ಭಾರತ vs ಆಫ್ಘನ್ 2ನೇ ಟಿ20: ಮೈದಾನದಲ್ಲಿ ನಡೆದಿದ್ದೇನು?

Naveen Kodase   | Kannada Prabha
Published : Sep 16, 2026, 09:53 AM IST
Sanju Samson

ಸಾರಾಂಶ

ಅಫ್ಘಾನಿಸ್ತಾನ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಭಾರತ ಕೈವಶಪಡಿಸಿಕೊಂಡಿದೆ. ಆಫ್ಘನ್ ನೀಡಿದ್ದ 159 ರನ್‌ಗಳ ಗುರಿಯನ್ನು ಭಾರತ ಕೇವಲ 14.5 ಓವರ್‌ಗಳಲ್ಲಿ ತಲುಪಿತು.

ನವದೆಹಲಿ: ಬೌಲರ್‌ಗಳ ಬಿಗು ದಾಳಿ ಬಳಿಕ ಸಂಜು ಸ್ಯಾಮ್ಸನ್‌ ಸ್ಫೋಟಕ ಆಟಕ ನೆರವಿನಿಂದ ಭಾರತ ತಂಡ ಆತಿಥೇಯ ಅಫ್ಘಾನಿಸ್ತಾನ ವಿರುದ್ಧ 2ನೇ ಟಿ20 ಪಂದ್ಯದಲ್ಲಿ 7 ವಿಕೆಟ್‌ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕೈವಶಪಡಿಸಿಕೊಂಡಿದೆ.

ಮೊದಲು ಬ್ಯಾಟ್‌ ಮಾಡಿದ ಆಫ್ಘನ್‌ 8 ಓವರ್‌ಗಳಲ್ಲಿ 159 ರನ್‌ ಗಳಿಸಿತು. ನಾಯಕ ಇಬ್ರಾಹಿಂ ಜದ್ರಾನ್‌ 37, ದರ್ವಿಶ್‌ ರಸೂಲಿ 26, ರಶೀದ್‌ ಖಾ್‌ 16 ಎಸೆತಕ್ಕೆ 28, ನಬಿ 20 ರನ್‌ ಬಾರಿಸಿದರು. ನಿತೀಶ್‌ ಕುಮಾರ್‌ 3, ಅರ್ಶ್‌ದೀಪ್‌ ಸಿಂಗ್‌ 2 ವಿಕೆಟ್‌ ಪಡೆದರು.

ಸ್ಪೋಟಕ ಅರ್ಧಶತಕ ಚಚ್ಚಿದ ಸಂಜು ಸ್ಯಾಮ್ಸನ್

ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತಕ್ಕೆ ಅಭಿಷೇಕ್‌ ಶರ್ಮಾ-ಸಂಜು ಸ್ಯಾಮ್ಸನ್‌ ಆಸರೆಯಾದರು. ಈ ಜೋಡಿ ಮೊದಲ ವಿಕೆಟ್‌ಗೆ 6.2 ಓವರ್‌ಗಳಲ್ಲೇ 88 ರನ್‌ ಸೇರಿಸಿತು. ಅಭಿಷೇಕ್‌ 19 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್‌ನೊಂದಿಗೆ 39 ರನ್‌ ಗಳಿಸಿ ಔಟಾದರೆ, ಸಂಜು 22 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್‌ನೊಂದಿಗೆ 57 ರನ್‌ ಚಚ್ಚಿದರು. ಇಶಾನ್‌ ಕಿಶನ್‌ 23 ಎಸೆತಕ್ಕೆ 38 ರನ್‌ ಕೊಡುಗೆ ನೀಡಿದರು. ತಂಡ 14.5 ಓವರ್‌ಗಳಲ್ಲೇ ಗೆಲುವಿನ ದಡ ಸೇರಿತು. ರಶೀದ್‌ 3 ವಿಕೆಟ್‌ ಕಿತ್ತರು.

ಸ್ಕೋರ್‌: ಅಫ್ಘಾನಿಸ್ತಾನ 20 ಓವರಲ್ಲಿ 159/8 (ಜದ್ರಾನ್‌ 37, ರಶೀದ್‌ 28, ನಿತೀಶ್‌ 3-24, ಅರ್ಶ್‌ದೀಪ್‌ 2-35), ಭಾರತ 14.5 ಓವರಲ್ಲಿ 163/3 (ಸಂಜು 57, ಅಭಿಷೇಕ್‌ 39, ಇಶಾನ್‌ ಔಟಾಗದೆ 38, ರಶೀದ್‌ 3-36)

10ನೇ ಸೋಲು: ಆಫ್ಘನ್‌ಗೆ ಇದು ಭಾರತ ವಿರುದ್ಧ ಸತತ 10ನೇ ಟಿ20 ಸೋಲು. ಇದು ಭಾರತ ವಿರುದ್ಧ ಯಾವುದೇ ತಂಡಗಳ ಪೈಕಿ ಗರಿಷ್ಠ.

09ನೇ ಬಾರಿ: 2024ರ ಟಿ20 ವಿಶ್ವಕಪ್‌ ಬಳಿಕ ಭಾರತ ಟಿ20 ಪಂದ್ಯದ ಪವರ್‌ಪ್ಲೇನಲ್ಲಿ 9 ಬಾರಿ 75ಕ್ಕೂ ಹೆಚ್ಚು ರನ್‌ ಗಳಿಸಿದೆ. ಇದು ದಾಖಲೆ.

ಗಾಯ: ವರುಣ್‌ ಆಫ್ಘನ್ ಸರಣಿಯಿಂದಲೇ ಹೊರಕ್ಕೆ, ಏಷ್ಯಾಡ್‌ಗೂ ಅನುಮಾನ

ನವದೆಹಲಿ: ಭಾರತದ ತಾರಾ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಮತ್ತೊಮ್ಮೆ ಗಾಯಗೊಂಡಿದ್ದು, ಸದ್ಯ ನಡೆಯುತ್ತಿರುವ ಅಫ್ಘಾನಿಸ್ತಾನ ವಿರುದ್ಧ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಅವರು ಮುಂಬರುವ ಏಷ್ಯನ್‌ ಗೇಮ್ಸ್‌ನಲ್ಲೂ ಆಡುವುದು ಅನುಮಾನವೆನಿಸಿದೆ. ಇಂಗ್ಲೆಂಡ್‌ ಸರಣಿಯಲ್ಲಿ ಗಾಯಗೊಂಡಿದ್ದ ವರುಣ್‌ ಇತ್ತೀಚೆಗಷ್ಟೇ ಚೇತರಿಸಿಕೊಂಡಿದ್ದರು. ಅಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ 4 ಓವರ್‌ನಲ್ಲಿ 16 ರನ್‌ ನೀಡಿ 1 ವಿಕೆಟ್‌ ಪಡೆದಿದ್ದರು. ಆದರೆ ಪಂದ್ಯದಲ್ಲಿ ಸ್ನಾಯುಸೆಳೆತಕ್ಕೆ ಒಳಗಾದ ಅವರು ಸರಣಿಯಿಂದಲೇ ಹೊರಬಿದ್ದಿದ್ದಾರೆ. ಸೆ.19ರಿಂದ ಏಷ್ಯನ್‌ ಗೇಮ್ಸ್‌ ಆರಂಭಗೊಳ್ಳಲಿದ್ದು, ಅದಕ್ಕೂ ಮುನ್ನ ವರುಣ್‌ ಚೇತರಿಸಿಕೊಳ್ಳುವುದು ಅನುಮಾನ. ಹೀಗಾಗಿ ಕೂಟದ ಕ್ರಿಕೆಟ್‌ಗೂ ಅವರು ಗೈರಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೋಹಿತ್ ಶರ್ಮಾ ಜೊತೆ ಡೇಟಿಂಗ್ ಮಾಡಿದ್ದೆ; ಆದರೆ... ಬೆಡ್‌ರೂಮ್ ಅನುಭವದ ಬಗ್ಗೆ ನಟಿ ಸೋಫಿಯಾ ಹಯಾತ್ ಶಾಕಿಂಗ್ ಹೇಳಿಕೆ
Cricket: ಧರ್ಮಕ್ಕಿಂತ ಭಕ್ತಿಯೇ ದೊಡ್ಡದು!: ಬೆದರಿಕೆ ನಡುವೆಯೂ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಬಾಂಗ್ಲಾ ಕ್ರಿಕೆಟಿಗ, ಪೋಟೋ ವೈರಲ್‌!