ಕ್ರಿಕೆಟ್‌ ಬೆಟ್ಟಿಂಗ್‌: 21 ಲಕ್ಷ ಹಣ ವಶ, ಐವರ ಬಂಧನ

Kannadaprabha News   | Asianet News
Published : Oct 18, 2020, 07:55 AM IST
ಕ್ರಿಕೆಟ್‌ ಬೆಟ್ಟಿಂಗ್‌: 21 ಲಕ್ಷ ಹಣ ವಶ, ಐವರ ಬಂಧನ

ಸಾರಾಂಶ

ದುಬೈನಲ್ಲಿ ಐಪಿಎಲ್‌ ಹಬ್ಬ ಶುರುವಾದ ಬಳಿಕ ಬೆಂಗಳೂರಲ್ಲಿ ಬೆಟ್ಟಿಂಗ್‌ ದಂಧೆಯೂ ಆರಂಭ| ಬೆಟ್ಟಿಂಗ್‌ ನಿಯಂತ್ರಣಕ್ಕೆ ಸಾಕಷ್ಟು ಕಸರತ್ತು ನಡೆಸುತ್ತಿರುವ ಸಿಸಿಬಿ ಪೊಲೀಸರು| ಬೆಟ್ಟಿಂಗ್‌ ಜಾಲದ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸುತ್ತಿರುವ ಸಿಸಿಬಿ| 

ಬೆಂಗಳೂರು(ಅ.18): ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ವಿರುದ್ಧ ಸಿಸಿಬಿ ದಾಳಿ ಮುಂದುವರೆದಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಐವರು ದಂಧೆಕೋರರನ್ನು ಸೆರೆ ಹಿಡಿದು 21 ಲಕ್ಷ ನಗದು ಹಾಗೂ 15 ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ.

ವೈಟ್‌ಫೀಲ್ಡ್‌ ಹತ್ತಿರದ ದೊಮ್ಮರಪಾಳ್ಯದ ಎಸ್‌.ಗಿರೀಶ್‌ ಬಂಧಿತನಾಗಿದ್ದು, ಆರೋಪಿಯಿಂದ 5 ಲಕ್ಷ ಜಪ್ತಿ ಮಾಡಲಾಗಿದೆ. ಈತ ಮೊಬೈಲ್‌ ಮೂಲಕ ಬೆಟ್ಟಿಂಗ್‌ ನಡೆಸುತ್ತಿದ್ದ. ಇಮ್ಮಡಿಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಳಿ ಗ್ರಾಹಕರನ್ನು ಕರೆದು ಪಣಕ್ಕೆ ಹಣ ಕಟ್ಟಿಸಿಕೊಳ್ಳುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ : 18 ಮಂದಿ ಸೆರೆ

ಕೆ.ಆರ್‌.ಪುರ ಬಳಿ ಬಲರಾಮ್‌ ರೆಡ್ಡಿ ಹಾಗೂ ನಾಗೇಂದ್ರ ಬಲೆಗೆ ಬಿದ್ದಿದ್ದಾರೆ. ಅವರಿಂದ 10.5 ಲಕ್ಷ ಹಣ ಹಾಗೂ 12 ಮೊಬೈಲ್‌ ವಶ ಪಡಿಸಿಕೊಳ್ಳಲಾಗಿದೆ. ವೈಟ್‌ಫೀಲ್ಡ್‌ನ ನಾಗೊಂಡನಹಳ್ಳಿಯ ಲೋಕೇಶ್‌ ಸಿಸಿಬಿಗೆ ಸಿಕ್ಕಿ ಬಿದ್ದಿದ್ದಾನೆ. ಆತನಿಂದ 2 ಲಕ್ಷ ಹಣ ಹಾಗೂ ಮೊಬೈಲ್‌ ವಶವಾಗಿದೆ. ವರ್ತೂರು ಸಮೀಪ ಮತ್ತೊಬ್ಬ ಸೆರೆಯಾಗಿದ್ದಾನೆ. ಆರ್ಕಿಡ್‌ ಅಪಾರ್ಟ್‌ಮೆಂಟ್‌ ಸಮೀಪ ದಂಧೆ ನಡೆಸುವಾಗ ಜಮೀರ್‌ ಅಹಮ್ಮದ್‌ ಸಿಕ್ಕಿಬಿದ್ದಿದ್ದಾನೆ. 

ಆರೋಪಿಯಿಂದ 4 ಲಕ್ಷ ನಗದು ಹಾಗೂ ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ. ಶಾರ್ಜಾದಲ್ಲಿ ಐಪಿಎಲ್‌ ಹಬ್ಬ ಶುರುವಾದ ಬಳಿಕ ನಗರದಲ್ಲಿ ಬೆಟ್ಟಿಂಗ್‌ ದಂಧೆಯೂ ಆರಂಭವಾಗಿದೆ. ಬೆಟ್ಟಿಂಗ್‌ ನಿಯಂತ್ರಣಕ್ಕೆ ಸಾಕಷ್ಟುಕಸರತ್ತು ನಡೆಸಿರುವ ಸಿಸಿಬಿ ಪೊಲೀಸರು, ಬೆಟ್ಟಿಂಗ್‌ ಜಾಲದ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!
ಈ ವರ್ತನೆ ಸರಿಯಲ್ಲ, ಹೈಕೋರ್ಟ್ ಪರಿಗಣಿಸುವ ಮೊದಲು ಕ್ಷಮೆ ಮುಖ್ಯ, ಪ್ರಜ್ವಲ್ ರೇವಣ್ಣ ಅರ್ಜಿಗೆ ಸುಪ್ರೀಂ ಕೆಂಡ!