
ನವದೆಹಲಿ(ಅ.27): ರಾಷ್ಟ್ರ ರಾಜದಾನಿ ದೆಹಲಿಯ ಫರೀದಾಬಾದ್ನಲ್ಲಿ ಯುವತಿಕ ಕಿಡ್ನಪ್ ಹಾಗೂ ಗುಂಡು ಹೊಡೆದು ಕೊಲೆಗೈದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಹೌದು ಇಲ್ಲಿನ ವಲ್ಲಭಗಢದಲ್ಲಿ ಸೋಮವಾರ ಸಂಜೆ ಯುವತಿಯೊಬ್ಬಳು ಪರೀಕ್ಷೆ ಬರೆದು ಮರಳುತ್ತಿದ್ದಳು. ಹೀಗಿರುವಾಗಳೆ ಇಬ್ಬರು ಯುವಕರು ಗನ್ ತೋರಿಸಿ ಆಕೆಯನ್ನು ಕಿಡ್ನಾಪ್ ಮಾಡಲು ಮುಂದಾಗಿದ್ದಾರೆ. ಯುವತಿ ಈ ವೇಳೆ ಪ್ರತಿಭಟಿಸಿದಾಗ ಆಕೆಯನ್ನು ಶೂಟ್ ಮಾಡಿದ್ದಾರೆ. ಗುಂಡೇಟು ತಗುಲಿದ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಲಭ್ಯವಾದ ಮಾಹಿತಿ ಅನ್ವಯ ಯುವತಿ ಇಲ್ಲಿನ ಅಗರ್ವಾಲ್ ಕಾಲೇಜಿನಲ್ಲಿ ಬಿ. ಕಾಂ ಕಲಿಯುತ್ತಿದ್ದಳು, ಹೀಗಿರುವಾಗ ಆಕೆ ಪರೀಕ್ಷೆ ಬರೆದು ಮನೆಗೆ ಮರಳುತ್ತಿದ್ದಳು. ಈ ಸಂದರ್ಭದಲ್ಲಿ ಆರೋಪಿಗಳಾದ ತೌಶಿಫ್ ಹಾಗೂ ರೆಹಾನ್ ಆಕೆಯನ್ನು ಕಿಡ್ನಾಪ್ ಮಾಡಲು ಮುಂದಾಗಿದ್ದಾರೆ. ಆದರೆ ಈ ವೇಳೆ ಯುವತಿ ವಿರೋಧಿಸಿದ್ದಾಳೆ. ಹೀಗಾಗಿ ಆರೋಪಿಗಳು ಆಕೆಯನ್ನು ಸೂಟ್ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಪೊಲೀಸರು ಆರೋಪಿ ತೌಶಿಫ್ನನ್ನು ಬಂಧಿಸಿದ್ದಾರೆ. 2018 ರಲ್ಲೂ ಈತ ಯುವತಿಯೊಬ್ಬಳನ್ನು ಅಪಹರಿಸಿದ್ದ, ಈ ಬಗ್ಗೆ ಪ್ರಕರಣವೂ ದಾಖಲಾಗಿತ್ತು. ಸದ್ಯ ಈ ಇಡೀ ಪ್ರಕರಣವನ್ನು ಕ್ರೈಂ ಬ್ರಾಂಚ್ಗೆ ವರ್ಗಾಯಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ