
ಹುಬ್ಬಳ್ಳಿ: ಹೂಡಿಕೆ ಹೆಸರಿನಲ್ಲಿ ಧಾರವಾಡದ ವಿದ್ಯಾಗಿರಿ ನಿವಾಸಿ ಅರವಿಂದಕುಮಾರರಿಗೆ ₹63.30 ಲಕ್ಷ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಅರವಿಂದಕುಮಾರ ಅವರು ಇನ್ಸ್ಟಾಗ್ರಾಮ್ ರೀಲ್ಸ್ ವೀಕ್ಷಿಸುತ್ತಿದ್ದ ವೇಳೆ, ‘ಬ್ಲಾಕ್ ಟ್ರೇಡಿಂಗ್’ ಎಂಬ ಹಣ ಹೂಡಿಕೆ ಲಿಂಕ್ ಒಂದು ತೋರಿಸಿಕೊಂಡಿತು. ಅದನ್ನು ಕ್ಲಿಕ್ ಮಾಡಿದ ಬಳಿಕ, ಹಲವು ವ್ಯಾಟ್ಸ್ಆ್ಯಪ್ ನಂಬರಗಳಿಂದ ಅಪರಿಚಿತರು ಸಂಪರ್ಕಿಸಿದರು. ಆ ವೇಳೆ ರಿತೀಕಾ ಸಿಂಗ್ ಎಂದು ಪರಿಚಯಿಸಿಕೊಂಡ ಮಹಿಳೆ, ಅವರನ್ನು ಎಕ್ಸಿಸ್ ಡೈರೆಕ್ಟ್ ಆನ್ಲೈನ್ ಗ್ರೂಪ್ಗೆ ಸೇರಿಸಿ, ಎಕ್ಸಿಸ್ಎಸ್ಎಕ್ಸ್ ಟ್ರೇಡಿಂಗ್ ಆ್ಯಪ್ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ಭರವಸೆ ನೀಡಿದರು.
ಅರವಿಂದಕುಮಾರ ಅವರು ಆಪ್ ಡೌನ್ಲೋಡ್ ಮಾಡಿ, ರಿತೀಕಾ ಸೂಚಿಸಿದ ಟ್ರೇಡಿಂಗ್ ವಿಧಾನವನ್ನು ಅನುಸರಿಸಿದರು. ಹಂತ ಹಂತವಾಗಿ ಒಟ್ಟು ₹63.30 ಲಕ್ಷ ವರ್ಗಾಯಿಸಿದರೂ, ಯಾವುದೇ ಲಾಭ ನೀಡದೇ, ಹಣವನ್ನೂ ಹಿಂದಿರುಗಿಸಲಿಲ್ಲ. ಈ ಕುರಿತು ಅರವಿಂದಕುಮಾರ ಅವರ ಮಗಳು ಸನಾ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯು ತನಿಖೆ ಆರಂಭಿಸಿದೆ. ಪೊಲೀಸರ ಪ್ರಕಾರ, ವಂಚಕರು ನಕಲಿ ಆ್ಯಪ್ಗಳು, ವೆಬ್ಸೈಟ್ಗಳು ಮತ್ತು ಸಿಮ್ ಕಾರ್ಡ್ಗಳನ್ನು ಬಳಸಿಕೊಂಡು ತಮ್ಮ ಗುರುತನ್ನು ಮರೆಮಾಚುವ ತಂತ್ರವನ್ನು ಅನುಸರಿಸಿದ್ದಾರೆ. ಹೀಗಾಗಿ ತನಿಖೆಯಲ್ಲಿ ಹಲವು ಅಡೆತಡೆಗಳಿವೆ. ಆದರೂ, ವಂಚಕರನ್ನು ಪತ್ತೆಹಚ್ಚಲು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ