
ಕೋಲಾರ (ಮೇ.3): ಈಜು ಬಾರದಿದ್ದರೂ ಕೃಷಿಹೊಂಡದಲ್ಲಿ ಈಜಾಡಲು ಹೋಗಿ ಮೃತಪಟ್ಟ ಘಟನೆ ಕೋಲಾರ ತಾಲೂಕಿನ ನಾಗನಾಳ ಗ್ರಾಮದಲ್ಲಿ ನಡೆದಿದೆ.
ಗೌತಮ್ ಗೌಡ (26) ಮೃತ ದುರ್ದೈವಿ. ಮೈಸೂರಿನ ರಾಘವೇಂದ್ರನಗರ ನಿವಾಸಿಯಾಗಿರುವ ಗೌತಮ್ ಗೌಡ. ತಮ್ಮ ತಂದೆಯ ಊರಾದ ವೇಮಗಲ್ ಸಮೀಪದ ನಾಗನಾಳ ಗ್ರಾಮಕ್ಕೆ ಆಗಮಿಸಿದ್ದ ಯುವಕ. ವಿಪರೀತ ಬಿಸಲು ಹಿನ್ನೆಲೆ ಜಮೀನಲ್ಲಿದ್ದ ಕೃಷಿ ಹೊಂಡದಲ್ಲಿ ಈಜಾಡಲು ಬುಧವಾರ ಕುಟುಂಬದವರೊಂದಿಗೆ ತೆರಳಿದ್ದ. ಯುವಕನ ಜೊತೆಗೆ ತಂಗಿ ಇದ್ದಳು.
ಅಣ್ಣ ಕೃಷಿ ಹೊಂಡದಲ್ಲಿ ಜಂಪ್ ಮಾಡಿ ಈಜಾಡುವುದನ್ನು ವಿಡಿಯೋ ಮಾಡುತ್ತಿದ್ದ ತಂಗಿ. ಕೃಷಿ ಹೊಂಡಕ್ಕೆ ಜಂಪ್ ಮಾಡಿ ದಡ ಸೇರುವಾಗಲೇ ಹಿಂದಕ್ಕೆ ಚಲಿಸಿದ ಯುವಕ ಅಲ್ಲಿಂದ ಎಷ್ಟೇ ಪ್ರಯತ್ನಿಸಿದರೂ ದಡಕ್ಕೆ ಬಾರಲಾಗದೆ ಪರದಾಡಿರುವ ಯುವಕ. ಕೃಷಿ ಹೊಂಡದಲ್ಲಿ ಮುಳುಗುತ್ತಿದ್ದರೂ ಅಣ್ಣನ ಸಹಾಯಕ್ಕೆ ಬಾರದ ಮುಳುಗುತ್ತಿರುವುದನ್ನ ವಿಡಿಯೋ ರೆಕಾರ್ಡ್ ಮಾಡುತ್ತಲೇ ನಿಂತ ತಂಗಿ! ಸಹಾಯಕ್ಕೆ ಕೈಚಾಚಿರುವುದು ವಿಡಿಯೋದಲ್ಲಿ ಕಂಡುಬಂದಿದೆ ಆದರೂ ಮೊಬೈಲ್ ಬಿಟ್ಟಾಕಿ ಅಣ್ಣನ ಸಹಾಯಕ್ಕೆ ಬಾರದೆ, ಸಹಾಯಕ್ಕಾಗಿ ಪ್ರಯತ್ನಿಸದೆ ವಿಡಿಯೋ ಮಾಡುತ್ತಲೇ ನಿಂತಿದ್ದರಿಂದ ಕಣ್ಣಮುಂದೆಯೇ ನೀರಲ್ಲಿ ಅಣ್ಣ ಮುಳುಗಿಮುಳುಗಿ ಮೃತಪಟ್ಟಿದ್ದಾನೆ.
ಬೆಂಗಳೂರಿನ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವು, ಕನಕಪುರ ಸಂಗಮದಲ್ಲಿ ಈಜಲು ತೆರಳಿದಾಗ ದುರ್ಘಟನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ