ಮಗನಿಗೆ ಜನ್ಮ ನೀಡಬೇಕಾದ್ರೆ, ಸಾರ್ವಜನಿಕವಾಗಿ ಬೆತ್ತಲೆಯಾಗಿ ಸ್ನಾನ ಮಾಡ್ಬೇಕು, ಪತ್ನಿಗೆ ಪತಿಯ ಕಿರುಕುಳ!

By Santosh NaikFirst Published Aug 23, 2022, 1:09 PM IST
Highlights

ಗಂಡು ಮಗು ಬೇಕಾದಲ್ಲಿ ನಿನ್ನ ಪತ್ನಿ ಸಾರ್ವಜನಿಕವಾಗಿ ಬೆತ್ತಲೆಯಾಗಿ ಸ್ನಾನ ಮಾಡಬೇಕು ಎಂದು ವ್ಯಕ್ತಿಯೊಬ್ಬನಿಗೆ ಮುಸ್ಲಿಂ ಫಕೀರನೊಬ್ಬ ಹೇಳಿದ್ದ. ಇದೇ ವಿಚಾರವಾಗಿ ಹೆಂಡತಿಯನ್ನು ಪೀಡಿಸುತ್ತಿದ್ದ ಗಂಡ ಹಾಗೂ ಆತನ ಮನೆಯವರನ್ನು ಪುಣೆಯ ಪೊಲೀಸರು ಬಂದಿಸಿದ್ದಾರೆ.

ಪುಣೆ (ಆ.23): ಆಘಾತಕಾರಿ ಘಟನೆಯೊಂದರಲ್ಲಿ, ನಿಮ್ಮ ಕುಟುಂಬದಲ್ಲಿ ಗಂಡು ಮಗು ಬೇಕಾದಲ್ಲಿ, ನಿನ್ನ ಪತ್ನಿ ಸಾರ್ವಜನಿಕಗಾಗಿ ಬೆತ್ತಲೆಯಾಗಿ ಸ್ನಾನ ಮಾಡಬೇಕು ಎಂದು ಮುಸ್ಲಿಂ ಫಕೀರನೊಬ್ಬನ ಸಲಹೆಯನ್ನು ಪಾಲಿಸುವಂತೆ ಪತ್ನಿಗೆ ಕಿರುಕುಳ ನೀಡಿದ್ದ ಗಂಡ ಹಾಗೂ ಆತನ ಮನೆಯವನ್ನು ಪುಣೆಯಲ್ಲಿ ಬಂಧಿಸಲಾಗಿದೆ. ತಮ್ಮ ಕುಟುಂಬಕ್ಕೆ ಯಾವುದೇ ಉತ್ತರಾಧಿಕಾರಿಯಿಲ್ಲ, ಹಾಗಾಗಿ ಗಂಡು ಮಗು ಬೇಕು ಎನ್ನುವ ಕಾರಣಕ್ಕೆ, ಇಡೀ ಕುಟುಂಬ ಮುಸ್ಲಿಂ ಫಕೀರನ ಸಲಹೆ ಕೇಳಿತ್ತು. ಅದಕ್ಕೆ ಆತ, "ನಿನ್ನ ಪತ್ನಿ ಗಂಡು ಮಗುವಿಗೆ ಖಂಡಿತಾ ಜನ್ಮ ನೀಡುತ್ತಾಳೆ. ಆದರೆ, ಅದಕ್ಕಾಗಿ ಆಕೆ ಬಯಲಿನಲ್ಲಿ ಬೆತ್ತಲೆಯಾಗಿ ಸ್ನಾನ ಮಾಡಬೇಕು' ಎಂದು ಹೇಳಿದ್ದ. ಈ ಸಲಹೆಯನ್ನು ಪಾಲಿಸುವಂತೆ ಗಂಡ ಪ್ರತಿ ದಿನ ಪತ್ನಿಗೆ ಪೀಡಿಸುತ್ತಿದ್ದ. ಇದರಿಂದ ರೋಸಿಹೋದ ಪತ್ನಿ, ಇಲ್ಲಿನ ಭಾರತಿ ವಿದ್ಯಾಪೀಠ ಪೋಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಗಂಡ ಸೇರಿದಂತೆ ಆತನ ಮನೆಯ ನಾಲ್ವರು ಸದಸ್ಯರು ಹಾಗೂ ಮುಸ್ಲಿಂ ಫಕೀರ ಮೌಲಾನಾ ಬಾಬಾ ಜಾಮದಾರ್‌ ವಿರುದ್ಧ ದೂರು ಸಲ್ಲಿಸಲಾಗಿದೆ. ಇದರ ಆಧಾರದಲ್ಲಿ ಪೊಲೀಸರು ಕೂಡ ಎಫ್‌ಐಆರ್‌ ದಾಖಲಿಸಿದ್ದು, ಇವರ ಹುಡುಕಾಟ ನಡೆಸಲಾಗಿದೆ.

ಬ್ಲ್ಯಾಕ್‌ ಮ್ಯಾಜಿಕ್‌ ಆಕ್ಟ್‌ನಲ್ಲಿ ಪ್ರಕರಣ: ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 498 (ಗಂಡ ಅಥವಾ ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸುವ ಸಂಬಂಧಿ) ಮತ್ತು ಮಾನವಬಲಿ, ಅಮಾನವೀಯ, ದುಷ್ಟ, ಅಘೋರಿ ಆಚರಣೆಗಳು ಸೇರಿದಂತೆ ಮಹಾರಾಷ್ಟ್ರದ 2013ರ ಬ್ಲ್ಯಾಕ್ ಮ್ಯಾಜಿಕ್ ಆಕ್ಟ್ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎಂದು ಭಾರತಿ ವಿದ್ಯಾಪೀಠ ಪೊಲೀಸ್‌ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. 

ನಿರುದ್ಯೋಗ: 11 ತಿಂಗಳ ಮಗುವನ್ನೇ ಕೊಂದು ಕಾಲುವೆಗೆ ಎಸೆದ ಅಪ್ಪ!

ರಾಯಗಢಕ್ಕೆ ಕರೆದುಕೊಂಡು ಹೋಗಿದ್ದ ಕುಟುಂಬ: ಪೊಲೀಸ್ ಅಧಿಕಾರಿಯು ಪ್ರಕರಣದ ಕುರಿತಾಗಿ ಮತ್ತಷ್ಟು ಮಾಹಿತಿ ನೀಡಿದ್ದು, “2013 ರಿಂದ ವರದಕ್ಷಿಣೆಗಾಗಿ ಮತ್ತು ಗಂಡು ಮಗುವಿಗೆ ಜನ್ಮ ನೀಡದಿದ್ದಕ್ಕಾಗಿ ತನ್ನ ಅತ್ತೆಯಂದಿರು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ, ಅದರ ನಂತರ ಅವರು ಹಲವಾರು ಮಾಟವನ್ನೂ ಸಹ ಮಾಡುತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ. ಇತ್ತೀಚೆಗೆ ಸ್ಥಳೀಯ ಮುಸ್ಲಿಂ ಫಕೀರನೊಬ್ಬ ನೀಡಿದ ಸಲಹೆಯಂತೆ ಸಾರ್ವಜನಿಕವಾಗಿ ಜಲಪಾತದ ಕೆಳಗೆ ಬೆತ್ತಲೆಯಾಗಿ ಸ್ನಾನ ಮಾಡುವಂತೆ ಹೇಳಿದ್ದನ್ನು ಪಾಲಿಸುವಂತೆ ಪೀಡಿಸುತ್ತಿದ್ದರು. ಇದರಿಂದಾಗಿ ನಾನು ಗಂಡು ಮಗುವಿಗೆ ಜನ್ಮ ನೀಡುತ್ತೇನೆ ಎಂದು ಅವರಿಗೆ ಭರವಸೆ ನೀಡಿದ್ದ. ವಿಧಿ ವಿಧಾನಗಳ ನಂತರ ಸಂತ್ರಸ್ತ ಮಹಿಳೆಯನ್ನು ರಾಯಗಢ ಜಿಲ್ಲೆಗೆ ಕರೆದೊಯ್ದು ಸಾರ್ವಜನಿಕವಾಗಿ ಬೆತ್ತಲೆಯಾಗಿ ಸ್ನಾನ ಮಾಡುವಂತೆ ನನಗೆ ಹೇಳಿದ್ದರು' ಎಂದು ದೂರಿನಲ್ಲಿ ಬರೆದಿದ್ದಾರೆ ವ್ಯಾಪಾರ ಉದ್ದೇಶಕ್ಕಾಗಿ ತನ್ನ ಆಸ್ತಿಯ ಮೇಲೆ 75 ಲಕ್ಷ ರೂಪಾಯಿ ಸಾಲ ಪಡೆಯಲು ಪತಿ ತನ್ನ ಸಹಿಯನ್ನು ನಕಲಿ ಮಾಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಒಂದೇ ಒಂದು ಟೆಲಿಗ್ರಾಮ್‌ ಮೆಸೇಜ್‌ನಿಂದ ಕೆಮಿಸ್ಟ್ರಿ ಪದವೀಧರ ಕೋಟ್ಯಧೀಶನಾಧ!

 ಈಕೆಗೆ ಮಕ್ಕಳಿರಲಿಲ್ಲ. ಮುಸ್ಲಿಂ ಫಕೀರನೊಬ್ಬ ನೀಡಿದ ಸಲಹೆಯಂತೆ, ಮಹಿಳೆಯನ್ನು ರಾಯಗಢ ಜಿಲ್ಲೆಯಲ್ಲಿ ಜಲಪಾತದ ಬಳಿಕೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ, ಸಾಕಷ್ಟು ಜನರ ನಡುವೆಯೇ ಆಕೆಗೆ ಬೆತ್ತಲೆಯಾಗಿ ಸ್ನಾನ ಮಾಡುವಂತೆ ಪೀಡಿಸಿದ್ದರು. ಇದಕ್ಕೆ ಆಕೆ ಒಪ್ಪಿರಲಿಲ್ಲ. ಈ ಕುರಿತಾಗಿ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಅಂಬೇಗಾಂವ್ ಬುದ್ರುಕ್‌ನಲ್ಲಿರುವ ತಮ್ಮ ಮನೆ ಮತ್ತು ಅಕುರ್ಡಿ, ಶಿರೋಲ್ ಮತ್ತು ಇಂದಾಪುರ ತಹಸಿಲ್‌ನ ಸುರ್ವಾದ್ ಗ್ರಾಮದಲ್ಲಿರುವ ಕಚೇರಿಗಳಲ್ಲಿ ಮಾಟ ಮಾಡಿದ್ದ. ನಂತರ ಕುಟುಂಬದವರಿಗೆ ಆಕೆಯನ್ನು ಸಾರ್ವಜನಿಕವಾಗಿ ಜಲಪಾತದ ಕೆಳಗೆ ಬೆತ್ತಲೆಯಾಗಿ ಸ್ನಾನ ಮಾಡುವಂತೆ ಹೇಳುವಂತೆ ಸೂಚಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

click me!