ಸಯ್ಯದ್ ಮುಷ್ತಾಕ್‌ ಅಲಿ ಟೂರ್ನಿ: ಕ್ವಾರ್ಟರ್‌ ಫೈನಲ್‌ಗೇರಿದ ಕರ್ನಾಟಕ

Kannadaprabha News   | Asianet News
Published : Jan 20, 2021, 12:17 PM ISTUpdated : Jan 20, 2021, 12:23 PM IST
ಸಯ್ಯದ್ ಮುಷ್ತಾಕ್‌ ಅಲಿ ಟೂರ್ನಿ: ಕ್ವಾರ್ಟರ್‌ ಫೈನಲ್‌ಗೇರಿದ ಕರ್ನಾಟಕ

ಸಾರಾಂಶ

ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡವು ಪವಾಡಸದೃಶ ರೀತಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬೆಂಗಳೂರು(ಜ.20): ಕರುಣ್ ನಾಯರ್ ನೇತೃತ್ವದ ಹಾಲಿ ಚಾಂಪಿಯನ್ ಕರ್ನಾಟಕ ತಂಡಕ್ಕೆ ಅದೃಷ್ಟ ಕೈಹಿಡಿದಿದೆ. ಮುಷ್ತಾಕ್ ಅಲಿ ಟಿ20 ಟೂರ್ನಿಯ ಕ್ವಾರ್ಟರ್ ಫೈನಲ್‌ಗೆ ಹಾಲಿ ಚಾಂಪಿಯನ್ ತಂಡ ಪ್ರವೇಶ ಪಡೆದಿದೆ. 

‘ಎ’ ಗುಂಪಿನಲ್ಲಿದ್ದ ಕರ್ನಾಟಕ 5 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿ 16 ಅಂಕಗಳನ್ನು ಸಂಪಾದಿಸಿತ್ತು. ಆದರೆ ನೆಟ್ ರನ್‌ರೇಟ್ ವಿಚಾರದಲ್ಲಿ ತಂಡ ಹಿಂದೆ ಬಿದ್ದಿತ್ತು. ಹೀಗಾಗಿ ಕರ್ನಾಟಕ ಉಳಿದ 3 ಪಂದ್ಯಗಳ ಫಲಿತಾಂಶಕ್ಕಾಗಿ ಕಾಯಬೇಕಾದ ಪರಿಸ್ಥಿತಿ ಎದುರಾಗಿತ್ತು. ಮೂರೂ ಪಂದ್ಯಗಳ ಫಲಿತಾಂಶಗಳು ರಾಜ್ಯ ತಂಡದ ಪರವಾಗಿಯೇ ಬಂದಿದ್ದು ತಂಡದ ಅದೃಷ್ಟ. 

ಮುಷ್ತಾಕ್ ಅಲಿ ಟ್ರೋಫಿ: ಉತ್ತರ ಪ್ರದೇಶವನ್ನು ಬಗ್ಗುಬಡಿದ ಕರ್ನಾಟಕ

‘ಬಿ’ ಗುಂಪಿನ ಪಂದ್ಯದಲ್ಲಿ ಬಂಗಾಳ ವಿರುದ್ಧ ತಮಿಳುನಾಡು ಜಯಗಳಿಸಬೇಕಿತ್ತು. ತಮಿಳುನಾಡು 8 ವಿಕೆಟ್‌ಗಳಿಂದ ಜಯಿಸಿತು. ‘ಸಿ’ ಗುಂಪಿನಲ್ಲಿ ಸರ್ವೀಸಸ್ ವಿರುದ್ಧ ಮಧ್ಯಪ್ರದೇಶ 2 ರನ್ ಗಳಿಂದ ಜಯಿಸಿತು. ಆದರೆ ನೆಟ್ ರನ್ ರೇಟ್‌ನಲ್ಲಿ ಕರ್ನಾ ಟಕ(0.292)ಕ್ಕಿಂತ ಹಿಂದೆ ಬಿತ್ತು. ಮಧ್ಯ ಪ್ರದೇಶ 5 ಪಂದ್ಯಗಳ ಮುಕ್ತಾಯಕ್ಕೆ 16 ಅಂಕ ಗಳಿಸಿ 0.285 ನೆಟ್ ರನ್‌ರೇಟ್ ಹೊಂದಿದೆ. ಇನ್ನು ‘ಡಿ’ ಗುಂಪಿನಲ್ಲಿ ಕೇರಳ ವಿರುದ್ಧ ಹರ್ಯಾಣ ಗೆಲ್ಲಬೇಕಿತ್ತು. ಹರ್ಯಾಣ 4 ರನ್‌ಗಳ ರೋಚಕ ಜಯ ಸಾಧಿಸಿತು. ಗುಂಪು ಹಂತದಲ್ಲಿ ಕರ್ನಾಟಕ ನಿರೀಕ್ಷಿತ ಆಟ ಪ್ರದರ್ಶಿಸಲಿಲ್ಲ. ಕ್ವಾರ್ಟರ್‌ನಲ್ಲಿ ತಂಡದಿಂದ ಸುಧಾರಿತ ಪ್ರದರ್ಶನ ನಿರೀಕ್ಷಿಸಲಾಗಿದೆ.   

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?