ವಿಮೆ ಹಣಕ್ಕಾಗಿ ತನ್ನ ಹತ್ಯೆಗೆ ತಾನೇ ಸುಪಾರಿ ಕೊಟ್ಟ ಉದ್ಯಮಿ!

Published : Jun 16, 2020, 08:03 AM IST
ವಿಮೆ ಹಣಕ್ಕಾಗಿ ತನ್ನ ಹತ್ಯೆಗೆ ತಾನೇ ಸುಪಾರಿ ಕೊಟ್ಟ ಉದ್ಯಮಿ!

ಸಾರಾಂಶ

ವಿಮೆ ಹಣಕ್ಕಾಗಿ ತನ್ನ ಹತ್ಯೆಗೆ ತಾನೇ ಸುಪಾರಿ ಕೊಟ್ಟಉದ್ಯಮಿ!|  ಕೈಗಳನ್ನು ಕಟ್ಟಿಹಾಕಿ ಮರಕ್ಕೆ ನೇಣುಹಾಕಿದ ರೀತಿಯಲ್ಲಿ ಮೃತದೇಹ

ನವದೆಹಲಿ(ಜೂ.16): ಬೇರೆಯವರ ಹತ್ಯೆಗೆ ಸುಪಾರಿಕೊಟ್ಟು ಕೊಲೆ ಮಾಡಿಸುವುದನ್ನು ನೋಡಿದ್ದೇವೆ. ಆದರೆ, ದೆಹಲಿಯ ಉದ್ಯಮಿಯೊಬ್ಬ ವಿಮೆ ಹಣಕ್ಕಾಗಿ ಬಾಡಿಗೆ ಹಂತಕರಿಂದ ತಾನೇ ಕೊಲೆಯಾದ ವಿಚಿತ್ರ ಘಟನೆ ದೆಹಲಿಯಲ್ಲಿ ನಡೆದಿದೆ. ದಿನಸಿ ವ್ಯಾಪಾರಿ ಗೌರವ್‌ ಎಂಬಾತ ಕೊಲೆಯಾದ ವ್ಯಕ್ತಿ ಆಗಿದ್ದು, ದೆಹಲಿಯ ಹೊರವಲಯದ ರನ್‌ಹೌಲಾ ಎಂಬಲ್ಲಿ ಕೈಗಳನ್ನು ಕಟ್ಟಿಹಾಕಿ ಮರಕ್ಕೆ ನೇಣುಹಾಕಿದ ರೀತಿಯಲ್ಲಿ ಮೃತದೇಹ ಜೂ.10ರಂದು ಪತ್ತೆಯಾಗಿದೆ.

ಅಂಗಡಿಯಿಂದ ಪತಿ ಮನೆಗೆ ಬಾರದೇ ಇದ್ದಾಗ ಪತ್ನಿ ಶಾನು ಬನ್ಸಲ್‌ ಜೂ.10ರಂದು ಪೊಲೀಸರಿಗೆ ದೂರು ನೀಡಿದ್ದಳು. ಪತಿಗೆ 6 ಲಕ್ಷ ರು. ಸಾಲ ಇದ್ದು, 3.5 ಲಕ್ಷ ರು. ಮೊತ್ತದ ಕ್ರೆಡಿಟ್‌ ಕಾರ್ಟ್‌ ವಂಚನೆಯ ಬಲಿಪಶು ಆಗಿದ್ದ ಸಂಗತಿಯನ್ನು ತಿಳಿಸಿದ್ದಳು.

ಈ ಕುರಿತು ತನಿಖೆ ನಡೆಸಿದ್ದ ಪೊಲೀಸರು, ಗೌರವ್‌ನ ಮೊಬೈಲ್‌ ಕರೆಗಳನ್ನು ಪರಿಶೀಲಿಸಿದಾಗ, ಆತ ಅಪ್ರಾಪ್ತ ಬಾಲಕನೊಬ್ಬನ ಜೊತೆ ಹಲವು ಬಾರಿ ಮಾತನಾಡಿದ್ದು ಬೆಳಕಿಗೆ ಬಂದಿತ್ತು. ಆತನ ಪತ್ತೆ ಮಾಡಿ ಪರಿಶೀಲಿಸದಾಗ ಸ್ವತಃ ಗೌರವ್‌ ತನ್ನ ಹತ್ಯೆಗೆ ತಾನೇ ಸುಪಾರಿ ಕೊಟ್ಟಿದ್ದ ವಿಷಯ ಬೆಳಕಿಗೆ ಬಂದಿದೆ. ಹಂತರಿಗೆ ತನ್ನ ಪರಿಚಯ ಸಿಗಲು, ತಾನೇ ಅವರಿಗೆ ಮೊಬೈಲ್‌ನಲ್ಲಿ ತನ್ನ ಫೋಟೋವನ್ನು ಗೌರವ್‌ ಕಳುಹಿಸಿದ್ದು ಕೂಡಾ ಕಂಡುಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ