ವೆಲ್ಡಿಂಗ್ ಶಾಪ್‌ನವರ ಮನೆ ಹಾಳು ಕೆಲ್ಸಕ್ಕೆ 8 ವರ್ಷದ ಯುವರಾಜ್ ಬಲಿ

Published : Jan 04, 2020, 09:02 PM IST
ವೆಲ್ಡಿಂಗ್ ಶಾಪ್‌ನವರ ಮನೆ ಹಾಳು ಕೆಲ್ಸಕ್ಕೆ 8 ವರ್ಷದ ಯುವರಾಜ್ ಬಲಿ

ಸಾರಾಂಶ

ವೆಲ್ಡಿಂಗ್ ಶಾಪ್ ಮಾಲೀಕರ ಕಾರ್ಯಕ್ಕೆ ಒಂದು ಅಮಾಯಕ ಮಗುವಿನ ಜೀವ ಹೋಗಿದೆ. ರಸ್ತೆಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಮಗುವಿನ ಮೇಲೆ ಕಬ್ಬಿಣದ ಗ್ರಿಲ್ ಬಿದ್ದಿದೆ.

ಶಿವಮೊಗ್ಗ, [ಜ.04]: ಕಬ್ಬಿಣದ ಗ್ರಿಲ್ ಬಿದ್ದು 8 ವರ್ಷದ ಮಗು ಮೃತಪಟ್ಟ ಘಟನೆ ಶನಿವಾರ ಶಿವಮೊಗ್ಗ ನಗರದಲ್ಲಿ ನಡೆದಿದೆ.

ಶಿವಮೊಗ್ಗ ನಗರದ ಲಕ್ಷ್ಮೀ ಚಲನಚಿತ್ರ ಮಂದಿರದ ಎದುರಿನ ಹೊಸಮನೆ ಚಾನಲ್ ರಸ್ತೆಯಲ್ಲಿ ಆಟವಾಡುತ್ತಿರುವ ಬಾಲಕನ ಮೇಲೆ ದೊಡ್ಡದಾದ ಕಬ್ಬಿಣದ ಗ್ರಿಲ್ ಬಿದ್ದಿದೆ. ಪರಿಣಾಮ ಯುವರಾಜ್ (8 ) ಎಂಬ ಬಾಲಕ ಸಾವನ್ನಪ್ಪಿದ್ದಾನೆ.

 ಬೇರೆಯವರ ಮನೆಯಲ್ಲಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದ ಅಂಬಿಕ ಇದೀಗ ಪುತ್ರನನ್ನು ಕಳೆದುಕೊಂಡು ಕಂಗಾಲಾಗಿದ್ದಾಳೆ.  ರಸ್ತೆಯಲ್ಲೇ ವೆಲ್ಡಿಂಗ್ ಶಾಪ್ ಗಳ ಕೆಲಸಗಳು ನಡೆಯುವುದರಿಂದ ಯುವರಾಜ್ ನ ಮೇಲೆ ಕಬ್ಬಿಣದ ಗ್ರಿಲ್ ಬಿದ್ದಿದೆ ಎಂದು ತಿಳಿದುಬಂದಿದೆ.

 ಶಿವಮೊಗ್ಗದ ವಿನೋಬನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೆಲ್ಡಿಂಗ್ ಶಾಪ್ ನವರ ಮನೆ ಹಾಳು ಕೆಲಸಕ್ಕೆ ಇನ್ನು ಬಾಳಿ ಬದುಕಬೇಕಿದ್ದ ಪುಟ್ಟ ಬಾಲಕ ಬಲಿಯಾಗಿದ್ದು, ಈ ಸಾವಿಗೆ ಹೊಣೆ ಯಾರು..?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪೊಲೀಸ್‌ ಚೆಕಿಂಗ್‌ ವೇಳೆ ಹೋಟೆಲ್‌ ಬಾಲ್ಕನಿಯಿಂದ ಹಾರಿದ ಬೆಂಗಳೂರು ಮಹಿಳೆ, ಸ್ಥಿತಿ ಗಂಭೀರ!
ನಕಲಿ ಕ್ಯೂಆರ್​ ಕೋಡ್​ಗೆ ಬಲಿಯಾಗದಿರಿ ಎಚ್ಚರ! ಯಾಮಾರಿದ್ರೆ ಅಕೌಂಟ್​ ಖಾಲಿ: ನಕಲಿ ಗುರುತಿಸುವುದು ಹೇಗೆ?