ಶಿವಮೊಗ್ಗ: ಬಿಜೆಪಿಗೆ ಮತ ಹಾಕಿದ್ದಕ್ಕೆ ಆಟೋಚಾಲಕನಿಗೆ ಹಲ್ಲೆ, ಆಟೋ ಜಖಂ

Published : May 15, 2023, 08:35 PM IST
ಶಿವಮೊಗ್ಗ: ಬಿಜೆಪಿಗೆ ಮತ ಹಾಕಿದ್ದಕ್ಕೆ ಆಟೋಚಾಲಕನಿಗೆ ಹಲ್ಲೆ, ಆಟೋ ಜಖಂ

ಸಾರಾಂಶ

ತಾನು ಬಿಜೆಪಿಗೆ ಮತ ಹಾಕಿದ್ದೇನೆ ಎಂದು ಹೇಳಿದ ಕಾರಣಕ್ಕೆ ಅನ್ಯಕೋಮಿನ ಗುಂಪು ತಮ್ಮ ಮೇಲೆ ಹಲ್ಲೆ ನಡೆಸಿ, ತನ್ನ ಆಟೋವನ್ನು ಜಖಂ ಮಾಡಿದ್ದಾರೆ ಎಂದು ಆಟೋ ಚಾಲಕ ಪೊಲೀಸರಿಗೆ ದೂರು ನೀಡಿದ್ದಾರೆ. ನಗರದ ಹೊರವಲಯದ ಸೋಮಿನಕೊಪ್ಪದಲ್ಲಿ ಈ ಘಟನೆ ನಡೆದಿದೆ.

ಶಿವಮೊಗ್ಗ ಮೇ.15) ತಾನು ಬಿಜೆಪಿಗೆ ಮತ ಹಾಕಿದ್ದೇನೆ ಎಂದು ಹೇಳಿದ ಕಾರಣಕ್ಕೆ ಅನ್ಯಕೋಮಿನ ಗುಂಪು ತಮ್ಮ ಮೇಲೆ ಹಲ್ಲೆ ನಡೆಸಿ, ತನ್ನ ಆಟೋವನ್ನು ಜಖಂ ಮಾಡಿದ್ದಾರೆ ಎಂದು ಆಟೋ ಚಾಲಕ ಪೊಲೀಸರಿಗೆ ದೂರು ನೀಡಿದ್ದಾರೆ. ನಗರದ ಹೊರವಲಯದ ಸೋಮಿನಕೊಪ್ಪದಲ್ಲಿ ಈ ಘಟನೆ ನಡೆದಿದೆ.

ಹರೀಶ್‌ರಾವ್‌(Harish rao Auto driver shivamogga) ಎಂಬ ಆಟೋ ಚಾಲಕ ಮತ್ತು ನಜ್ರು, ಅಬ್ರಾರ್‌ ಅಲಿಯಾಸ್‌ ಇಡ್ಲಿ ಹಾಗೂ ಮತ್ತೊಬ್ಬ ಯುವಕನ ನಡುವೆ ಚುನಾವಣೆ ಸಂಬಂಧ ಮಾತುಕತೆ ನಡೆದಿದೆ. ಈ ವೇಳೆಯಲ್ಲಿ ನೀನು ಯಾರಿಗೆ ಮತ ಹಾಕಿದ್ದಿ ಎಂದು ನಜ್ರು ಕೇಳಿದ್ದಾನೆ. ಹರೀಶ್‌ ರಾವ್‌ ಬಿಜೆಪಿಗೆ ಎಂದು ತಿಳಿಸಿದ್ದಾರೆ. ತಕ್ಷಣವೇ ನಜ್ರು ಮತ್ತು ಇತರರು ಹರೀಶ್‌ ರಾವ್‌ ಅವರನ್ನು ಥಳಿಸಿದ್ದಲ್ಲದೇ, ಆಟೋವನ್ನು ಕೂಡ ಜಖಂಗೊಳಿಸಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

 

ಕೆ ಎಸ್ ಈಶ್ವರಪ್ಪಗೆ ಕಜಿಕಿಸ್ತಾನದಿಂದ ಬೆದರಿಕೆ ಕರೆ, ದೂರು ದಾಖಲು

ಎಸ್‌ಪಿ ಕಚೇರಿಗೆ ಭೇಟಿ:

ಈ ಸಂಬಂಧ ಹರೀಶ್‌ ರಾವ್‌ ಜಖಂಗೊಂಡ ಆಟೋದೊಂದಿಗೆ ಎಸ್‌ಪಿ ಕಚೇರಿಗೆ ಆಗಮಿಸಿದ್ದಾರೆ. ಈ ವೇಳೆಯಲ್ಲಿ ಎಸ್‌ಪಿ ಮಿಥುನ್‌ಕುಮಾರ್‌ ಅವರಿಗೆ ತಮ್ಮ ದೂರು ಸಲ್ಲಿಸಿ ಹೊರಬಂದ ಈಶ್ವರಪ್ಪ ಅವರನ್ನು ಹರೀಶ್‌ ರಾವ್‌ ಕಂಡಿದ್ದಾರೆ. ಆಗ ಈಶ್ವರಪ್ಪರ​ವರ ಕಾಲಿಗೆ ಬಿದ್ದು, ತನಗೆ ರಕ್ಷಣೆ ನೀಡುವಂತೆ ಮನವಿ ಮಾಡಿದರು.

ಕಾಂಗ್ರೆಸ್‌ ವಿಜಯೋತ್ಸವ ವೇಳೆ ಗಲಾಟೆ: ಬಿಜೆಪಿ ಕಾರ‍್ಯಕರ್ತನ ಕೊಲೆ!

ಆಗ ಈಶ್ವ​ರಪ್ಪ ಅವರು ಹೆದರಬೇಕಾಗಿಲ್ಲ, ನಾನು ಜೊತೆಗಿದ್ದೇನೆ ಎಂದು ಬೆನ್ನುತಟ್ಟಿಸಾಂತ್ವನ, ಭರವಸೆ ನೀಡಿದರು. ಕ್ಷಣವೇ ಎಸ್‌ಪಿ ಅವರಿಗೆ ಕರೆ ಮಾಡಿ ಘಟನೆ ವಿವರಿಸಿ, ಎಲ್ಲಿಗೆ ದೂರು ನೀಡಬೇಕೆಂದು ಕೇಳಿದ್ದಾರೆ. ನನ್ನ ಬಳಿ ಕಳಿಸಿ ಎಂದಾಗ ಎಸ್‌ಪಿ ಅವರ ಬಳಿಗೆ ಹರೀಶ್‌ ರಾವ್‌ ಅವ​ರ​ನ್ನು ಕಳಿಸಿಕೊಟ್ಟರು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಎಸ್‌ಪಿ ಅವ​ರಿ​ಗೆ ಸೂಚನೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!