
ಮುಂಬೈ(ಏ.15): ನಾಯಕ ರಿಷಬ್ ಪಂತ್ ಸಿಡಿಸಿದ ಹಾಫ್ ಸೆಂಚುರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕಾಪಾಡಿತು. ಹೀಗಾಗಿ ಅಂತಿಮ ಹಂತದಲ್ಲಿನ ಬಿರುಸಿನ ಬ್ಯಾಟಿಂಗ್ನಿಂದ ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ ರಾಯಲ್ಸ್ ವಿರುದ್ಧ 8 ವಿಕೆಟ್ ನಷ್ಟಕ್ಕೆ 147 ರನ್ ಸಿಡಿಸಿದೆ. ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ಶಕ್ತಿಗೆ ಇದು ಸುಲಭ ಟಾರ್ಗೆಟ್ ಆಗಿದೆ.
ಕಳೆದ ಪಂದ್ಯದಲ್ಲಿ ಅಬ್ಬರಿಸಿದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ದಿಢೀರ್ ವಿಕೆಟ್ ಕೈಚೆಲ್ಲಿದರು. ಪೃಥ್ವಿ 2 ರನ್ ಹಾಗೂ ಧವನ್ 9 ರನ್ ಸಿಡಿಸಿ ಔಟಾದರು. ಅಜಿಂಕ್ಯ ರಹಾನೆ 8 ರನ್ ಸಿಡಿಸಿ ಔಟಾದರು. ಆದರೆ ನಾಯಕ ರಿಷಬ್ ಪಂತ್ ದಿಟ್ಟ ಹೋರಾಟ ನೀಡಿದರು. ಇತರ ಬ್ಯಾಟ್ಸ್ಮನ್ಗಳಿಂದ ಉತ್ತಮ ಸಾಥ್ ಸಿಗಲಿಲ್ಲ.
ಮಾರ್ಕಸ್ ಸ್ಟೊಯ್ನಿಸ್ ಡಕೌಟ್ ಆದರೆ, ಲಲಿತ್ ಯಾದವ್ 20 ರನ ಸಿಡಿಸಿ ಔಟಾದರು. ಇತ್ತ ಪಂತ್ ಹಾಫ್ ಸೆಂಚುರಿ ಸಿಡಿಸಿದರು ಆದರೆ 51 ರನ್ ಸಿಡಿಸಿದ ಪಂತ್ ರನೌಟ್ಗೆ ಬಲಿಯಾದರು. ಟಾಮ್ ಕುರನ್ 21 ರನ್ ಕಾಣಿಕೆ ನೀಡಿದರು ಆರ್ ಅಶ್ವಿನ್ 7, ಕ್ರಿಸ್ ವೋಕ್ಸ್ ಅಜೇಯ 15 ರನ್ ಕಾಗಿಸೋ ರಬಾಡ ಅಜೇಯ 9 ರನ್ ಸಿಡಿಸಿದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್ ನಷ್ಟಕ್ಕೆ 147 ರನ್ ಸಿಡಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.