ಏಷ್ಯಾಕಪ್‌ನಲ್ಲಿ ಈತನಿಗೆ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗೊಲ್ಲ; ಹೊಸ ಬಾಂಬ್ ಸಿಡಿಸಿದ ಅಶ್ವಿನ್

Published : Aug 21, 2025, 01:59 PM IST
Ashwin-Sanju Samson

ಸಾರಾಂಶ

ಏಷ್ಯಾಕಪ್ ತಂಡದಲ್ಲಿ ಸಂಜು ಸ್ಯಾಮ್ಸನ್ ಇದ್ದರೂ ಆಡುವ ಹನ್ನೊಂದರಲ್ಲಿ ಅವಕಾಶ ಸಿಗುವುದು ಕಷ್ಟ ಎಂದು ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. ಶುಭ್‌ಮನ್ ಗಿಲ್ ಉಪನಾಯಕರಾಗಿರುವುದರಿಂದ ಸಂಜು ಸ್ಥಾನ ಅಲುಗಾಡಿದೆ ಎಂದು ಅವರು ಹೇಳಿದ್ದಾರೆ.

ಚೆನ್ನೈ: ಮುಂದಿನ ತಿಂಗಳು ನಡೆಯೋ ಏಷ್ಯಾಕಪ್‌ಗೆ 15 ಜನರ ತಂಡದಲ್ಲಿ ಸಂಜು ಸ್ಯಾಮ್ಸನ್ ಇದ್ದರೂ, ಆಡೋ ಹನ್ನೊಂದರಲ್ಲಿ ಅವ್ರಿಗೆ ಜಾಗ ಸಿಗೋ ಚಾನ್ಸ್ ಕಡಿಮೆ ಅಂತ ಮಾಜಿ ಭಾರತೀಯ ಆಟಗಾರ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ. ಶುಭ್‌ಮನ್ ಗಿಲ್ ಉಪನಾಯಕ ಆಗಿರೋದ್ರಿಂದ ಸಂಜು ಸ್ಥಾನ ಶೇಕ್ ಆಗಿದೆ ಅಂತ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ. ದುಃಖದ ಸಂಗತಿ ಏನಂದ್ರೆ, ಶುಭ್‌ಮನ್ ಗಿಲ್ ಉಪನಾಯಕ ಆದ್ಮೇಲೆ ಸಂಜುಗೆ ಆಡೋ ಹನ್ನೊಂದರಲ್ಲಿ ಜಾಗ ಸಿಗೋದು ಕಷ್ಟ ಆಗಿದೆ. ಸಂಜು ಆಡೋ ಹನ್ನೊಂದರಲ್ಲಿ ಆಡೋ ಚಾನ್ಸ್ ಕಡಿಮೆ. ಶುಭ್‌ಮನ್ ಗಿಲ್ ಓಪನರ್ ಆಗಿ ಆಡ್ತಾರೆ ಅಂತ ನಾನು ಭಾವಿಸ್ತೀನಿ ಎಂದು ಚೆನ್ನೈ ಮೂಲದ ಕ್ರಿಕೆಟರ್ ಹೇಳಿದ್ದಾರೆ.

ಸಂಜು ಸ್ಯಾಮ್ಸನ್ ಅವರನ್ನು ಓಪನರ್ ಮಾಡಿ ಗಿಲ್ ಮೂರನೇ ಸ್ಥಾನದಲ್ಲಿ ಆಡ್ತಾರೆ ಅಂತ ನನಗನಿಸುತ್ತಿಲ್ಲ. ಹಾಗೇನೇ ಸಂಜುನ ಮೊದಲ ನಾಲ್ಕು ಸ್ಥಾನದಲ್ಲಿ ಆಡಿಸದಿದ್ರೆ, ಆಡೋ ಹನ್ನೊಂದರಲ್ಲಿ ಅವ್ರಿಗೆ ಜಾಗ ಸಿಗೋದಿಲ್ಲ. ವಿಕೆಟ್ ಕೀಪರ್ ಆಗಿ ಜಿತೇಶ್ ಶರ್ಮಾ ಆಡ್ತಾರೆ. ಜಿತೇಶ್ ಐಪಿಎಲ್‌ನಲ್ಲಿ ಚೆನ್ನಾಗಿ ಆಡಿದ್ರು. ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್ ಏಷ್ಯಾಕಪ್ ತಂಡದಲ್ಲಿ ಇಲ್ಲದಿರೋದು ಬೇಸರದ ಸಂಗತಿ ಎಂದಿದ್ದಾರೆ. ಇನ್ನು ಇದೇ ವೇಳೆ ಶುಭ್‌ಮನ್ ಗಿಲ್ ಏಷ್ಯಾಕಪ್ ತಂಡದಲ್ಲಿ ಇರೋದನ್ನ ಅಶ್ವಿನ್ ಸಪೋರ್ಟ್ ಮಾಡಿದ್ದಾರೆ.

ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಪರ 600ಕ್ಕೂ ಹೆಚ್ಚು ರನ್ ಹೊಡೆದ ಗಿಲ್ ಟಿ20 ತಂಡದಲ್ಲಿರೋದಕ್ಕೆ ಅರ್ಹ ಅಂತ ಅಶ್ವಿನ್ ಹೇಳಿದ್ದಾರೆ. ಏಷ್ಯಾಕಪ್ ತಂಡ ಪ್ರಕಟ ಆದಾಗ, ಅಭಿಷೇಕ್ ಶರ್ಮಾ ಜೊತೆ ಯಾರು ಓಪನ್ ಮಾಡ್ತಾರೆ ಅನ್ನೋ ಪ್ರಶ್ನೆಗೆ, ದುಬೈನ ಪರಿಸ್ಥಿತಿ ನೋಡ್ಕೊಂಡು ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ನಿರ್ಧಾರ ಮಾಡ್ತಾರೆ ಅಂತ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಹೇಳಿದ್ರು. ಸಂಜುನ ಓಪನರ್ ಆಗಿ ತಂಡ ಪರಿಗಣಿಸ್ತಿದೆ ಅಂತಲೂ ಅಗರ್ಕರ್ ಹೇಳಿದ್ರು.

2024ರ ಜೂನ್ ನಂತರ ಶುಭ್‌ಮನ್ ಗಿಲ್ ಮತ್ತೆ ಟಿ20 ತಂಡಕ್ಕೆ ಬಂದಿದ್ದಾರೆ. ಮುಂದಿನ ತಿಂಗಳು 9ಕ್ಕೆ ಶುರುವಾಗೋ ಏಷ್ಯಾಕಪ್‌ನಲ್ಲಿ 10ಕ್ಕೆ ಯುಎಇ ವಿರುದ್ಧ ಭಾರತ ಮೊದಲ ಪಂದ್ಯ ಆಡುತ್ತೆ. 14ಕ್ಕೆ ಭಾರತ-ಪಾಕಿಸ್ತಾನ ಪಂದ್ಯ ನಡೆಯುತ್ತೆ. ಕಳೆದ ಆವೃತ್ತಿಯ ಏಷ್ಯಾಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಭಾರತ ಇದುವರೆಗೈ ಏಷ್ಯಾಕಪ್‌ನಲ್ಲಿ 8 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಬ್ಯಾಟರ್‌ಗಳು: ಸೂರ್ಯಕುಮಾರ್ ಯಾದವ್, ಶುಭ್‌ಮನ್ ಗಿಲ್, ಅಭಿಷೇಕ್ ಶರ್ಮಾ, ಶುಭ್‌ಮನ್ ಗಿಲ್ ಹಾಗೂ ತಿಲಕ್ ವರ್ಮಾ, ರಿಂಕು ಸಿಂಗ್

ವಿಕೆಟ್ ಕೀಪರ್‌: ಸಂಜು ಸ್ಯಾಮ್ಸನ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಬ್ಯಾಟರ್. ಎರಡನೇ ವಿಕೆಟ್ ಕೀಪರ್ ಬ್ಯಾಟರ್‌ ಸ್ಥಾನಕ್ಕೆ ಜಿತೇಶ್ ಶರ್ಮಾ.

ಆಲ್ರೌಂಡರ್: ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್.

ಬೌಲಿಂಗ್ ವಿಭಾಗ: ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಶದೀಪ್ ಸಿಂಗ್, ಹರ್ಷಿತ್ ರಾಣಾ.

ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ:

ಸೂರ್ಯಕುಮಾರ್ ಯಾದವ್(ನಾಯಕ), ಶುಭ್‌ಮನ್ ಗಿಲ್(ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್‌ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಕುಮಾರ್(ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಹರ್ಷಿತ್ ರಾಣಾ, ರಿಂಕು ಸಿಂಗ್.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!