ಮಂಡ್ಯ: ಗಂಡನಿಂದ ವರದಕ್ಷಿಣೆ ಕಿರುಕುಳ, ಡೆತ್‌ನೋಟ್ ಬರೆದಿಟ್ಟು ಗೃಹಿಣಿ ಆತ್ಮಹತ್ಯೆ!

By Ravi JanekalFirst Published Mar 25, 2024, 7:23 PM IST
Highlights

ವರದಕ್ಷಿಣೆಗಾಗಿ ಗಂಡನ ಕಿರುಕುಳಕ್ಕೆ ಮನನೊಂದು ಗೃಹಿಣಿಯೋರ್ವಳು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಮಂಡ್ಯ ಜಿಲ್ಲೆಯ ಕೆಆರ್‌ ಪೇಟೆ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಮಂಡ್ಯ (ಮಾ.25): ವರದಕ್ಷಿಣೆಗಾಗಿ ಗಂಡನ ಕಿರುಕುಳಕ್ಕೆ ಮನನೊಂದು ಗೃಹಿಣಿಯೋರ್ವಳು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಮಂಡ್ಯ ಜಿಲ್ಲೆಯ ಕೆಆರ್‌ ಪೇಟೆ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಪ್ರೇಮಕುಮಾರಿ(26) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಎರಡು ವರ್ಷಗಳ ಹಿಂದೆಯಷ್ಟೇ ಮೈಸೂರಿನ ರಾಘವೇಂದ್ರ ಎಂಬಾತನ ಜೊತೆಗೆ ಪ್ರೇಮಕುಮಾರಿ ಮದುವೆ ಮಾಡಿಕೊಟ್ಟಿದ್ದ ಪೋಷಕರು. ಮದುವೆಯಲ್ಲೇ ವರದಕ್ಷಿಣೆಯಾಗಿ 5 ಲಕ್ಷ ನಗದು, 150 ಗ್ರಾಂ ಚಿನ್ನ ಪಡೆದಿದ್ದ ಆರೋಪಿ ರಾಘವೇಂದ್ರ.

ಪತ್ನಿ ಮನೆಯಿಂದ ಬಂದಿಲ್ಲ ಬುಲೆಟ್ ಬೈಕ್, 2 ಲಕ್ಷ ರೂ ವರದಕ್ಷಿಣೆ, ಫೋನ್‌ನಲ್ಲೇ ಡಿವೋರ್ಸ್ ನೀಡಿದ ಪತಿ!

ಮದುವೆಯಾದ 6 ತಿಂಗಳು ಅನ್ಯೋನ್ಯವಾಗಿದ್ದ ದಂಪತಿಗಳು. ಅನಂತರ ಮತ್ತೆ ವರದಕ್ಷಿಣೆ ತರುವಂತೆ ಪ್ರೇಮಕುಮಾರಿಗೆ ಪೀಡಿಸಿದ್ದ ಪತಿ ರಾಘವೇಂದ್ರ. ಮದುವೆಯಲ್ಲೆ 5ಲಕ್ಷ ವರದಕ್ಷಿಣೆ, ಚಿನ್ನ ಕೊಟ್ಟಿರುವುದಾಗಿ ತಿಳಿಹೇಳಿ ಮತ್ತೆ ವರದಕ್ಷಿಣೆಗೆ ನಿರಾಕರಿಸಿದ್ದ ಪ್ರೇಮಕುಮಾರಿ. ಇದೇ ವಿಚಾರವಾಗಿ ಗಂಡ-ಹೆಂಡತಿ ಮಧ್ಯೆ ಜಗಳ ಶುರುವಾಗಿ ಹಲವಾರು ಬಾರಿ ಠಾಣೆ ಮೆಟ್ಟಿಲೇರಿದ್ದ ಪ್ರಕರಣ. ನ್ಯಾಯ ಪಂಚಾಯ್ತಿ ಕೂಡ ನಡೆದಿತ್ತು.

ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ!

ಗಂಡನ ಕಿರುಕುಳ ಹೆಚ್ಚಾಗುತ್ತಿದ್ದ ತವರು ಮನೆ ಸೇರಿದ್ದ ಪ್ರೇಮಕುಮಾರಿ. ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಎಲ್‌ಎಲ್‌ಬಿ ಸೇರ್ಪಡೆ ಆಗಿದ್ದಳು. ಆದರೆ ಪ್ರೇಮಾ ಓದುತ್ತಿದ್ದ ಕಾಲೇಜ್ ಬಳಿಯೂ ಬಂದು ವರದಕ್ಷಿಣೆಗಾಗಿ ಕಿರುಕುಳ ಕೊಡಲಾರಂಭಿಸಿ ಕೊಲೆ ಬೆದರಿಕೆಯೂ ಹಾಕಿದ್ದ ಪತಿ ರಾಘವೇಂದ್ರ. ದಿನೇದಿನೆ ಗಂಡನ ಕಿರುಕುಳದಿಂದ ಮನನೊಂದಿಗೆ ಪ್ರೇಮಾ. ಮಾ.20 ರಂದು ಸಂಜೆ ತವರು ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ ಮುನ್ನ 5 ಪುಟಗಳ ಡೆತ್‌ನೋಟ್ ಬರೆದಿಟ್ಟಿದ್ದು, ವರದಕ್ಷಿಣೆಗಾಗಿ ಗಂಡನ ಮನೆಯವರ ಕಿರುಕುಳ ಸಾವಿಗೆ ಕಾರಣವಾಗಿರುವುದು ಬಯಲಾಗಿದೆ. ಸದ್ಯ ಘಟನೆ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಗೆ ಮುಂದಾಗಿರುವ ಪೊಲೀಸರು.

click me!