ನಾಯಿಮರಿ ಆಸೆಗೆ ಬಿದ್ದು ರಾಶಿ ರಾಶಿ ಹಣ ಕಳಕೊಂಡ ನಿಖಿಲ್ ಕುಮಾರ್!

Published : Jul 29, 2020, 06:26 PM IST
ನಾಯಿಮರಿ ಆಸೆಗೆ ಬಿದ್ದು ರಾಶಿ ರಾಶಿ ಹಣ ಕಳಕೊಂಡ ನಿಖಿಲ್ ಕುಮಾರ್!

ಸಾರಾಂಶ

ಶ್ವಾನದ ಆಸೆ ತೋರಿಸಿ ಆನ್ ಲೈನ್ ವಂಚನೆ/ ಹಣ ಕಳೆದುಕೊಂಡ ನಿಖಿಲ್ ಕುಮಾರ್/ ಬೆಂಗಳೂರಿನ ಸೈಬರ್ ವಿಭಾಗಕ್ಕೆ ದೂರು/ ಶ್ವಾನ ಪ್ರಿಯರಿಗೆ ಎಚ್ಚರಿಕೆ ಸುದ್ದಿ

ಬೆಂಗಳೂರು(ಜು. 29)  ನಾಯಿಮರಿ ಆಸೆ ತೋರಿಸಿ ಆನ್ಲೈನ್‌ ವಂಚನೆ‌ ಮಾಡಲಾಗಿದೆ!  ಬೆಂಗಳೂರಿನ ನಿಖಿಲ್ ಕುಮಾರ್ ವಂಚನೆಗೊಳಗಾದ ವ್ಯಕ್ತಿ. ಫೇಸ್‌ಬುಕ್‌ ನಲ್ಲಿ ಒಳ್ಳೆ ತಳಿಯ ನಾಯಿ ಮಾರಾಟಕ್ಕಿವೆ ಅಂತ ಪೋಸ್ಟ್ ಹಾಕಲಾಗಿತ್ತು.  ಇದನ್ನು ಗಮನಿಸಿದ ನಿಖಿಲ್ ಮೆಸೇಜ್ ಮಾಡಿ ನಾಯಿ ಮರಿಯ ಬಗ್ಗೆ ವಿಚಾರಿಸಿದ್ದಾರೆ. 

ಶ್ವಾನದ ಮರಿ ಖರೀದಿಗೆ ಮಾತುಕತೆ ನಡೆಸಿದ್ದ ನಿಖಿಲ್ ಕುಮಾರ್ ಗೆ  ವಂಚಕರು ಗೋಲ್ಡನ್ ರಿಟ್ರೈವರ್ ನಾಯಿ ಮರಿ ತೋರಿಸಿದ್ದರು ಆರೋಪಿಗಳು ಕಳಿಸಿದ್ದ ಅಕೌಂಟ್ ಗೆ ಮೊದಲು ನಿಖಿಲ್ 20 ಸಾವಿರ  ರೂ. ಹಾಕಿದ್ದಾರೆ.

ನೀವು ಗೂಗಲ್ ಪೇ ಬಳಕೆದಾರರಾ.. ಈ ವಂಚನೆ ಸುದ್ದಿ ಓದಿ

ಬಳಿಕ ಅನ್ಯರಾಜ್ಯದಿಂದ ನಾಯಿ ಮರಿ ಕಳಿಸಲು 11 ಸಾವಿರ ಹಣ ಹೆಚ್ಚುವರಿಯಾಗಿ ಕಳಿಸುವಂತೆ  ವಂಚಕರು ಕೇಳಿದ್ದಾರೆ. ಅದರಂತೆ ಆ ಹಣವನ್ನು ಸಹ ಬ್ಯಾಂಕ್ ಖಾತೆಗೆ ನಿಖಿಲ್ ಕುಮಾರ್  ಹಾಕಿದ್ದಾರೆ.

ಇದಾದ ಬಳಿಕ ಸಂಪರ್ಕ ಮಾಡುತ್ತಿದ್ದ ಮೊಬೈಲ್  ಸ್ವಿಚ್ ಆಫ್ ಆಗಿದ್ದು ಸೈಬರ್ ಅಪರಾಧ ವಿಭಾಗಕ್ಕೆ ದೂರು ನೀಡಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!
ಹುನುಗುಂದದಲ್ಲಿ ಮಂಕಿ ಕ್ಯಾಪ್ ಗ್ಯಾಂಗ್: ಒಂದೇ ರಾತ್ರಿ, 9 ಮನೆ ಕಳವು, ಪೋಲಿಸರ ಮನೆಗಳನ್ನೇ ಬಿಡದ ಖದೀಮರು!