
ಧಾರವಾಡ (ಅ.19) : ಲೇಔಟ್ ಪೂರ್ಣಗೊಳಿದೆ ಮುಂಗಡವಾಗಿ ಪ್ಲಾಟ್ಗಾಗಿ ಹಣ ಪಡೆದು ನಂತರ ಪ್ಲಾಟ್ ಹಾಗೂ ಹಣ ಕೊಡದೇ ಸೇವಾ ನ್ಯೂನತೆ ಎಸಗಿದ ಡೆವಲಪರ್ಗೆ ಧಾರವಾಡದ ಜಿಲ್ಲಾ ಗ್ರಾಹಕರ ನ್ಯಾಯಾಲಯ ಮುಂಗಡ ನೀಡಿದ ಹಣವನ್ನು ಬಡ್ಡಿ ಸಮೇತ ನೀಡಲು ಆದೇಶ ನೀಡಿದೆ. ವಿಜಯಪುರ ಗಣೇಶನಗರ ನಿವಾಸಿ ಶಿವಾನಂದ ಹೊಕ್ಕುಂಡಿ 2012ರಲ್ಲಿ ಕೃಷಿ ವಿವಿ ಎದುರಿಗಿನ ಸಾಧುನವರ ಎಸ್ಟೇಟ್ನ ಸಾಮನ್ ಡೆವಲಪರ್ಸ್ನ ವಿನಯ ಸಾಹುಕಾರ ಬಳಿ 1200 ಚದರ ಅಡಿ ವಿಸ್ತೀರ್ಣವುಳ್ಳ ಎರಡು ಪ್ಲಾಟ್ಗಳನ್ನು . 9 ಲಕ್ಷಕ್ಕೆ ಖರೀದಿ ಕರಾರು ಮಾಡಿಕೊಂಡು . 6 ಲಕ್ಷ ಮುಂಗಡ ಸಂದಾಯ ಮಾಡಿದ್ದರು.
Fraud Case: 3.56 ಲಕ್ಷಕ್ಕೆ ಸರ್ಕಾರಿ ಪ್ಲಾಟ್ ಪಡೆದು 20 ಲಕ್ಷಕ್ಕೆ ಮಾರಾಟ?
ಲೇಔಟ್ ಡೆವಲಪ್ ಮಾಡದೇ ಪ್ಲಾಟ್ಗಳನ್ನು ಅವರು ದೂರುದಾರರಿಗೆ ಕೊಟ್ಟಿರಲಿಲ್ಲ. ಹಲವು ಬಾರಿ ಪ್ಲಾಟ್ ಕೊಡುವಂತೆ ಅಥವಾ ಹಣ ಹಿಂದಿರುಗಿಸುವಂತೆ ಒತ್ತಾಯಿಸಿದರೂ ಡೆವಲಪರ್ ನೆಪ ಹೇಳುತ್ತಾ ಸತಾಯಿಸುತ್ತಿದ್ದರು. ಆ ಬಗ್ಗೆ ಅವರು ಕೊಟ್ಟಎರಡು ಚೆಕ್ ಅಮಾನ್ಯವಾಗಿದ್ದು ಡೆವಲಪರ್ ವಿರುದ್ಧ ಧಾರವಾಡ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣ ನಡೆಯುತ್ತಿದೆ. ಡೆವಲ್ಪರ್ ಇಂತಹ ನಡವಳಿಕೆಯಿಂದ ಅವರು ತನಗೆ ಸೇವಾ ನ್ಯೂನತೆ ಎಸಗಿ ಮೋಸ ಮಾಡಿದ್ದಾರೆಂದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಶಿವಾನಂದ ದೂರು ಸಲ್ಲಿಸಿದ್ದರು.
Vastu Tips : ಇಂಥ ಪ್ಲಾಟ್ ನಲ್ಲಿ ಅಪ್ಪಿತಪ್ಪಿಯೂ ವಾಸ ಮಾಡ್ಬೇಡಿ
ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿ.ಎ. ಬೋಳಶೆಟ್ಟಿಮತ್ತು ಪಿ.ಸಿ. ಹಿರೇಮಠ, ದೂರುದಾರರಿಂದ ಮುಂಗಡವಾಗಿ ಪಡೆದ ಹಣವನ್ನು ಡೆವಲಪರ್ ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡು ಅವರಿಗೆ ಪ್ಲಾಟ್ ಕೊಡದೇ ಇರುವುದು ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನತೆ ಆಗಲಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಆ ಬಗ್ಗೆ ಸಾಮನ್ ಡೆವಲಪರ್ಸ್ನ ಮಾಲೀಕ ವಿನಯ ಸಾಹುಕಾರ ದೂರುದಾರರಿಂದ ಪಡೆದ . 6 ಲಕ್ಷಕ್ಕೆ 2012 ಅ. 20ರಿಂದ ಹಣ ಹಿಂದಿರುಗಿಸುವವರೆಗೆ ಶೇ. 8ರಂತೆ ಬಡ್ಡಿ ಹಾಕಿ ಸಂದಾಯ ಮಾಡುವಂತೆ ಆದೇಶಿಸಿದೆ. ಜತೆಗೆ ಸೇವಾ ನ್ಯೂನತೆಯಿಂದ ದೂರುದಾರರಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗೆ . 1 ಲಕ್ಷ ಪರಿಹಾರ ಹಾಗೂ . 10 ಸಾವಿರ ಪ್ರಕರಣದ ಖರ್ಚು-ವೆಚ್ಚವನ್ನು ತೀರ್ಪು ನೀಡಿದ ತಿಂಗಳ ಒಳಗಾಗಿ ನೀಡುವಂತೆ ಆಯೋಗ ಆದೇಶಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ