
ಬೆಂಗಳೂರು(ನ. 16) ನ್ಯಾಯಾಧೀಶರ ಮನೆಯಲ್ಲಿ ಮದುವೆಯಿದೆ ಎಂದು ಸೀರೆ ಖರೀದಿಸಿ ಹಣ ನೀಡದೆ ಎಸ್ಕೇಪ್ ಆದ ಚಾಲಾಕಿ ಚೋರಿ ಕೊನೆಗೂ ಸಿಕ್ಕಿಬಿದ್ದಿದ್ದಾಳೆ. ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಂಚನೆ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ನ್ಯಾಯಾದೀಶರ ಮನೆಯಲ್ಲಿ ಮದುವೆಯಿದೆ ಎಂದು ಪಾಟೂರು ಪಟ್ಟು ಸೀರೆ ಬೇಕೆಂದು ಅಂಗಡಿ ಮಾಲೀಕರಿಗೆ ಕರೆ ಮಾಡಿದ್ದ ಶಶಿಕಲಾ ಸೀರೆ ತರಿಸಿಕೊಂಡಿದ್ದರು. ಪೆಂಡಮ್ ಅನ್ನೋರಿಗೆ ಕರೆ ಮಾಡಿ ಸೀರಿ 3 ಲಕ್ಷ ಬೆಲೆ ಬಾಳುವ 120 ಸೀರೆ ಖರೀದಿಸಿ ಹಣ ನೀಡದೆ ಎಸ್ಕೇಪ್ ಆಗಿದ್ದಳು.
ಮೇಕಪ್ ರಾಣಿ ಪೂಜಾ ಆಂಟಿ.. ಮಂಡ್ಯದಲ್ಲಿ ಮಾಡಿದ್ದ ಚಮತ್ಕಾರ
ಸಂಪಿಗೆಹಳ್ಳಿಯ ಯುನಿಷೇರ್ ಪನಮೆರಾ ಅಪಾರ್ಟ್ ಮೆಂಟ್ ಗೆ ಸೀರೆ ತರೆಸಿಕೊಂಡಿದ್ದಳು. ಸೀರೆಯನ್ನ ನ್ಯಾಯಾಧೀಶರಿಗೆ ತೋರಿಸಿ ಬಳಿಕ ಹಣ ನೀಡುವುದಾಗಿ ಹೇಳಿ ಎಸ್ಕೇಪ್ ಆಗಿದ್ದಳು. ಸದ್ಯ ಆರೋಪಿತೆಯನ್ನ ಬಂಧಿಸಿ 120 ಸೀರೆ ಜಪ್ತಿ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ