ಬೆಂಗಳೂರು: ಕಾಲ್ ಬಾಯ್ ಆಗಲು ಹೋಗಿ ಹಣ ಕಳೆದುಕೊಂಡ ಇಂಜಿನಿಯರ್

Published : Jul 14, 2020, 02:39 PM ISTUpdated : Jul 14, 2020, 02:42 PM IST
ಬೆಂಗಳೂರು: ಕಾಲ್ ಬಾಯ್ ಆಗಲು ಹೋಗಿ ಹಣ ಕಳೆದುಕೊಂಡ ಇಂಜಿನಿಯರ್

ಸಾರಾಂಶ

'ಮಹಿಳೆಯರ ಜತೆ ಲೈಂಗಿಕ ಕ್ರಿಯೆ ಮಾಡಿದ್ರೆ ಹಣ ಕೊಡ್ತೇನೆ/ ನಂಬಿ ಶುಲ್ಕ ಭರಿಸಿದ ಇಂಜಿನಿಯರ್‌ ಗೆ ಪಂಗನಾಮ/ 83  ಸಾವಿರ ರೂ. ವಂಚಿಸಿದ ಖದೀಮರು/ ಅಮೃತಹಳ್ಳಿ ನಿವಾಸಿಗೆ ವಂಚನೆ

ಬೆಂಗಳೂರು(ಜು. 14) 'ಮಹಿಳೆಯರ ಜತೆ ಲೈಂಗಿಕ ಕ್ರಿಯೆ ಮಾಡಿದ್ರೆ ಹಣ ಕೊಡ್ತೇನೆ'   ಇದನ್ನು ನಂಬಿದವ ಭಾರೀ ವಂಚನೆಗೆ ಒಳಗಾಗಿದ್ದಾನೆ. ನೋಂದಣಿ ನೆಪದಲ್ಲಿ ಇಂಜಿನಿಯಯರ್ ಒಬ್ಬರಿಂದ ಬರೋಬ್ಬರಿ 83  ಸಾವಿರ ರೂ. ಪಡೆದುಕೊಂಡು ಟೋಪಿ ಹಾಕಿದ್ದಾರೆ.

ಅಮೃತಹಳ್ಳಿ ನಿವಾಸಿ  26  ವರ್ಷದ ಇಂಜಿನಿಯರ್ ದೂರು ದಾಖಲಿಸಿದ್ದಾರೆ. ಲಾಕ್ ಡೌನ್ ಕಾರಣಕ್ಕೆ ಇಂಜಿನಿಯರ್ ಕೆಲಸ ಮಾಡುತ್ತಿದ್ದ ಕೆಲವರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಮುಂದಿನ ದಿನಗಳಲ್ಲಿ ತನಗೂ ಇದೇ ಸ್ಥಿತಿ ಬರಬಹುದು ಎಂದು ಆತಂಕದಲ್ಲಿದ್ದ.

ಅಪರಿಚಿತಳ ಜತೆ ಸೆಕ್ಸ್ ನಲ್ಲಿರುವಾಗಲೇ ಹಾರ್ಟ್ ಅಟ್ಯಾಕ್; ಪರಿಹಾರ ಕಟ್ಗೋಡಿ ಎಂದ ಕೋರ್ಟ್

ಜಾಲತಾಣವೊಂದರಲ್ಲಿ ಸಿಕ್ಕ ನಂಬರ್ ಗೆ ಕರೆ ಮಾಡಿ ಕೆಲಸ ಇದೆಯಾ ಎಂದು ವಿಚಾರಿಸಿದ್ದಾರೆ.  ಕೆಲಸ ಇದೆ, ಮಹಿಳೆಯರ ಜತೆ ಲೈಂಗಿಕ ಕ್ರಿಯೆ ನಡೆಸಬೇಕು, ನಿಮಗೆ ನಾವೇ ಹಣ ಕೊಡುತ್ತೇವೆ ಎಂದು ಹೇಳಲಾಗಿದೆ. ಇದಕ್ಕಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಇದನ್ನು ನಂಬಿದ ಇಂಜಿನಿಯರ್ ಹಣ ಹಾಕಿದ್ದಾರೆ. ಹಂತಹಂತವಾಗಿ ಇಂಜಿನಿಯರ್ ರಿಂದ  83  ಸಾವಿರ ರೂ. ಪಡೆದುಕೊಳ್ಳಲಾಗಿದೆ.  ನಂತರ ಕರೆ ಮಾಡುತ್ತಿದ್ದ ಮೊಬೈಲ್ ಸ್ವಿಚ್ ಆಫ್ ಆಗಿದೆ. ಈಗ ಹಣ ಕಳೆದುಕೊಂಡ ವ್ಯಕ್ತಿ ಪೊಲೀಸರ ಮೊರೆ ಹೋಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು