6, 6, 6, 6: ಒಂದೇ ಓವರ್‌ನಲ್ಲಿ 4 ಭರ್ಜರಿ ಸಿಕ್ಸರ್‌! ಕೋಚ್ ಗಂಭೀರ್ ಮೆಚ್ಚುಗೆ ಪಡೆದ ಭಾರತೀಯ ಬೌಲರ್!

Published : Aug 09, 2026, 09:32 PM IST
gurnoor brar and gautam gambhir

ಸಾರಾಂಶ

ಶ್ರೀಲಂಕಾ ಕ್ರಿಕೆಟ್ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದೆ. ಗುರ್ನೂರ್ ಬ್ರಾರ್ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ದೇವದತ್ ಪಡಿಕ್ಕಲ್ ಅವರ ಜವಾಬ್ದಾರಿಯುತ ಶತಕ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಕೆಳಕ್ರಮಾಂಕದ ಬ್ಯಾಟರ್‌ಗಳ ಕೊಡುಗೆಯೂ ಗಮನಾರ್ಹವಾಗಿದ್ದು, ಮುಂಬರುವ ಟೆಸ್ಟ್ ಸರಣಿಗೆ ಇದು ಉತ್ತಮ ಮುನ್ಸೂಚನೆ ನೀಡಿದೆ.

ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದ ಎರಡನೇ ದಿನ ಭಾರತ ತಂಡಕ್ಕೆ ಹಲವು ಧನಾತ್ಮಕ ಅಂಶಗಳು ಲಭಿಸಿವೆ. ವಿಶೇಷ ಅಂದ್ರೆ ವೇಗದ ಬೌಲಿಂಗ್‌ಗೆ ಹೆಸರಾಗಿರುವ ಗುರ್ನೂರ್ ಬ್ರಾರ್, ಬ್ಯಾಟಿಂಗ್‌ನಲ್ಲಿ ಎಲ್ಲರನ್ನೂ ಚಕಿತಗೊಳಿಸಿದರು. ಕೇವಲ 18 ಎಸೆತಗಳನ್ನು ಎದುರಿಸಿದ ಬ್ರಾರ್, 4 ಭರ್ಜರಿ ಸಿಕ್ಸರ್ ಹಾಗೂ 2 ಬೌಂಡರಿಗಳ ನೆರವಿನಿಂದ ಅಜೇಯ 36 ರನ್ ಚಚ್ಚಿದರು.

ಗಂಭೀರ್ ಫುಲ್ ಖುಷ್

ನಿನ್ನೆ ದಿನದ ಕೊನೆಯ ಓವರ್‌ನಲ್ಲಿ ಶ್ರೀಲಂಕಾದ ಸ್ಪಿನ್ನರ್ ದಿಲುಮ್ ಸುದೀರ ಬೌಲಿಂಗ್ ಗುರಿಯಾಗಿಸಿಕೊಂಡ ಬ್ರಾರ್, ಒಂದೇ ಓವರ್‌ನಲ್ಲಿ 4 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ 25 ರನ್ ಬಾಚಿಕೊಂಡರು. ಬ್ರಾರ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ನೋಡಿ ಹೆಡ್ ಕೋಚ್ ಗೌತಮ್ ಗಂಭೀರ್ ನಗುತ್ತಾ ಚಪ್ಪಾಳೆ ತಟ್ಟುವ ಮೂಲಕ ಹರ್ಷ ವ್ಯಕ್ತಪಡಿಸಿದರು. ಕೆಳಕ್ರಮಾಂಕದಲ್ಲಿ ಬ್ರಾರ್ ಸ್ಫೋಟಕ ಆಟ ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ.

ಒಂದೆಡೆ ಬ್ರಾರ್ ಮನರಂಜನೆ ನೀಡಿದರೆ, ಮತ್ತೊಂದೆಡೆ ದೇವದತ್ ಪಡಿಕ್ಕಲ್ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಸಾಯಿ ಸುದರ್ಶನ್ ಗಾಯದ ಕಾರಣ ಟೆಸ್ಟ್ ಸರಣಿಯಿಂದ ಹೊರಬಿದ್ದಿರುವುದರಿಂದ, ಮೂರನೇ ಕ್ರಮಾಂಕಕ್ಕೆ ಪಡಿಕ್ಕಲ್ ಪ್ರಬಲ ಸ್ಪರ್ಧಿಯಾಗಿದ್ದಾರೆ. ಈ ಪಂದ್ಯದಲ್ಲಿ ಅಜೇಯ 142 ರನ್ ಗಳಿಸುವ ಮೂಲಕ ಅವರು ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ. ತಾಳ್ಮೆಯಿಂದ ಬ್ಯಾಟ್ ಬೀಸಿದ ಪಡಿಕ್ಕಲ್, ಲಂಕಾ ಬೌಲರ್‌ಗಳನ್ನು ದಂಡಿಸುವ ಮೂಲಕ ಆಯ್ಕೆಗಾರರ ಗಮನ ಸೆಳೆದಿದ್ದಾರೆ.

ಮತ್ತೊಂದು ಸಮಾಧಾನದ ವಿಷಯ ಏನೆಂದರೆ ಕೆಳಕ್ರಮಾಂಕದ ಬ್ಯಾಟರ್‌ಗಳ ಕೊಡುಗೆ. ರವೀಂದ್ರ ಜಡೇಜಾ 63 ರನ್ ಗಳಿಸಿದರೆ, ಸುತಾರ್ 41 ರನ್ ಗಳಿಸಿ ಪಡಿಕ್ಕಲ್‌ಗೆ ಉತ್ತಮ ಸಾಥ್ ನೀಡಿದರು. ಟೆಸ್ಟ್ ಪಂದ್ಯಗಳಲ್ಲಿ ಕೆಳಕ್ರಮಾಂಕದ ರನ್‌ಗಳು ಪಂದ್ಯದ ಗತಿಯನ್ನೇ ಬದಲಿಸಬಲ್ಲವು ಎಂಬುದಕ್ಕೆ ಇವರ ಆಟ ಸಾಕ್ಷಿಯಾಯಿತು.

ಇಷ್ಟೆಲ್ಲಾ ಪಾಸಿಟಿವ್ ಅಂಶಗಳ ನಡುವೆ ರಿಷಭ್ ಪಂತ್ ಮತ್ತು ಧ್ರುವ್ ಜುರೆಲ್ ಅವರ ವಿಕೆಟ್‌ಗಳು ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಿವೆ. ಶ್ರೀಲಂಕಾದ ಸ್ಪಿನ್ ಪಿಚ್‌ಗಳಲ್ಲಿ ಭಾರತೀಯ ಬ್ಯಾಟರ್‌ಗಳು ಹೆಚ್ಚು ಜಾಗರೂಕತೆಯಿಂದ ಆಡಬೇಕಾದ ಅಗತ್ಯವಿದೆ. ಆಗಸ್ಟ್ 15 ರಿಂದ ಗಾಲೆನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಈ ಅಭ್ಯಾಸ ಪಂದ್ಯವು ಸ್ಪಿನ್ ಎದುರಿಸಲು ಭಾರತಕ್ಕೆ ಉತ್ತಮ ತಾಲೀಮು ನೀಡಿದೆ. ಒಟ್ಟಾರೆಯಾಗಿ ಪಡಿಕ್ಕಲ್ ಅವರ ಶತಕ ಮತ್ತು ಬ್ರಾರ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಮುಂಬರುವ ಟೆಸ್ಟ್ ಸರಣಿಗೆ ಭಾರತದ ಆತ್ಮವಿಶ್ವಾಸ ಹೆಚ್ಚಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

KL ರಾಹುಲ್ ಅಲ್ಲ.. ಹೆಚ್ಚು ಬಾರಿ ರನ್ ಔಟ್ ಆದ ಬ್ಯಾಟ್ಸಮನ್‌ಗಳ ಪಟ್ಟಿಯಲ್ಲಿ ಕನ್ನಡಿಗನಿಗೆ ಟಾಪ್ 2 ಸ್ಥಾನ
ಗಂಭೀರ್‌ಗೂ ಮೊದಲು ಲಕ್ಷ್ಮಣ್‌ಗೆ ಟೀಂ ಇಂಡಿಯಾ ಕೋಚ್ ಆಫರ್ ನೀಡಿದ್ದ ಬಿಸಿಸಿಐ, ಕೈತಪ್ಪಿದ್ದೆಲ್ಲಿ?