
ಓವಲ್ (ಆ.04) : ಭಾರತ-ಇಂಗ್ಲೆಂಡ್ ಅಂತಿಮ ಟೆಸ್ಟ್ನ ಕೊನೆಯ ದಿನ ಎರಡೂ ತಂಡಗಳು ಮೈದಾನಕ್ಕಿಳಿದಾಗ, ಅಭಿಮಾನಿಗಳು ಸರಣಿಯನ್ನು ಯಾರು ಗೆಲ್ಲುತ್ತಾರೆ ಎಂಬ ಕುತೂಹಲದಲ್ಲಿದ್ದರು. ಇಂಗ್ಲೆಂಡ್ ಗೆದ್ದರೆ 3-1 ಅಂತರದಲ್ಲಿ ಸರಣಿ ಕೈವಶವಾಗುತ್ತಿತ್ತು. ಭಾರತ ಗೆದ್ದರೆ ಸರಣಿ 2-2 ಅಂತರದಲ್ಲಿ ಸಮಬಲ, ಹೀಗಾಗಿ ಭಾರತಕ್ಕೆ ಪ್ರತಿ ಎಸೆತ ಕೂಡ ಅಷ್ಟೇ ಮುಖ್ಯವಾಗಿತ್ತು. ಅತ್ತ ಇಂಗ್ಲೆಂಡ್ಗೆ ಒಂದೊಂದು ರನ್ ಅತ್ಯಂತ ಮುಖ್ಯವಾಗಿತ್ತು. ಗೆಲುವಿಗೆ ಕೇವಲ 35 ರನ್ಗಳ ಅಗತ್ಯವಿದ್ದ ಇಂಗ್ಲೆಂಡ್ಗೆ ನಾಲ್ಕು ವಿಕೆಟ್ಗಳು ಪತನಗೊಂಡಿತ್ತು. ಆದರೆ ಆರು ರನ್ಗಳ ಅಂತರದಲ್ಲಿ ಇಂಗ್ಲೆಂಡ್ನ ಕೊನೆಯ ಬ್ಯಾಟ್ಸ್ಮನ್ನನ್ನು ಔಟ್ ಮಾಡಿ ಭಾರತ ಐದು ಪಂದ್ಯಗಳ ಸರಣಿಯನ್ನು ಸಮಬಲಗೊಳಿಸಿತ್ತು. ಸಂಭ್ರಮ ಮನೆ ಮಾಡಿತ್ತು. ಆದರೆ ಆರ್ಸಿಬಿ ಅಭಿಮಾನಿಗಳಿಗೆ ಡಬಲ್ ಸಂಭ್ರಮ. ಕಾರಣ ಆರ್ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಈ ಫಲಿತಾಂಶವನ್ನು ಮೊದಲೇ ನಿಖರವಾಗಿ ಊಹಿಸಿದ್ದರು. ದಿನೇಶ್ ಕಾರ್ತಿಕ್ ಭಾರತ ಇಂಗ್ಲೆಂಡ್ ಸರಣಿ 2-2 ಅಂತರದಲ್ಲಿ ಅಂತ್ಯಗೊಳ್ಳಲಿದೆ ಎಂದಿದ್ದರು.
ಟೆಸ್ಟ್ ಸರಣಿ ಆರಂಭಕ್ಕೂ ಮೊದಲೇ ಭವಿಷ್ಯ ನುಡಿದಿದ್ದ ಕಾರ್ತಿಕ್
ಮೊದಲ ಟೆಸ್ಟ್ ಆರಂಭವಾಗುವ ಮೊದಲೇ ಸರಣಿಯ ಫಲಿತಾಂಶವನ್ನು ನಿಖರವಾಗಿ ಊಹಿಸಿ ಭಾರತದ ಮಾಜಿ ಆಟಗಾರ ದಿನೇಶ್ ಕಾರ್ತಿಕ್ ಅಚ್ಚರಿ ಮೂಡಿಸಿದ್ದಾರೆ. ವೀಕ್ಷಕ ವಿವರಣೆಗಾರರಾಗಿ ಇಂಗ್ಲೆಂಡ್ನಲ್ಲಿದ್ದ ಕಾರ್ತಿಕ್ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ 2-2 ಅಂತರದಲ್ಲಿ ಸಮಬಲಗೊಳ್ಳುತ್ತದೆ ಎಂದು ಮೊದಲೇ ಭವಿಷ್ಯ ನುಡಿದಿದ್ದರು.
ದಿಗ್ಗಜರ ಭವಿಷ್ಯ ಉಲ್ಟಾ
ಇಂಗ್ಲೆಂಡ್ನ ಮಾಜಿ ನಾಯಕ ನಾಸರ್ ಹುಸೇನ್ 3-1 ಅಂತರದಲ್ಲಿ ಇಂಗ್ಲೆಂಡ್ ಸರಣಿ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದರು. ಮಾಜಿ ನಾಯಕರಾದ ಅಲಿಸ್ಟರ್ ಕುಕ್ ಮತ್ತು ಮೈಕೆಲ್ ವಾನ್ ಇಂಗ್ಲೆಂಡ್ 3-1 ಅಂತರದಲ್ಲಿ ಸರಣಿ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದರು. ಇಂದು ಇಂಗ್ಲೆಂಡ್ ಗೆದ್ದಿದ್ದರೆ ಮೂವರ ಭವಿಷ್ಯವೂ ನಿಜವಾಗುತ್ತಿತ್ತು.
ಇಂಗ್ಲೆಂಡ್ ಆಟಗಾರ ಜೋಸ್ ಬಟ್ಲರ್ ಮತ್ತು ಮಾಜಿ ಆಟಗಾರ ಗ್ರೇಮ್ ಸ್ವಾನ್ 4-1 ಅಂತರದಲ್ಲಿ ಇಂಗ್ಲೆಂಡ್ ಸರಣಿ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದರೆ, ದಕ್ಷಿಣ ಆಫ್ರಿಕಾದ ಬೌಲಿಂಗ್ ದಿಗ್ಗಜ ಡೇಲ್ ಸ್ಟೇನ್ ಮತ್ತು ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ 3-2 ಅಂತರದಲ್ಲಿ ಇಂಗ್ಲೆಂಡ್ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದರು. ಮಾಜಿ ಇಂಗ್ಲೆಂಡ್ ಆಟಗಾರ ಡೇವಿಡ್ ಲಾಯ್ಡ್ 4-0 ಅಂತರದಲ್ಲಿ ಇಂಗ್ಲೆಂಡ್ ಸರಣಿ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದರು.
ಭಾರತ ಸರಣಿ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದವರು ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್. 3-2 ಅಂತರದಲ್ಲಿ ಭಾರತ ಸರಣಿ ಗೆಲ್ಲುತ್ತದೆ ಎಂದು ಕ್ಲಾರ್ಕ್ ಭವಿಷ್ಯ ನುಡಿದಿದ್ದರು. ಸರಣಿ ಸಮಬಲವಾದರೂ, ಈ ಎಲ್ಲಾ ಭವಿಷ್ಯಗಳಿಗೂ ಅವಕಾಶವಿರುವ ಪಂದ್ಯಗಳೇ ಕಠಿಣ ಹೋರಾಟ ಕಂಡ ಐದು ಪಂದ್ಯಗಳ ಸರಣಿಯಲ್ಲಿತ್ತು.
ಭಾರತ ಇಂಗ್ಲೆಂಡ್ ಟೆಸ್ಟ್ ಸರಣಿ
ಭಾರತ ಇಂಗ್ಲೆಂಡ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಮುಗ್ಗರಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ಭಾರತ ಅದ್ಭುತ ಗೆಲುವು ದಾಖಲಿಸಿ ಸರಣಿ ಸಬಲ ಮಾಡಿಕೊಂಡಿತ್ತು. ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿಗೆ ಎಲ್ಲಾ ಅವಕಾಶಗಳಿತ್ತು. ಆದರೆ ನಿರೀಕ್ಷಿತ ಹೋರಾಟ ನೀಡದ ಭಾರತ ಪಂದ್ಯ ಕೈಚೆಲ್ಲಿತ್ತು. ಆದರೆ ನಾಲ್ಕನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು. ಆದರೆ ಕೊನೆಯ ಪಂದ್ಯ ಅತ್ಯಂತ ರೋಚಕವಾಗಿ ಭಾರತ ಪಂದ್ಯ ಗೆದ್ದುಕೊಂಡಿತ್ತು. ಈ ಮೂಲಕ 2-2 ಸರಣಿ ಅಂತರದಲ್ಲಿ ಸಮಭಲಗೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.