ವಿಧ್ವಂಸಕ ಕೃತ್ಯ ತಡೆಯಲು ಬೆಂಗಳೂರು ಪೊಲೀಸ್ ಮಾಸ್ಟರ್ ಪ್ಲ್ಯಾನ್

Published : Feb 03, 2020, 04:17 PM ISTUpdated : Feb 03, 2020, 05:19 PM IST
ವಿಧ್ವಂಸಕ ಕೃತ್ಯ ತಡೆಯಲು ಬೆಂಗಳೂರು ಪೊಲೀಸ್ ಮಾಸ್ಟರ್ ಪ್ಲ್ಯಾನ್

ಸಾರಾಂಶ

ಪಿಜಿ ಮಾಲೀಕರೊಂದಿಗೆ ಸಭೆ ನಡೆಸಿದ ಬೆಂಗಳೂರು ಪೊಲೀಸರು/ ಎಲ್ಲ ವಿದ್ಯಾರ್ಥಿಗಳ ಮಾಹಿತಿ ನೀಡಿ/ ಸೆಕ್ಯೂರಿಟಿ ತಂತ್ರ ಅಳವಡಿಸಿಕೊಳ್ಳಿ/ ಪ್ರತಿನಿತ್ಯ ಭೇಟಿ ನೀಡುವವರ ಮಾಹಿತಿಯೂ ಬೇಕು

ಬೆಂಗಳೂರು[ಫೆ. 03]  ಭಯೋತ್ಪಾದಕರು ಪಿಜಿಯಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಸಿಕ್ಕ ನಂತರ ವಾರಕ್ಕೊಮ್ಮೆ ಪಿಜಿಗಳಲ್ಲಿ ವಾಸ್ತವ್ಯ ವಿವರ ನೀಡಲು ಸೂಚನೆ ನೀಡಲಾಗಿದೆ.

ಪಿಜಿ ಮಾಲೀಕರಿಗೆ ಸ್ಥಳೀಯ ಪೊಲೀಸರು ಸೂಚನೆ ನೀಡಿದ್ದಾರೆ. ಪಿಜಿಯಲ್ಲಿ ವಾಸ್ತವ್ಯ ಇರುವ ಯುವಕರ ಸಂಪೂರ್ಣ ಮಾಹಿತಿ ಇರಬೇಕು. ಪ್ರತಿನಿತ್ಯ ಪಿಜಿಗೆ ಬಂದು ಹೋಗುವವರ ವಿವರ ಕಲೆಕ್ಟ್ ಮಾಡಬೇಕು ಎಂಧು ತಿಳಿಸಲಾಗಿದೆ.

ರಾಷ್ಟ್ರ ವಿರೋಧಿ, ಉಗ್ರಗಾಮಿ ಚಟುವಟಿಕೆ,ಭಯೋತ್ಪಾದಕತೆ ನಿಗಾ ಇಡುವುದು. ರಾಷ್ಟ್ರ ವಿರೋಧಿ ದುಷ್ಕತ್ಯಗಳಲ್ಲಿ  ಭಾಗಿಯಾಗುವಂತಹ ಯಾವುದೇ ಮಾಹಿತಿ ಇದ್ದರೂ ತಿಳಿಸಬೇಕು ಎಂದು ಹೇಳಲಾಗಿದ್ದು ಸೌತ್ ಈಸ್ಟ್, ವೈಟ್ ಫೀಲ್ಡ್ ಪೊಲೀಸರು ಪಿಜಿ ಓನರ್ ಗಳ ಜೊತೆ ಸಭೆ  ನಡೆಸಿದ್ದಾರೆ.

3 ಲಕ್ಷ ಬಾಂಗ್ಲಾದೇಶಿಗಳು ಬೆಂಗಳೂರಿನಲ್ಲಿದ್ದಾರೆ, ಸಾಕ್ಷ್ಯ ಕೊಟ್ಟ ಆಯುಕ್ತ!

ಹೊಸ ಸ್ಟುಡೆಂಟ್‌ ಗಳು ಪಿಜಿಗೆ ಸೇರುವಾಗ ಕೆಲವು ದಾಖಲೆಗಳನ್ನು ಸಂಗ್ರಹಿಸಿಡುವುದು. ಓಟರ್ ಐಡಿ,ಆಧಾರ್ ಕಾರ್ಡ್ ,ಕಾಲೇಜ್ ಐಡಿ ಕಾರ್ಡ್ ಕಲೆಕ್ಟ್ ಮಾಡುವುದು ವಿದ್ಯಾರ್ಥಿಗಳ ಪೂರ್ವಾಪರ ವಿಚಾರಣೆ ನಡೆಸುವುದು. ವಿದ್ಯಾರ್ಥಿಗಳ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ,ಸ್ಥಳೀಯ ಠಾಣೆಗೆ ನೀಡುವುದು. ಪಿಜಿಗೆ ಬಂದು ಹೋಗುವವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದು. ಯಾರ ಬಗೆಯಾದರು ಅನುಮಾನ ಬಂದಲ್ಲಿ ಕೂಡಲೇ ಪೊಲೀಸರಿಗೆ ತಿಳಿಸಬೇಕು ಎಂಬ ಸೂಚನೆಯನ್ನು ರವಾನಿಸಲಾಗಿದೆ.

ಹಾಗೇ ಪಿಜಿ ಮಾಲೀಕರು ಸೆಕ್ಯೂರಿಟಿ ಮೆಷರ್ ತೆಗೆದುಕೊಳ್ಳುಬೇಕು. ಪಿಜಿಯಲ್ಲಿ ಸಿಸಿಟಿವಿ ಅಳವಡಿಸಬೇಕು,ಸೆಕ್ಯೂರಿಟಿ ಗಾರ್ಡ್ ನೇಮಿಸಬೇಕು, ರಿಜಿಸ್ಟರ್ ಇಟ್ಟು ಅದರಲ್ಲಿ ಪ್ರತಿಯೊಬ್ಬರ ಹೆಸರು ನಮೂದಿಸಬೇಕು ಎಂದು ತಿಳಿಸಲಾಗಿದ್ದು ಕಟ್ಟುನಿಟ್ಟಿನ ಪಾಲನೆ ಮಾಡಲು ಸೂಚಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು