ಎಟಿಎಂ ಮಷಿನ್‌ ಒಡೆದು 23 ಲಕ್ಷ ರೂಪಾಯಿ ದೋಚಿದರು!

Suvarna News   | Asianet News
Published : Jan 01, 2020, 08:40 AM IST
ಎಟಿಎಂ ಮಷಿನ್‌ ಒಡೆದು 23 ಲಕ್ಷ ರೂಪಾಯಿ ದೋಚಿದರು!

ಸಾರಾಂಶ

ಎಟಿಎ ಮಷಿನ್‌ ಒಡೆದು 23 ಲಕ್ಷ ರೂ. ದೋಚಿದರು!| ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯ ನಾಗನಾಥಪುರ ಸಮೀಪ ಘಟನೆ

ಬೆಂಗಳೂರು[ಜ.01]: ಎಟಿಎಂ ಘಟಕವೊಂದರಲ್ಲಿ ಹಣ ತುಂಬಿದ್ದ ಯಂತ್ರ ಒಡೆದು ಕಿಡಿಗೇಡಿಗಳು .23 ಲಕ್ಷ ದೋಚಿರುವ ಘಟನೆ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯ ನಾಗನಾಥಪುರ ಸಮೀಪ ನಡೆದಿದೆ.

ನಾಗನಾಥಪುರದ ಕೆನರಾ ಬ್ಯಾಂಕ್‌ನ ಎಟಿಎಂ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮೂರು ದಿನಗಳ ಹಿಂದೆ ಎಟಿಎಂ ಘಟಕಕ್ಕೆ ರಾತ್ರಿ ವೇಳೆ ಪ್ರವೇಶಿಸಿರುವ ಮುಸುಕುಧಾರಿ ದುಷ್ಕರ್ಮಿಗಳು, ಎಟಿಎಂ ಕೇಂದ್ರಕ್ಕೆ ಸಂಪರ್ಕಿಸುವ ವಿದ್ಯುತ್‌ ಸ್ಥಗಿತಗೊಳಿಸಿದ್ದಾರೆ. ಬಳಿಕ ಸಿಸಿ ಕ್ಯಾಮರಾ ಹಾಗೂ ಅಲಾರಂ ಕಾರ್ಯ ಬಂದ್‌ಗೊಳಿಸಿದ ಅವರು, ಹಣ ತುಂಬಿದ್ದ ಯಂತ್ರ ಒಡೆದು .23 ಲಕ್ಷ ದೋಚಿದ್ದಾರೆ. ಮರು ದಿನ ಬೆಳಗ್ಗೆ ಎಟಿಎಂಗೆ ಗ್ರಾಹಕರು ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಎಟಿಎಂ ಘಟಕಕ್ಕೆ ಕಾವಲುಗಾರರ ನೇಮಕವಾಗಿರಲಿಲ್ಲ. ಆರೋಪಿಗಳ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ