
ನಾಗ್ಪುರ(ಆ. 30) ಕೊರೋನಾ ಎಲ್ಲರಿಗೂ ಸಂಕಷ್ಟ ತಂದಿಟ್ಟಿದೆ. ಲಾಕ್ ಡೌನ್ ಎಲ್ಲುವುದು ಪರಿಸ್ಥಿತಿಯ ಘೋರ ಕತೆ ಹೇಳುತ್ತಿದೆ. ಇಬ್ಬರು ಉದ್ಯಮಿಗಳು ಬೈಕ್ ಕಳ್ಳತನಕ್ಕೆ ಇಳಿದ ಪ್ರಸಂಗ ಇದು.
ಕೆಲ ತಿಂಗಳ ಹಿಂದೆ ತಮ್ಮ ಉದ್ಯಮವನ್ನು ಹೇಗೆ ವಿಸ್ತರಿಸಬೇಕು ಎಂದು ಯೋಚನೆ ಮಾಡುತ್ತಿದ್ದ ಉದ್ಯಮಿಗಳು ಕಳ್ಳರಾಗಿ ಬದಲಾದ ಕತೆ ಇದು. ಮೊನೀಶ್ ದದ್ಲಾನಿ(27) ಮತ್ತು ವಿವೇಕ್ ಸೇವಕ್(22) ಎಂಬುವರನ್ನು ಶನಿವಾರ ನಾಗ್ಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕಳ್ಳತನವಾಗಿದ್ದ ಹತ್ತು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ.
ಗಾಂಜಾ ಮತ್ತಲ್ಲಿ ಬೆಂಗಳೂರು 'ಬುಲೆಟ್ ಬಸ್ಯರು' ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ!
ವಿಚಾರಣೆ ವೇಳೆ ಅಂಶವೊಂದು ಒಂದಾಗಿದ್ದು ಮೊನೀಶ್ ಬಟ್ಟೆ ಉದ್ಯಮ ನಡೆಸುತ್ತಿದ್ದ, ವಿವೇಕ್ ಟೂರ್ ಆಂಡ್ ಟ್ರಾವೆಲ್ಸ್ ನಡೆಸುತ್ತಿದ್ದ. ಲಾಕ್ ಡೌನ್ ಪರಿಣಾಮ ಉದ್ಯಮ ನಷ್ಟವಾಗಿದ್ದು ಯುವಕರು ದ್ವಿಚಕ್ರ ವಾಹನ ಕಳ್ಳತನದಂತಹ ಕೆಲಸಕ್ಕೆ ಇಳಿದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ