
ಧಾರವಾಡ, (ಏ.19): ಧರ್ಮಪತ್ನಿಯ ಸಹೋದರಿಯನ್ನೇ ಅಪಹರಣ ಮಾಡುವಂತೆ 10 ಲಕ್ಷ ರೂ. ಸುಪಾರಿ ನೀಡಿದ್ದ ಪ್ರಕರಣವನ್ನು ಇಲ್ಲಿಯ ಶಹರ ಠಾಣೆ ಪೊಲೀಸರು ಬೇಧಿಸಿದ್ದಾರೆ.
ಹುಬ್ಬಳ್ಳಿ ಮೂಲದ, ಕುಂದಗೋಳದ ಮಕ್ಕಳ ಅಭಿವೃದ್ಧಿ ಮತ್ತು ರಕ್ಷಣೆ ಕಚೇರಿಯಲ್ಲಿ ಎಫ್ಡಿಎ ನೌಕರನಾಗಿದ್ದ ಮಕ್ತುಂ ಅಲಿ ಟೋಪದಾರ (35) ತನ್ನ ಪತ್ನಿಯ ಸಹೋದರಿಯ ಮೇಲೆ ಮೋಹಗೊಂಡು ಆಕೆಯನ್ನು ಮದುವೆಯಾಗುವುಕ್ಕೆ ಸಂಚು ರೂಪಿಸಿದ್ದನು. ಅದಕ್ಕಾಗಿ ಪ್ರವೀಣ ನಾಯ್ಕ್ (25) ಹಾಗೂ ಚೇತನ್ ಹಡಪದ ಎಂಬುವವರೊಂದಿಗೆ 10 ಲಕ್ಷಕ್ಕೆ ಸುಪಾರಿ ನೀಡಿದ್ದನು. ಆ ಪೈಕಿ ಈ ಇಬ್ಬರಿಗೂ ಮಕ್ತುಂ 5 ಲಕ್ಷ ರೂ. ಮುಂಗಡ ಹಣ ನೀಡಿದ್ದನು.
ಮಧ್ಯರಾತ್ರಿ ಹುಡುಗನಿಗೆ ಪ್ರೇಯಸಿಯ ಮೆಸೇಜ್...ಮಿಡ್ನೈಟ್ ಸಿಕ್ರೇಟ್ ಕಹಾನಿ
ಸಹೋದರಿ ಅಪಹರಣವಾದ ಕಾರಣ ಈ ಕುರಿತು ಮಕ್ತುಂ ಅಲಿ ಪತ್ನಿ ನಾಜಿಯಾಬಾನು ಧಾರವಾಡ ಶಹರ ಠಾಣೆಯಲ್ಲಿ ಏ.13 ರಂದು ದೂರು ನೀಡಿದ್ದರು. ದೂರಿನ ಆಧಾರದ ಮೇರೆಗೆ ತನಿಖೆ ನಡೆಸಿದಾಗ ಮುಕ್ತುಂ ಅಲಿಯೇ ಈ ಕೃತ್ಯ ಮಾಡಿರುವುದು ಗೊತ್ತಾಗಿದೆ. ಸದ್ಯ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ