ವಾರಸುದಾರರಿಗೆ ಮರಳಿ ಸೇರಿದ 137 ಗ್ರಾಂ ಚಿನ್ನ ಇದ್ದ ಬ್ಯಾಗ್‌

Published : Jul 01, 2022, 05:14 AM IST
ವಾರಸುದಾರರಿಗೆ ಮರಳಿ ಸೇರಿದ 137 ಗ್ರಾಂ ಚಿನ್ನ ಇದ್ದ ಬ್ಯಾಗ್‌

ಸಾರಾಂಶ

*  ಸಿಸಿಟಿವಿ ಕ್ಯಾಮೆರಾ ಆಧರಿಸಿ ಪತ್ತೆ ಹಚ್ಚಿದ ರೈಲ್ವೆ ಪೊಲೀಸರು  *  ತಮಿಳುನಾಡಿನಲ್ಲಿ ಕಣ್ತಪ್ಪಿನಿಂದ ಬೇರೆ ಪ್ರಯಾಣಿಕರ ಮನೆಗೆ ಸೇರಿದ್ದ ಚಿನ್ನಾಭರಣವಿದ್ದ ಬ್ಯಾಗ್‌  *  ಈ ಬಗ್ಗೆ ಟೆಕ್ಕಿ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು   

ಬೆಂಗಳೂರು(ಜು.01):  ತಮಿಳುನಾಡಿನಲ್ಲಿ ಕಣ್ತಪ್ಪಿನಿಂದ ಬೇರೆ ಪ್ರಯಾಣಿಕರ ಮನೆಗೆ ಸೇರಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌ವೊಬ್ಬರ 137 ಗ್ರಾಂ ಚಿನ್ನಾಭರಣವಿದ್ದ ಬ್ಯಾಗ್‌ ಅನ್ನು ಸಿಸಿಟಿವಿ ಕ್ಯಾಮೆರಾ ಆಧರಿಸಿ ರೈಲ್ವೆ ಪೊಲೀಸರು ಪತ್ತೆ ಹಚ್ಚಿ ಮರಳಿಸಿದ್ದಾರೆ.

ರಾಜಾಜಿ ನಗರ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ ನಿವಾಸಿ ಮಂಜುನಾಥ್‌ ಬ್ಯಾಗ್‌ ಕಳೆದುಕೊಂಡಿದ್ದು, ಜೂ.13ರಂದು ತಮಿಳುನಾಡಿನಿಂದ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಕುಟುಂಬದ ಜತೆ ಮರಳುವಾಗ ಅವರು ಬ್ಯಾಗ್‌ ಕಳೆದುಕೊಂಡಿದ್ದರು. ಈ ಬಗ್ಗೆ ಟೆಕ್ಕಿ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಡಿವೈಎಸ್ಪಿ ಗೀತಾ ನೇತೃತ್ವದ ಪಿಎಸ್‌ಐ ಪುರುಷೋತ್ತಮ್‌ ತಂಡವು, ರೈಲು ನಿಲ್ದಾಣದ ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಬ್ಯಾಗ್‌ ಪತ್ತೆ ಹಚ್ಚಿದ್ದಾರೆ ಎಂದು ರೈಲ್ವೆ ಎಸ್ಪಿ ಸಿರಿಗೌರಿ ತಿಳಿಸಿದ್ದಾರೆ.

ಚಿನ್ನದ ಸರ ಹೊತ್ತು ಸಾಗುತ್ತಿರುವ ಪುಟ್ಟ ಸ್ಮಗ್ಲರ್‌ಗಳು: ಗೊಂದಲದಲ್ಲಿ ಪೊಲೀಸರು

ತಮಿಳುನಾಡಿನಿಂದ ರೈಲಿನಲ್ಲಿ ಮಂಜುನಾಥ್‌ ಕುಟುಂಬದ ಜತೆ ಅದೇ ಬೋಗಿಯಲ್ಲಿ ಬೇರೊಂದು ಕುಟುಂಬ ಸಹ ನಗರಕ್ಕೆ ಬಂದಿತ್ತು. ರೈಲ್ವೆ ನಿಲ್ದಾಣದಲ್ಲಿ ಇಳಿಯುವಾಗ ಕಣ್ತಪ್ಪಿನಿಂದ ಮಂಜುನಾಥ್‌ ಅವರಿಗೆ ಸೇರಿದ ಟ್ರಾಲಿ ಬ್ಯಾಗ್‌ ಅನ್ನು ಅವರು ತೆಗೆದುಕೊಂಡು ಹೋಗಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!