ಜಮಖಂಡಿ: ಲಕ್ಷಾಂತರ ರೂ. ಸ್ಕೀಂ ಹಣದೊಂದಿಗೆ ಪರಾರಿ, ದಂಪತಿ ಬಂಧನ

Published : Sep 10, 2023, 08:30 PM IST
ಜಮಖಂಡಿ: ಲಕ್ಷಾಂತರ ರೂ. ಸ್ಕೀಂ ಹಣದೊಂದಿಗೆ ಪರಾರಿ, ದಂಪತಿ ಬಂಧನ

ಸಾರಾಂಶ

ಪ್ರತಿ ತಿಂಗಳು ಕೊಡಬೇಕಿದ್ದ ಹಣದಲ್ಲಿ ಕೆಲವೊಬ್ಬರಿಗೆ ನೀಡಿದ್ದು, ಇನ್ನೂ ಕೆಲವರಿಗೆ ನೀಡದೇ ಸ್ಕೀಂದಲ್ಲಿ ಸಂಗ್ರಹಿಸಿದ ಲಕ್ಷಾಂತರ ಹಣ ತಗೆದುಕೊಂಡು ಪರಾರಿಯಾಗಿದ್ದ ಬಂಧಿತ ಆರೋಪಿಗಳು. 

ಜಮಖಂಡಿ(ಸೆ.10):  ನಗರದಲ್ಲಿ ಸ್ಕೀಂ ಹಣ ಸಂಗ್ರಹಿಸಿ ಜನರಿಗೆ ಮೋಸ ಮಾಡಿ ಲಕ್ಷಾಂತರ ಹಣ ತಗೆದುಕೊಂಡು ಪರಾರಿಯಾಗಿದ್ದ ದಂಪತಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿನ ಮೈತ್ರಿಗಲ್ಲಿಯ ನಿವಾಸಿ ಚಂದ್ರಿಕಾ ನಾರಾಯಣ ಯಾದವ (47), ಗಂಡ ನಾರಾಯಣ ವಸಂತ ಯಾದವ (48) ಎಂಬ ದಂಪತಿ ಕಳೆದ 4 ವರ್ಷದಿಂದ ಬಾಡಿಗೆ ಮನೆಯಲ್ಲಿದ್ದು, ಜನರಲ್ಲಿ ಬಿಸಿ (ಸ್ಕೀಂ) ಹಣದ ಪದ್ಧತಿ ಪರಿಚಯಿಸಿ ₹4-5 ಸಾವಿರ ಹಣ ವಸೂಲಿ ಮಾಡಿಕೊಂಡು ಹಣ ವಸೂಲಿ ಮಾಡುತ್ತಿದ್ದರು. ಪ್ರತಿ ತಿಂಗಳು ಕೊಡಬೇಕಿದ್ದ ಹಣದಲ್ಲಿ ಕೆಲವೊಬ್ಬರಿಗೆ ನೀಡಿದ್ದು, ಇನ್ನೂ ಕೆಲವರಿಗೆ ನೀಡದೇ ಸ್ಕೀಂದಲ್ಲಿ ಸಂಗ್ರಹಿಸಿದ ಲಕ್ಷಾಂತರ ಹಣ ತಗೆದುಕೊಂಡು ಪರಾರಿಯಾಗಿದ್ದರು.

ಬಾಗಲಕೋಟೆ ಪೋಲಿಸರ ಕಾರ್ಯಾಚರಣೆ: ಬೈಕ್ ಕದಿಯುತ್ತಿದ್ದ ಖತರ್ನಾಕ್ ಖದೀಮರ ಬಂಧನ

ಈ ಘಟನೆಯ ಬಗ್ಗೆ ವಿದ್ಯಾ ಹೆರಕಲ್ ಎಂಬುವರು ಪೋಲೀಸರಿಗೆ ದೂರು ನೀಡಿ, ಪ್ರಕರಣ ದಾಖಲಿಸಿದ ಆಧಾರದ ಮೇಲೆ ಬಿಸಿ ಹಣವನ್ನು ತಗೆದುಕೊಂಡು ತಮ್ಮ ಸ್ವಂತಕ್ಕೆ ಮತ್ತು ಗಂಡನ ಮೋಜು-ಮಸ್ತಿಗೆ ಬಳಸಿಕೊಂಡಿದ್ದು, ಹುಬ್ಬಳ್ಳಿ-ಧಾರವಾಡ ತಮ್ಮ ಸಂಬಂಧಿಕರ ಮನೆಗೆ ಹೋಗಿ ತಲೆಮರೆಸಿಕೊಂಡು ಪರಾರಿಯಾಗಿದ್ದನ್ನು ಖಚಿತ ಪಡಿಸಿಕೊಂಡ ಶಹರ ಪೋಲಿಸರ ತಂಡ ಆರೋಪಿ ದಂಪತಿಯನ್ನು ಬಂಧಿಸಿದ್ದಾರೆ. ಶಹರ ಠಾಣೆ ಎಸೈ ಜೆ.ಟಿ.ಮಾನೆ, ಎಎಸೈ ಎಚ್.ಎಸ್.ಮೆಂಡಿಗಾರ, ಪ್ರಕಾಶ ಕಾಖಂಡಕಿ, ಮಲ್ಲು ಕೋಲಾರ, ಪರಸು ಮಾಳಿ ತನಿಖಾ ತಂಡ ತನಿಖೆ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!