್ಟು ಬಿದ್ದು ತೀವ್ರ ಗಾಯಗೊಂಡಿದ್ದ. ಅಂಗಡಿಯಲ್ಲಿದ್ದ ಇತರರು ಆಸ್ಪತ್ರೆಗೆ ಕೊಂಡೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಕೊಲೆ ಪ್ರಕರಣದಲ್ಲಿ ಮೂವರು ಅಪರಿಚಿತರ ವಿರುದ್ಧ ನಯಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!