ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಗಲಾಟೆ, ಯೋಧನ ಕುಟುಂಬದ ಮೇಲೆ ಮಾರಣಾಂತಕ ಹಲ್ಲೆ

By Suvarna NewsFirst Published Feb 14, 2021, 1:15 PM IST
Highlights

ಬಸಪ್ಪ ನಂದ್ಯಾಗೋಳ ಹಾಗೂ ಬಾಳಪ್ಪ ಯದ್ದಲಗುಡ್ಡ ಕುಟುಂಬ ಮಧ್ಯೆ ಗಲಾಟೆ| ಬೆಳಗಾವಿ ತಾಲೂಕಿನ ಸೋಮನಟ್ಟಿ ಗ್ರಾಮದಲ್ಲಿ ನಡೆದ ಘಟನೆ| ಮೊಮ್ಮಗಳನ್ನು ಬೈದಿದ್ದನ್ನ ಪ್ರಶ್ನಿಸಿದ್ದಕ್ಕೆ ಹಲ್ಲೆ| ಬಾಳಪ್ಪ ಯದ್ದಲಗುಡ್ಡ ಸೇರಿ‌ ಒಟ್ಟು 9 ಜನರ ವಿರುದ್ಧ ಪ್ರಕರಣ ದಾಖಲು|

ಬೆಳಗಾವಿ(ಫೆ.14): ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬಗಳ ಮಧ್ಯೆ ಗಲಾಟೆ ನಡೆದ ಪರಿಣಾಮ ಯೋಧರ ಕುಟುಂಬದ ಮೇಲೆ ಪಕ್ಕದ ಮನೆಯವರು ಹಲ್ಲೆ ಮಾಡಿದ ಘಟನೆ ತಾಲೂಕಿನ ಸೋಮನಟ್ಟಿ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. 

ಕ್ಷುಲ್ಲಕ ಕಾರಣಕ್ಕೆ ಬಸಪ್ಪ ನಂದ್ಯಾಗೋಳ ಹಾಗೂ ಬಾಳಪ್ಪ ಯದ್ದಲಗುಡ್ಡ ಕುಟುಂಬ ಮಧ್ಯೆ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಸಪ್ಪ ನಂದ್ಯಾಗೋಳರವರ ಮೊಮ್ಮಗಳನ್ನು ಬೈದಿದ್ದನ್ನ ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಬಾಳಪ್ಪ ಯದ್ದಲಗುಡ್ಡ ಅವರ ಕುಟುಂಬ ಹಲ್ಲೆ ಮಾಡಿದೆ ಎಂದು ಹೇಳಲಾಗುತ್ತಿದೆ. 

ಪೊಲೀಸರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ: ರೌಡಿಶೀಟರ್‌ ಕಾಲಿಗೆ ಗುಂಡೇಟು

ಯೋಧನ ತಂದೆ ಬಸಪ್ಪ, ತಾಯಿ ನಾಗವ್ವ, ತಮ್ಮ ಲಕ್ಷ್ಮಣ್ ಮೇಲೆ ಹಲ್ಲೆ ನಡೆಸಲಾಗಿದೆ. ಯೋಧನ ತಮ್ಮ ಲಕ್ಷ್ಮಣ್‌ಗೆ ಗಂಭೀರವಾದ ಗಾಯವಾಗಿದ್ದು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಬಾಳಪ್ಪ ಯದ್ದಲಗುಡ್ಡ ಸೇರಿ‌ ಒಟ್ಟು 9 ಜನರ ವಿರುದ್ಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

click me!