ಮುಷ್ತಾಕ್‌ ಅಲಿ: ಟಾಸ್ ಗೆದ್ದ ಬಿಹಾರ ಬ್ಯಾಟಿಂಗ್ ಆಯ್ಕೆ

Published : Nov 15, 2019, 01:08 PM IST
ಮುಷ್ತಾಕ್‌ ಅಲಿ: ಟಾಸ್ ಗೆದ್ದ ಬಿಹಾರ ಬ್ಯಾಟಿಂಗ್ ಆಯ್ಕೆ

ಸಾರಾಂಶ

ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ವಿರುದ್ಧ ಟಾಸ್ ಗೆದ್ದ ಬಿಹಾರ ಬ್ಯಾಟಿಂಗ್ ಆಯ್ದುಕೊಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

ವಿಶಾಖಪಟ್ಟಣಂ[ನ.15]: ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಕರ್ನಾಟಕ ತಂಡ ಬಿಹಾರ ತಂಡವನ್ನು ಎದುರಿಸಲಿದ್ದು, ಟಾಸ್ ಗೆದ್ದ ಬಿಹಾರ ಬ್ಯಾಟಿಂಗ್ ಆಯ್ದುಕೊಂಡಿದೆ. 

‘ಎ’ ಗುಂಪಿನಲ್ಲಿರುವ ಕರ್ನಾಟಕ 4 ಪಂದ್ಯಗಳನ್ನಾಡಿದ್ದು 3 ಗೆಲುವು, 1 ಸೋಲಿನೊಂದಿಗೆ 12 ಅಂಕಗಳಿಸಿದ್ದು ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಈ ಪಂದ್ಯ​ದಲ್ಲಿ ಗೆದ್ದರೆ ತಂಡ ಮತ್ತೆ ಅಗ್ರ​ಸ್ಥಾ​ನಕ್ಕೆ ಮರ​ಳ​ಲಿದ್ದು, ಸೂಪರ್‌ ಲೀಗ್‌ ಹಂತಕ್ಕೆ ಪ್ರವೇಶ ಪಡೆ​ಯು​ವುದು ಬಹುತೇಕ ಖಚಿತವಾಗ​ಲಿದೆ. 

ಮುಷ್ತಾಕ್‌ ಅಲಿ ಟ್ರೋಫಿ: ರಾಜ್ಯ ತಂಡಕ್ಕೆ ರಾಹುಲ್‌ ಸೇರ್ಪಡೆ

ಸದ್ಯ ಬರೋಡಾ 5 ಪಂದ್ಯ​ಗ​ಳಲ್ಲಿ 4 ಗೆಲು​ವು​ಗ​ಳೊಂದಿಗೆ 16 ಅಂಕ ಗಳಿಸಿ ಅಗ್ರ​ಸ್ಥಾ​ನ​ದ​ಲ್ಲಿದೆ. ಪಟ್ಟಿಯಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೂಪರ್‌ ಲೀಗ್‌ ಹಂತಕ್ಕೇರಲಿವೆ. ಮತ್ತೊಂದೆಡೆ ಬಿಹಾರ ಆಡಿ​ರುವ 4 ಪಂದ್ಯ​ಗ​ಳಲ್ಲೂ ಸೋಲುಂಡಿದ್ದು, ಕರ್ನಾ​ಟ​ಕವೇ ಗೆಲ್ಲುವ ನೆಚ್ಚಿನ ತಂಡ ಎನಿ​ಸಿ​ಕೊಂಡಿದೆ.

ಕಳೆದೆರಡು ಪಂದ್ಯದಲ್ಲಿ ಕರ್ನಾಟಕ ಬ್ಯಾಟ್ಸ್‌ಮನ್‌ಗಳಾದ ದೇವದತ್ ಪಡಿಕ್ಕಲ್ ಹಾಗೂ ನಾಯಕ ಮನೀಶ್ ಪಾಂಡೆ ಅಜೇಯ ಶತಕ ಸಿಡಿಸಿದ್ದರು. ಇಂದು ಯಾರು ಮೂರಂಕಿ ಮೊತ್ತ ದಾಖಲಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಪಂದ್ಯ ಆರಂಭ: ಮಧ್ಯಾಹ್ನ 1ಕ್ಕೆ

ನೇರ ಪ್ರಸಾರ: ಹಾಟ್‌ ಸ್ಟಾರ್‌
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

16 ವರ್ಷಗಳ ನಂತರ IPL ಹಗರಣಕ್ಕೆ ಬಿಗ್ ಟ್ವಿಸ್ಟ್‌.. ಲಲಿತ್ ಮೋದಿ ಕೇಸ್‌ ಈಗ ಎಲ್ಲರ ಬೆಚ್ಚಿಬೀಳಿಸಿದೆ..
ಗಂಭೀರ್‌ ಕೋಚ್‌ ಆದ್ಮೇಲೆ.. ಈ ಮೂರು ಹಿರಿಯ ಆಟಗಾರರ ವೃತ್ತಿ ಬದುಕಿಗೆ ಬಿದ್ದಿದೆ ಕೊನೆಯ ಮೊಳೆ..?