
ಬೆಳಗಾವಿ: ನಾಗರಪಂಚಮಿ ಎಂದರೆ ಭಕ್ತರಿಗೆ ವಿಶೇಷ ಸಂಭ್ರಮ. ಹುತ್ತಕ್ಕೆ ಹಾಲೆರೆದು ನಾಗದೇವನನ್ನು ಪೂಜಿಸುವ ಈ ದಿನದಂದು ಬೆಳಗಾವಿ ಜಿಲ್ಲೆಯ ಗೋಕಾಕನಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದೆ. ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿವಾಸದ ಆವರಣದಲ್ಲಿ ಪವಾಡವೊಂದು ನಡೆದಿದ್ದು, ಭಕ್ತರು ಬೆರಗಾಗಿದ್ದಾರೆ.
ನಾಗರಪಂಚಮಿ ಹಿನ್ನೆಲೆಯಲ್ಲಿ ಗೋಕಾಕ ನಗರದ ಎನ್ಎಸ್ಎಫ್ (NSF) ಹಿಂಭಾಗದಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಸಂಪ್ರದಾಯದಂತೆ ನಾಗರ ಕಲ್ಲಿಗೆ ಹಾಲೆರೆದು ಭಕ್ತಿಯಿಂದ ನಮಿಸಿದ್ದರು. ಆದರೆ ಪೂಜೆ ಮುಗಿಸಿ ಅವರು ಅಲ್ಲಿಂದ ತೆರಳಿದ ಕೆಲವೇ ಕ್ಷಣಗಳಲ್ಲಿ ಎಲ್ಲಿಂದಲೋ ಬಂದ ಜೀವಂತ ನಾಗರಹಾವೊಂದು ನಾಗದೇವರ ಕಲ್ಲಿನ ಬಳಿ ಪ್ರತ್ಯಕ್ಷವಾಗಿದೆ.
ನಾಗದೇವರ ಮೂರ್ತಿಯ ಬಳಿ ಬಂದ ನಾಗರಹಾವು ಅಲ್ಲಿ ಕೆಲಕಾಲ ಸಮಯ ಕಳೆದಿರುವುದು ಕಂಡುಬಂದಿದೆ. ಪೂಜೆ ಸಲ್ಲಿಕೆಯಾದ ಬೆನ್ನಲ್ಲೇ ಈ ರೀತಿ ನಾಗರಹಾವು ಬಂದಿರುವುದನ್ನು ಅಲ್ಲಿ ನೆರೆದಿದ್ದವರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ. ಸಾಕ್ಷಾತ್ ನಾಗದೇವನೇ ಪೂಜೆ ಸ್ವೀಕರಿಸಲು ಬಂದಿದ್ದಾನೆ ಎಂದು ಸ್ಥಳೀಯರು ಭಾವಪರವಶರಾಗಿದ್ದಾರೆ.
ಸದ್ಯ ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಜಾರಕಿಹೊಳಿ ಅಭಿಮಾನಿಗಳು ಹಾಗೂ ಭಕ್ತರು ಇದನ್ನು 'ನಾಗರಪಂಚಮಿಯ ಪವಾಡ' ಎಂದು ಬಣ್ಣಿಸುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.