
ಹುಬ್ಬಳ್ಳಿ (ಸೆ.26) : ಬಲವಂತದಿಂದ ಮರ್ಮಾಂಗದ ತುದಿ ಕತ್ತರಿಸಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ ಪ್ರಕರಣ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಶಿಫ್್ಟಆಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ, ಬಲವಂತದ ಮತಾಂತರಕ್ಕೆ ಒಳಗಾದ ಶ್ರೀಧರ ಗಂಗಾಧರ ಅಲಿಯಾಸ್ ಸಲ್ಮಾನ್ ಮಾತನಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ದಲಿತ ಯುವಕನಿಗೆ ಬಲವಂತದಿಂದ ಮುಂಜಿ ಮಾಡಿಸಿ ಇಸ್ಲಾಂಗೆ ಮತಾಂತರ: ಹುಬ್ಬಳ್ಳಿಯಲ್ಲಿ ಕೇಸು ದಾಖಲು
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಯುವಕ ಶ್ರೀಧರ ಗಂಗಾಧರನನ್ನು ಬಲವಂತವಾಗಿ ಮತಾಂತರ ಮಾಡಿರುವುದು ಬೆಂಗಳೂರಿನಲ್ಲಿಯೇ. ಹೀಗಾಗಿ ಈ ಪ್ರಕರಣವನ್ನು ಬೆಂಗಳೂರಿನ ಬನಶಂಕರಿ ಠಾಣೆಗೆ ಸ್ಥಳಾಂತರಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇನ್ನೆರಡು ದಿನಗಳಲ್ಲಿ ಪ್ರಕರಣ ಬೆಂಗಳೂರು ಠಾಣೆಗೆ ಶಿಫ್್ಟಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ, ಶ್ರೀಧರ ಗಂಗಾಧರ ಅಲಿಯಾಸ್ ಸಲ್ಮಾನ್ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ತನಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಯಾವ ರೀತಿ ಆಸೆ-ಆಮಿಷ ತೋರಿಸಲಾಯಿತು. ಯಾವ ರೀತಿ ತನ್ನ ಬ್ರೇನ್ವಾಶ್ ಮಾಡಿದ್ದಾರೆ. ಯಾವ ರೀತಿ ತನಗೆ ಹಿಂಸೆ ನೀಡಿದ್ದಾರೆ. ತಾನು ಹುಬ್ಬಳ್ಳಿಗೆ ಹೇಗೆ ಬಂದೆ ಎಂಬ ಬಗ್ಗೆ ವಿಡಿಯೋದಲ್ಲಿ ಆತ ವಿವರಿಸಿದ್ದಾನೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮತಾಂತರ ನಿಷೇಧ ಕಾಯ್ದೆ ವಾಪಾಸ್: ಪ್ರಿಯಾಂಕ್ ಖರ್ಗೆ ಘೋಷಣೆ
ಅಲ್ಲದೆ, ಯುವತಿಯನ್ನು ಭೇಟಿ ಮಾಡಿ ಆಕೆಯನ್ನು ಮತಾಂತರಗೊಳಿಸಲು ಹುಬ್ಬಳ್ಳಿಗೆ ಬಂದಿದ್ದೆ. ಆ ಯುವತಿಯ ಡಿಟೆಲ್ಸ್ನ್ನು ಕೂಡ ಈತನನ್ನು ಮತಾಂತರಗೊಳಿಸಿದವರೇ ನೀಡಿದ್ದರು ಎಂದು ಆತ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಆದರೆ, ಈ ವಿಡಿಯೋವನ್ನು ಯಾವಾಗ, ಎಲ್ಲಿ ಮಾಡಲಾಗಿದೆ ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಅಲ್ಲದೆ, ಹುಬ್ಬಳ್ಳಿಗೆ ಬಂದಾಗ ನಾಲ್ಕಾರು ಮಂದಿ ಸೇರಿ ಇವನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಎಫ್ಐಆರ್ನಲ್ಲಿದೆ. ಆದರೆ, ಹಲ್ಲೆ ನಡೆಸಿದ್ದು ಯಾರು? ಈತ ಇಲ್ಲಿನ ಯುವತಿಯನ್ನು ಮತಾಂತರಗೊಳಿಸಲು ಬಂದಿದ್ದ ಎಂಬುದು ಈ ಗುಂಪಿಗೆ ಗೊತ್ತಾಗಿತ್ತಾ? ಹಾಗಾದರೆ ಅವರಾರಯರು ಎಂಬುದು ಕೂಡ ಇನ್ನೂ ಬಹಿರಂಗಗೊಂಡಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ