
ಸಿಡ್ನಿ: ಕೊರೋನಾ ನಡುವೆ ಆಯೋಜಿಸಿರುವ ಭಾರತ ಮತ್ತು ಆಸ್ಪ್ರೇಲಿಯಾ ನಡುವಿನ ‘ಬಾಕ್ಸಿಂಗ್ ಡೇ’ ಟೆಸ್ಟ್ ಸರಣಿಯ ಪಂದ್ಯ ವೀಕ್ಷಣೆಗೆ 25,000 ಮಂದಿಗೆ ಅವಕಾಶ ಮಾಡಿಕೊಡಲು ಮೆಲ್ಬರ್ನ್ ಕ್ರಿಕೆಟ್ ಆಡಳಿತ ಮಂಡಳಿ (ಎಂಸಿಜಿ) ನಿರ್ಧರಿಸಿದೆ.
ನವೆಂಬರ್ 27ರಿಂದ ಜನವರಿ 19ರ ನಡುವೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ 4 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಮೆಲ್ಬರ್ನ್ ಅಂಗಣದಲ್ಲಿ ಒಂದು ಲಕ್ಷ ಮಂದಿ ಏಕಕಾಲದಲ್ಲಿ ಕುಳಿತು ಪಂದ್ಯ ವೀಕ್ಷಿಸುವ ಸಾಮರ್ಥ್ಯ ಹೊಂದಿದ್ದು, ಇದರಲ್ಲಿ ಕಾಲು ಭಾಗ ಅಂದರೆ ಶೇ.25ರಷ್ಟು ಮಂದಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ.
ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ರಾಹುಲ್ಗೆ ಉಪನಾಯಕ ಪಟ್ಟ!
ಇದರಿಂದ ಸಾಮಾಜಿಕ ಅಂತರಕ್ಕೂ ಸಹಕಾರಿ ಆಗಲಿದೆ. ಕೊರೋನಾ ನಿಯಮಗಳನ್ನೆಲ್ಲಾ ಅನುಸರಿಸಲಾಗುತ್ತದೆ ಎಂದು ಎಂಸಿಜಿ ತಿಳಿಸಿದೆ. ಭಾರತ ತಂಡ ಈ ಪ್ರವಾಸದ ವೇಳೆ 4 ಟೆಸ್ಟ್ ಹಾಗೂ ತಲಾ 3 ಏಕದಿನ ಮತ್ತು ಟಿ20 ಪಂದ್ಯಗಳನ್ನಾಡಲಿದೆ.
ರಾಹುಲ್ ಟೆಸ್ಟ್ ಆಯ್ಕೆ ಸಮರ್ಥಿಸಿದ ಶ್ರೀಕಾಂತ್
ಚೆನ್ನೈ(ಅ.29): ಆಸ್ಪ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತ ಟೆಸ್ಟ್ ತಂಡಕ್ಕೆ ಕೆ.ಎಲ್. ರಾಹುಲ್ ಆಯ್ಕೆಯನ್ನು ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ ಸಂಜಯ್ ಮಂಜ್ರೇಕರ್ ಬಾಂಬೆ ಮೀರಿ ಯೋಚಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ರಾಹುಲ್ ಟೆಸ್ಟ್ ತಂಡಕ್ಕೆ ಪರಿಗಣಿಸಿ, ರಣಜಿ ಆಟಗಾರರನ್ನು ಆಯ್ಕೆ ಮಾಡದ್ದರಿಂದ ಮಂಜ್ರೇಕರ್ ಆಯ್ಕೆ ಸಮಿತಿ ವಿರುದ್ಧ ಟೀಕೆ ಮಾಡಿದ್ದರು. ಐಪಿಎಲ್ನಲ್ಲಿನ ಪ್ರದರ್ಶನದ ಆಧಾರದ ಮೇಲೆ ರಾಹುಲ್ ಆಯ್ಕೆ ಮಾಡಿದ್ದು ಸರಿಯಲ್ಲ ಎಂದಿದ್ದರು. ಮಂಜ್ರೇಕರ್ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ರಾಹುಲ್ ಆಸೀಸ್ ವಿರುದ್ಧದ ಪಾದಾರ್ಪಣೆ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ರಾಹುಲ್ ವೇಗದ ಬೌಲಿಂಗ್ನ ಎದುರಿಸುವ ವಿಚಾರದಲ್ಲಿ ಉತ್ತಮ ಆಟಗಾರ ಎಂದು ಶ್ರೀಕಾಂತ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.