
ಬೆಂಗಳೂರು(ಜು.17): ವಿದೇಶಿಯರಿಗೆ ವೈದ್ಯಕೀಯ ನೆರವು ಒದಗಿಸುವ ನೆಪದಲ್ಲಿ ಮಹಿಳೆಯೊಬ್ಬರಿಗೆ ಸೈಬರ್ ಕಳ್ಳರು 1.71 ಲಕ್ಷ ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಪದ್ಮನಾಭ ನಗರದಲ್ಲಿ ನೆಲೆಸಿರುವ ಮಹಿಳೆ ಮೋಸ ಹೋಗಿದ್ದಾರೆ. ದಕ್ಷಿಣ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೋಣ: ವಿದೇಶಿಗರ ಸೋಗಿನಲ್ಲಿ ಬಂದು 18 ಸಾವಿರ ಎಗರಿಸಿದ ಚಾಲಾಕಿಗಳು..!
ಕೆಲ ದಿನಗಳ ಹಿಂದೆ ಸಂತ್ರಸ್ತೆಗೆ ಫೇಸ್ಬುಕ್ ಮೂಲಕ ವಿಲಿಯಂ ಸ್ಟೀಫನ್ ಎಂಬಾತನ ಪರಿಚಯವಾಗಿದೆ. ಆಗ ನನ್ನ ಮಗಳ ಚಿಕಿತ್ಸೆ ಸಲುವಾಗಿ ಜರ್ಮನಿಯಿಂದ ಭಾರತಕ್ಕೆ ಬರುವುದಾಗಿ ಆತ ತಿಳಿಸಿದ್ದ. ಇದಾದ ಬಳಿಕ ಜು.13ರಂದು ದೂರುದಾರರಿಗೆ ಕರೆ ಮಾಡಿ ಅಪರಿಚಿತ ವ್ಯಕ್ತಿ, ತಾನು ದೆಹಲಿ ವಿಮಾನ ನಿಲ್ದಾಣದಿಂದ ಮಾತನಾಡುತ್ತಿರುವುದಾಗಿ ಹೇಳಿದ್ದ. ಜರ್ಮನಿಯಿಂದ ಬಂದಿರುವ ವೃದ್ಧ ಹಾಗೂ ಒಂದು ಹೆಣ್ಣು ಮಗು ವಿಮಾನ ನಿಲ್ದಾಣದಲ್ಲಿದ್ದಾರೆ. ಆದರೆ ಅವರ ಬಳಿ ಯೂರೋ ಕರೆನ್ಸಿ ಇದ್ದು, ಭಾರತದ ಕರೆನ್ಸಿ ಇಲ್ಲ. ಹಾಗಾಗಿ ನೀವು ಅವರಿಗೆ ಸಹಾಯ ಮಾಡಿ. ಕಸ್ಟಮ್ಸ್ ಶುಲ್ಕವನ್ನು ಭರಿಸುವಂತೆ ತಿಳಿಸಿದ್ದ ಎಂದು ಮಹಿಳೆ ದೂರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ